ನಿರೀಕ್ಷೆಗೂ ಮೀರಿದ ಲಾಭ, ಇನ್ಫಿ ಹಿಂದಿಕ್ಕಿದ ಎಚ್ ಸಿಎಲ್

ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯ ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯ ವರ್ಷದಿಂದ ವರ್ಷಕ್ಕೆ ಶೇ 17.3ರಷ್ಟು ಏರಿಕೆ ಕಂಡು 6,944 ಕೋಟಿ ರು ಗಳಿಕೆ ಕಂಡಿದೆ.
ಬುಧವಾರ ಮಧ್ನಾಹ್ನ 13.05ರ ವೇಳೆಗೆ ಬಿಎಸ್ ಇ ನಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಷೇರುಗಳು ಉತ್ತಮ ಸ್ಥಿತಿಯಲ್ಲಿತ್ತು. 920.45 ರು ನಂತೆ ಶೇ 1.61 ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ ಶೇ1.80 ಏರಿಕೆಯಂತೆ 921.95 ರು ನಷ್ಟಿತ್ತು.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಇನ್ಫೋಸಿಸ್ ಕಂಪನಿಗಳ ಫಲಿತಾಂಶ ಮೀರಿ ಮಾರುಕಟ್ಟೆ ನಿರೀಕ್ಷೆಯನ್ನು ಬದಿಗೊತ್ತಿ ಎಚ್ ಸಿಎಲ್ ಉತ್ತಮ ಪ್ರಗತಿ ಕಂಡಿದೆ. ಯುರೋಪ್ ಮಾರುಕಟ್ಟೆಯಲ್ಲಿ ಶೇ 9.6ರಷ್ಟು ಆದಾಯದಲ್ಲಿ ಪ್ರಗತಿ ಹಾಗೂ ಯುನೈಟೆಡ್ ಸ್ಟೇಟ್ಸ್ ನಲ್ಲಿ ಶೇ 2.8 ರಷ್ಟು ಬೆಳವಣಿಗೆಯಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಶೇ 7.3 ರಷ್ಟು, ಉತ್ಪಾದನಾ ಕ್ಷೇತ್ರದಲ್ಲಿ ಶೇ 4.7ರಷ್ಟು ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ ಶೇ 5.9ರಷ್ಟು ಪ್ರಗತಿ ಕಾಣಲಾಗಿದೆ.
ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಆರ್ಥಿಕ ವರ್ಷ ಜೂನ್ 30ಕ್ಕೆ ಕೊನೆಗೊಳ್ಳುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಚ್ ಸಿಎಲ್ ಆದಾಯ 25 ಸಾವಿರ ಕೋಟಿ ರು ಗಡಿ ದಾಟಿದೆ. ಒಟ್ಟು 25,734 ಕೋಟಿ ರು ಆದಾಯ ಸಂಗ್ರಹಿಸಿದೆ.
ಉತ್ತಮ ತ್ರೈಮಾಸಿಕ ಫಲಿತಾಂಶದೊಂದಿಗೆ ಆರ್ಥಿಕ ವರ್ಷ ಪೂರೈಸಿದ್ದೇವೆ. ನಮ್ಮ ನಿವ್ವಳ ಆದಾಯ ಮಾರ್ಜಿನ್ 400 bps ನಷ್ಟು ವಿಸ್ತರಿಸಿದೆ. ಕಳೆದ ಐದು ವರ್ಷಗಳಲ್ಲೇ ಅಧಿಕ ಎನ್ನುವಷ್ಟು ಶೇ 16ರಷ್ಟು ಏರಿಕೆಯಾಗಿದೆ. ಈಕ್ವಿಟಿ ರಿಟರ್ನ್ಸ್ ಶೇ 34ರಷ್ಟಿದ್ದು ಇದು ಇಡೀ ಉದ್ಯಮದಲ್ಲೇ ಅತ್ಯುತ್ತಮ ಮಟ್ಟದ್ದಾಗಿದೆ. EBITDA ವರ್ಷದಿಂದ ವರ್ಷಕ್ಕೆ ಶೇ 68ರಷ್ಟು ಪ್ರಗತಿ ಕಂಡಿದೆ ಎಂದು ಎಚ್ ಸಿಎಲ್ ಟೆಕ್ನಾಲಜೀಸ್ ನ ಚೇರ್ಮನ್ ಹಾಗೂ ಮುಖ್ಯ ಕಾರ್ಯ ತಂತ್ರಜ್ಞ ಶಿವ ನಾಡರ್ ಹೇಳಿದ್ದಾರೆ.
ಇದೇ ಖುಷಿಯಲ್ಲಿ ಸಂಸ್ಥೆ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 2 ರು ನಂತೆ ಡಿವಿಡೆಂಡ್ ಘೋಷಿಸಿದೆ. ಅಂತಿಮ ಡಿವಿಡೆಂಡ್ 6 ರು ಪ್ರತಿ ಷೇರಿನಂತೆ ಸಿಗಲಿದೆ. ಸತತ 42 ತ್ರೈಮಾಸಿಕ ಡಿವಿಡೆಂಡ್ ನೀಡಿಕೆ ಮೂಲಕ ಅದ್ಭುತ ದಾಖಲೆ ನಿರ್ಮಿಸಿದೆ ಎಂದು ಎಚ್ ಸಿಎಲ್ ಟೆಕ್ನಾಲಜೀಸ್ ಸಿಎಫ್ ಒ ಅನಿಲ್ ಚನ್ನಣ್ಣ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications