ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!
ಅಹಮದಾಬಾದ್, ಫೆಬ್ರವರಿ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿಯಾದ ಸಂದರ್ಭದಲ್ಲಿ ಎಲ್ಲವೂ ಸ್ವಚ್ಛ, ಸುಂದರವಾಗಿ ಕಾಣವಂತೆ ಮಾಡಬೇಕು ಎಂಬ ಉದ್ದೇಶದಿಂದ ಅಹಮದಾಬಾದ್ ನಗರಸಭೆ ಗೋಡೆಯನ್ನು ನಿರ್ಮಾಣ, ಪಾನ್ ಅಂಗಡಿ ಬಂದ್, ಬೀದಿ ನಾಯಿ ಮಾಯ ಮಾಡಿದ್ದು, ಈಗ ಮೊಟೆರಾ ಸ್ಟೇಡಿಯಂ ಸುತ್ತಾ ಮುತ್ತಾ ಕಣ್ಣು ಹಾಕಿದೆ.
ಟ್ರಂಪ್ ಉದ್ಘಾಟಿಸಲಿರುವ ಬೃಹತ್ ಮೈದಾನದ ಸುತ್ತಾ ಮುತ್ತಾ ಯಾವುದೇ ಸ್ಲಂ ಇಲ್ಲದಂತೆ ನೋಡಿಕೊಳ್ಳಲು ಅಹಮದಾಬಾದ್ ನಗರ ಸಭೆ ಮುಂದಾಗಿದೆ. ಸ್ಲಂಗಳಲ್ಲಿ ವಾಸವಿದ್ದ 45 ಕುಟುಂಬಗಳನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಈಗಾಗಲೇ ಸ್ಲಂ ಕಾಣದಂತೆ ಗೋಡೆ ನಿರ್ಮಿಸಲಾಗುತ್ತಿದೆ. ಆದರೂ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಏಕೆ ಎಂದು ಪ್ರಶ್ನಿಸಲಾಗಿದೆ.
ಅಹಮದಾಬಾದ್ ನಗರ ಪಾಲಿಕೆಗೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದೀರಿ, ಹಾಗಾಗಿ, ಈ ಜಾಗವನ್ನು ತ್ವರಿತವಾಗಿ ಖಾಲಿ ಮಾಡಿ ಎಂದು ಅದೇಶದಲ್ಲಿ ತಿಳಿಸಲಾಗಿದೆ. ಫೆಬ್ರವರಿ 19ರಂದು ಬೆಳಗ್ಗೆ ಸ್ಲಂ ತೆರವು ಕಾರ್ಯಾಚರಣೆ ನಡೆಯಲಿದೆ.

ಅಹಮದಾಬಾದ್ ನಿಂದ ಗಾಂಧಿನಗರ ಮಾರ್ಗದಲ್ಲಿ ಕೊಳಗೇರಿಗಳಿದ್ದು, ಮೊಟೆರಾ ಸ್ಟೇಡಿಯಂನಿಂದ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿದೆ.
"ದಶಕಗಳಿಂದ ನಾವು ಇಲ್ಲಿ ನೆಲೆಸಿದ್ದೆವೆ, ಯಾರೂ ಇಲ್ಲಿ ತನಕ ನಾವು ಅತಿಕ್ರಮಣ ಮಾಡಿದ್ದೇವೆ ಎಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಜಾಗ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ. ನೋಟಿಸ್ ಈಗ ಯಾಕೆ ಕೊಟ್ಟಿದ್ದಾರೆ'' ಎಂದು ದಿನಗೂಲಿ ಕಾರ್ಮಿಕ ದಿನೇಶ್ ಅದ್ರಾವಾನಿ ಪ್ರಶ್ನಿಸಿದ್ದಾರೆ.
ನಮಗೆ ಎಲ್ಲೂ ಶಾಶ್ವತ ನೆಲೆ ಎಂಬುದಿಲ್ಲ. ಆದ್ರೆ, ಸರ್ಕಾರ ಸ್ಲಂ ತೆರವುಗೊಳಿಸುವ ಮೊದಲು ಬದಲಿ ವಸತಿ ವ್ಯವಸ್ಥೆ ಕಲ್ಪಿಸಬೇಕಲ್ಲವೇ? ಮಕ್ಕಳು, ಮಹಿಳೆಯರನ್ನು ಕರೆದುಕೊಂಡು ಬೀದಿಯಲ್ಲಿ ವಾಸಿಸಲು ಆಗುತ್ತದೆಯೇ? ಎಂದು ಸ್ಲಂ ನಿವಾಸಿ ಶೈಲೇಶ್ ಬಿಲ್ವಾ ನೋವಿನಿಂದ ನುಡಿದಿದ್ದಾರೆ.
''ನಗರೋತ್ಥಾನ ಯೋಜನೆಯಡಿಯಲ್ಲಿ ಸ್ಲಂ ತೆರವುಗೊಳಿಸಲಾಗುತ್ತಿದೆ. ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೂ ನೋಟಿಸ್ ಗೂ ಸಂಬಂಧವಿಲ್ಲ. ಇದು ಎಎಂಸಿಗೆ ಸೇರಿದ ಜಾಗ, ಅತಿಕ್ರಮಣ ನಡೆದಿದೆ. ಅದನ್ನು ವಶಪಡಿಸಿಕೊಳ್ಳಲಾಗುತ್ತಿದೆ"ಎಂದು ಎಎಂಸು ಅಧಿಕಾರಿ ಚೈತನ್ಯ ಶಾ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications