Get Updates
Get notified of breaking news, exclusive insights, and must-see stories!

ತಾಜ್‌ಮಹಲ್‌ನಲ್ಲಿ ಮುಚ್ಚಿರುವ ಆ 22 ಕೊಠಡಿಗಳ ರಹಸ್ಯವೇನು?

ಆಗ್ರಾ, ಮೇ 10: ವಿಶ್ವವಿಖ್ಯಾತ ತಾಜ್‌ಮಹಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಅಯೋಧ್ಯೆಯ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ತಾಜ್ ಮಹಲ್‌ನಲ್ಲಿರುವ ಒಟ್ಟು 22 ಮುಚ್ಚಿದ ಕೊಠಡಿಗಳನ್ನು ಬಾಗಿಲುಗಳನ್ನು ತೆರೆಯುವಂತೆ ಒತ್ತಾಯಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಮುಚ್ಚಲಾಗಿದೆ ಎನ್ನಲಾದ ಕೊಠಡಿಗಳನ್ನು ತೆರೆಯಲು ಆದೇಶಿಸುವಂತೆ ಹೈಕೋರ್ಟ್‌ನಿಂದ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ಆ ಕೊಠಡಿಗಳ ರಹಸ್ಯಗಳು ಗೊತ್ತಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹೌದು ವಿಶ್ವದಲ್ಲಿಯೇ ಜನಪ್ರಿಯತೆ ಹೊಂದಿರುವ ತಾಜ್‌ಮಹಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಅಯೋಧ್ಯೆ ಬಿಜೆಪಿ ನಾಯಕ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ತಾಜ್ ಮಹಲ್‌ನ 22 ಮುಚ್ಚಿದ ಕೊಠಡಿಗಳನ್ನು ತೆರೆಯುವಂತೆ ಒತ್ತಾಯಿಸಿ ರಿಟ್ ಸಲ್ಲಿಸಿದ್ದಾರೆ. ಮಂಗಳವಾರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿಲ್ಲ. ಅಲಹಾಬಾದ್ ಹೈಕೋರ್ಟ್‌ನ ವಕೀಲರ ಮುಷ್ಕರದಿಂದಾಗಿ ಮೇ 12 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ. ಮುಚ್ಚಿದ ಕೊಠಡಿಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಮತ್ತು ಶಾಸನಗಳು ಇರುತ್ತವೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಈ ಮುಚ್ಚಿದ ಕೊಠಡಿಗಳನ್ನು ತೆರೆಯಲು ಆದೇಶಿಸುವಂತೆ ಹೈಕೋರ್ಟ್‌ನಿಂದ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದ ವಿವಾದವು ಕೊನೆಗೊಳ್ಳಬಹುದು ಎಂಬ ರಹಸ್ಯವು ಮುನ್ನೆಲೆಗೆ ಬರಬಹುದು. ತಾಜ್‌ನ ಒಳಗೆ ಅಡಗಿರುವ ಪ್ರತಿಮೆಗಳು ಮತ್ತು ಶಾಸನಗಳಂತಹ ಪ್ರಮುಖ ಐತಿಹಾಸಿಕ ಪುರಾವೆಗಳನ್ನು ಹುಡುಕಲು ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಮತ್ತು ಸರ್ಕಾರಕ್ಕೆ ನಿರ್ದೇಶನವನ್ನು ಅರ್ಜಿಯಲ್ಲಿ ಕೋರಲಾಗಿದೆ ಎಂದು ಡಾ ರಜನೀಶ್ ಸಿಂಗ್ ಪ್ರತಿಪಾದಿಸಿದ್ದಾರೆ.

What is the secret of those 22 rooms doors closed in Taj Mahal?

ಅರ್ಜಿದಾರರ ವಕೀಲ ರುದ್ರ ವಿಕ್ರಮ್ ಸಿಂಗ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಹಲವಾರು ಹಿಂದೂ ಗುಂಪುಗಳು ತಾಜ್‌ಮಹಲ್ ಇದು ಹಳೆಯ ಶಿವ ದೇವಾಲಯ ಎಂದು ಪ್ರತಿಪಾದಿಸುತ್ತಿವೆ ಎಂದು ವಾದಿಸಿದರು. ಇದನ್ನುಈ ಹಿಂದೆ ತೇಜೋ ಮಹಾಲಯ ಎಂದು ಕರೆಯಲಾಗುತ್ತಿತ್ತು.

ಈ ಕುರಿತು ಅನೇಕ ಇತಿಹಾಸಕಾರರು ಸಹ ಇದನ್ನು ಬೆಂಬಲಿಸಿದ್ದಾರೆ. ಈ ಹಕ್ಕುಗಳು ಹಿಂದೂ-ಮುಸ್ಲಿಮರು ಪರಸ್ಪರ ಹೊಡೆದಾಡಿಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿವೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು, ಆದ್ದರಿಂದ ಈ ವಿವಾದವನ್ನು ಕೊನೆಗೊಳಿಸುವುದು ಅವಶ್ಯಕ ಎಂದರು.

What is the secret of those 22 rooms doors closed in Taj Mahal?

ರಹಸ್ಯಗಳಿಗಾಗಿ ಅರ್ಜಿ ಸಲ್ಲಿಸಿದ 22 ಕೊಠಡಿಗಳನ್ನು 1934ರಲ್ಲಿ ಕೊನೆಯದಾಗಿ ತಪಾಸಣೆಗಾಗಿ ತೆರೆಯಲಾಯಿತು. ತಾಜ್‌ಮಹಲ್‌ನಲ್ಲಿರುವ ಮುಖ್ಯ ಸಮಾಧಿ ಮತ್ತು ಮಲ್ಲಿಗೆಯ ನೆಲದ ಅಡಿಯಲ್ಲಿ ನಿರ್ಮಿಸಲಾದ 22 ಕೊಠಡಿಗಳನ್ನು ಮೊಘಲರ ಕಾಲದಿಂದ ಮುಚ್ಚಲಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಯಮುನಾ ದಡಕ್ಕೆ ಹೋಗುವ ಮಲ್ಲಿಗೆಯ ನೆಲದ ಮೇಲೆ ಎರಡು ಮೆಟ್ಟಿಲುಗಳಿವೆ. ಅದನ್ನು ಮುಚ್ಚಲಾಗಿದೆ. ಈ ಹಿಂದೆ 45 ವರ್ಷಗಳ ಹಿಂದೆ ಒಂದು ದಾರಿ ಇತ್ತು, ಆದರೆ ನಂತರ ಅವುಗಳನ್ನು ಮುಚ್ಚಲಾಯಿತು ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+