ಗಣಿ ನಾಡಿಗೆ ಸರ್ಕಾರ ಕೊಟ್ಟದ್ದೆಷ್ಟು? ಬಾಕಿ ಉಳಿದದ್ದೆಷ್ಟು?
ಬೆಂಗಳೂರು, ಏಪ್ರಿಲ್ 12: ಗಣಿ ನಾಡು ಬಳ್ಳಾರಿ ಅದಿರಿನ ಕಾರಣದಿಂದ ಶ್ರೀಮಂತ. ಇಲ್ಲಿನ ಗಣಿ ಮಾಲೀಕರು ಅದರ ಲಾಭ ಪಡೆದು ಸಿರಿವಂತರಾದರು. ಒಂದು ಕಾಲದಲ್ಲಿ ಚಿನ್ನದ ಆಭರಣಗಳನ್ನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲಾಗುತ್ತಿತ್ತು ಎನ್ನಲಾದ ವಿಜಯನಗರ ಸಾಮ್ರಾಜ್ಯದ ಸಮೃದ್ಧಿಯನ್ನು ಕಂಡಿದ್ದ ಜಿಲ್ಲೆಯಿದು.
ಬದಲಾದ ಕಾಲದಲ್ಲಿ ಇಲ್ಲಿನ ಸನ್ನಿವೇಶವೂ ಬದಲಾಗಿದೆ. ಗಣಿ ಸಂಪತ್ತಿನ ಹಿಂಬದಿಯಲ್ಲಿ ಇತಿಹಾಸದ ವೈಭವವನ್ನು ಮರೆಮಾಚುವಂತೆ 'ದೂಳು' ಆವರಿಸಿದೆ.
ಇಲ್ಲಿನ ಕೊರತೆಗಳನ್ನು ಸರಿಪಡಿಸಲು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಇಲ್ಲಿನ ಶಾಸಕರು, ತಮಗೆ ಬಂದ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ಎಷ್ಟು ಹಣವನ್ನು ಬಳಸಿಕೊಂಡಿದ್ದಾರೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಹುಡುಕಿದಾಗ, ಒನ್ ಇಂಡಿಯಾಕ್ಕೆ ದೊರೆತ ಮಾಹಿತಿ ಹೀಗಿದೆ.

ಶಾಸಕರ ಅಭಿವೃದ್ಧಿ ನಿಧಿಯ ಅನುದಾನ ಭಾರಿ ಪ್ರಮಾಣದಲ್ಲಿ ಬಳಕೆಯಾಗಿದೆ ಕೊಳೆಯುತ್ತಿದೆ ಎನ್ನುತ್ತವೆ ವರದಿಗಳು. ಹಲವು ಶಾಸಕರು ಬಿಡುಗಡೆಯಾದ ಅನುದಾನವನ್ನು ಬಳಸಿಕೊಳ್ಳಲು ಯೋಜನಾಪಟ್ಟಿಯನ್ನೇ ಸಲ್ಲಿಸಿರುವುದಿಲ್ಲ. ಆದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಅನುದಾನವನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಎಲ್ಲ ಶಾಸಕರೂ ಅನುದಾನವನ್ನು ಬಹುತೇಕ ಬಳಸಿಕೊಂಡಿರುವುದು ವಿಶೇಷ. ಸರ್ಕಾರ ನೀಡಿರುವ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.
ಬಾಕಿ ಇರುವ ಅನುದಾನ ಶೂನ್ಯ!
ವಿವಿಧ ಶಾಸಕರು ಅನುದಾನ ಬಳಕೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದರೆ, ಬಳ್ಳಾರಿ ಜಿಲ್ಲೆಯ ಶಾಸಕರು ಪೈಪೋಟಿಗೆ ಬಿದ್ದವರಂತೆ ಅನುದಾನ ಬಳಕೆ ಮಾಡಿದ್ದಾರೆ.
ಸಿರಗುಪ್ಪ ಶಾಸಕ, ಕಾಂಗ್ರೆಸ್ನ ಬಿ.ಎನ್. ನಾಗರಾಜ್ ಮುಂಚೂಣಿಯಲ್ಲಿದ್ದಾರೆ. 2013ರಿಂದ 2017-18ನೇ ಸಾಲಿನವರೆಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸಂಪೂರ್ಣ ಹಣವನ್ನು ವಿವಿಧ ಕಾಮಗಾರಿಗಳಿಗೆ ತೊಡಗಿಸಿ ಅವರು ಪ್ರಸ್ತಾವ ಸಲ್ಲಿಸಿದ್ದಾರೆ.
ಐದೂ ಅವಧಿಯಲ್ಲಿ ಅವರು ಅನುದಾನದಲ್ಲಿ ಒಂದು ಪೈಸೆ ಹಣವನ್ನೂ ಬಾಕಿ ಉಳಿಸಿಕೊಂಡಿಲ್ಲ. ವಿಧಾನಪರಿಷತ್ ಸದಸ್ಯರು ಸೇರಿದಂತೆ ಇತರೆ ಯಾವ ಶಾಸಕರೂ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ವಿವಿಧ ಕ್ಷೇತ್ರಗಳ ಶಾಸಕರು ಕೋಟ್ಯಂತರ ರೂಪಾಯಿ ಅನುದಾನ ಬಳಸಿಕೊಳ್ಳದೆ ಬಾಕಿ ಉಳಿಸಿಕೊಂಡಿದ್ದರೆ, ಬಳ್ಳಾರಿಯ ಶಾಸಕರು ಕೆಲವೇ ಲಕ್ಷಗಳಷ್ಟು ಹಣ ಉಳಿಸಿಕೊಂಡಿದ್ದಾರೆ.
ಬಿಡುಗಡೆಯಾಗಿದ್ದು ಎಷ್ಟು ಹಣ, ಬಾಕಿ ಇರುವುದೆಷ್ಟು?
2013ರಲ್ಲಿ ಬಿಡುಗಡೆಯಾದ ಹಣ 19.59 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.74 ಕೋಟಿ.
2014ರಲ್ಲಿ ಬಿಡುಗಡೆಯಾದ ಹಣ 20 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.97 ಕೋಟಿ.
2015ರಲ್ಲಿ ಬಿಡುಗಡೆಯಾದ ಹಣ 20 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 19.95 ಕೋಟಿ.
2016ರಲ್ಲಿ ಬಿಡುಗಡೆಯಾದ ಹಣ 22 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 21.82 ಕೋಟಿ.
2017ರಲ್ಲಿ ಬಿಡುಗಡೆಯಾದ ಹಣ 22 ಕೋಟಿ. ಶಾಸಕರು ಪ್ರಸ್ತಾಪಿಸಿದ ಕಾಮಗಾರಿಗಳ ವೆಚ್ಚ 18.21 ಕೋಟಿ.
ಕಂಪ್ಲಿ ಶಾಸಕ ಸುರೇಶ್ ಬಾಬು 2013ರಲ್ಲಿ 4.87 ಲಕ್ಷ, 2016ರಲ್ಲಿ 4.66 ಲಕ್ಷ ಮತ್ತು 2017ನೇ ಸಾಲಿನಲ್ಲಿ 80 ಸಾವಿರ ರೂಪಾಯಿ ಅನುದಾನ ಉಳಿಸಿಕೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾ ನಾಯ್ಕ್, 2014ನೇ ಸಾಲಿನಲ್ಲಿ 1.44 ಲಕ್ಷ ಬಳಕೆ ಮಾಡಿಕೊಂಡಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಒಟ್ಟಾರೆ 8 ಲಕ್ಷ ಅನುದಾನವನ್ನು ಉಳಿಸಿಕೊಂಡಿದ್ದಾರೆ.
ಅತಿ ಹೆಚ್ಚು ಅನುದಾನ ಬಾಕಿ ಉಳಿಸಿಕೊಂಡಿರುವವರ ಸಾಲಿನಲ್ಲಿ ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರ ಹೆಸರಿದೆ. 2017ನೇ ಸಾಲಿಗೆ ಅವರು 1.29 ಕೋಟಿ ಮೊತ್ತ ಉಳಿಸಿಕೊಂಡಿದ್ದಾರೆ. 2015ರಲ್ಲಿ 1.48 ಲಕ್ಷ, 2016ರಲ್ಲಿ 2.85 ಲಕ್ಷ ಖರ್ಚಾಗದೆ ಉಳಿದಿದೆ.
ವಿಧಾನರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ 2017-18ನೇ ಸಾಲಿನಲ್ಲಿ 1.04 ಕೋಟಿ ಅನುದಾನಕ್ಕೆ ಇನ್ನೂ ಪ್ರಸ್ತಾವ ಸಲ್ಲಿಸಿಲ್ಲ. ಅಲ್ಲಂ ವೀರಭದ್ರಪ್ಪ 1.23 ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದ್ದಾರೆ.
ಐದು ವರ್ಷದ ಅವಧಿಯಲ್ಲಿ 9 ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ಒಟ್ಟಾರೆ 4.10 ಕೋಟಿ ರೂಪಾಯಿ ಅನುದಾನ ಉಳಿಸಿಕೊಂಡಿದ್ದಾರೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications