BBMP ಉಸ್ತುವಾರಿಯಲ್ಲಿ ಮರ ಕಡಿಸುವುದು ಹೇಗೆ?
ಬೆಂಗಳೂರು, ಜುಲೈ 5: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಲ್ಲಿ (BBMP) ಈಗಾಗಲೇ Chief Conservator of Forests ಅಧೀನದಲ್ಲಿ Forest Cell ಎಂಬ ವಿಭಾಗ ಇದೆ. ಆದರೆ ಸಾರ್ವಜನಿಕರು ಮರ ಕಡಿಸುವುದಕ್ಕೆ ಅಥವಾ ಕಾನೂನುಬಾಹಿರವಾಗಿ ಮರ ಕಡಿಸುತ್ತಿದ್ದರೆ ನೇರವಾಗಿ ಇವರಿಗೆ ದೂರುವಂತಿಲ್ಲ.
ಸಾರ್ವಜನಿಕರು ಮರ ಕಡಿಯುವ ಸಂಬಂಧ ಮೊದಲು Tree Officer ನಂತರ Range Officer ಅವರನ್ನು ಸಂಪರ್ಕಿಸಬೇಕಾಗುತ್ತದೆ.

ಬಿಬಿಎಂಪಿ ಅಧೀನದಲ್ಲಿ ಕಾನೂನುರೀತ್ಯ ಮರ-ಕೊಂಬೆ ಕಡಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿರಿ. ಬರೀ ಅಷ್ಟೇ ಅಲ್ಲ. ಒಂದು ವೇಳೆ ಕಾನೂನು ಬಾಹಿರವಾಗಿ ಯಾರಾದರೂ ಮರ ಕಡಿಯುತ್ತಿದ್ದರೆ ಅದನ್ನು ತಡೆಯಲು ತಕ್ಷಣ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು.
BBMP ಮರ ಪ್ರಾಧಿಕಾರವು ತನ್ನ ಕಾರ್ಯಾನುಕೂಲಕ್ಕಾಗಿ ಉತ್ತರ ಮತ್ತು ದಕ್ಷಿಣ ಭಾಗಗಳಾಗಿ ವಿಂಗಡನೆಯಾಗಿವೆ. ಹಾಗಾಗಿ ಭೌಗೋಳಿಕವಾಗಿ ಆಯಾ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಈ ಅಧಿಕಾರಿಗಳ ಕಾರ್ಯಸ್ಥಾನ ಇಲ್ಲಿದೆ.
ಉತ್ತರ ಬೆಂಗಳೂರು: ವೆಂಕಟ್ ರೆಡ್ಡಿ, ACF, ಎಂಜಿ ರಸ್ತೆಯಲ್ಲಿರುವ ಮೇಯೋ ಹಾಲ್ - 94806 83083
ದಕ್ಷಿಣ ಬೆಂಗಳೂರು : ರಂಗನಾಥ ಸ್ವಾಮಿ, ACF, ಜಯನಗರ 2ನೆ ಬ್ಲಾಕ್ - 94806 83842
BBMPಯಲ್ಲಿ Tree Authority ಎಂಬ ಉನ್ನತ ಪ್ರಾಧಿಕಾರವೂ ಇದೆ. ಒಂದು ವೇಳೆ ACF ನಿರ್ಣಯದಿಂದ ನಿಮಗೆ ತೃಪ್ತಿ ಸಿಗಲಿಲ್ಲವೆಂದಾದರೆ Tree Authorityಯನ್ನು ಸಂಪರ್ಕಿಸಬಹುದು.
ಕರ್ನಾಟಕ ಮರ ಸಂರಕ್ಷಣೆ ಕಾಯಿದೆ- 1976ರ ಅನುಸಾರ ಮೂರು ವರ್ಷಗಳ ಹಿಂದೆ 2010ರಲ್ಲಿ ಮರ ಪ್ರಾಧಿಕಾರ Tree Authority ಎಂಬುದನ್ನು ಸ್ಥಾಪಿಸಲಾಯಿತು. ಮರ ಕಡಿಸುವುದಕ್ಕೆ ಸಂಬಂಧಪಟ್ಟಂತೆ ಈ ಮರ ಪ್ರಾಧಿಕಾರದ ತೀರ್ಮಾನವೇ ಅಂತಿಮ. ಮರ ಪ್ರಾಧಿಕಾರದಲ್ಲಿ ಪದನಿಮಿತ್ತ ಅಧ್ಯಕ್ಷರಾಗಿ ಮೇಯರ್ ಜತೆಗೆ ತೋಟಗಾರಿಕೆ ವಿಭಾಗದ ಜಂಟಿ ನಿರ್ದೇಶಕರು ಮತ್ತು ಒಬ್ಬ ಕಾರ್ಪೊರೇಟರ್ ಸಹ ಇರುತ್ತಾರೆ.
ಇವರ ಜತೆಗೆ, Tree Authorityದಲ್ಲಿ ಬಿಬಿಎಂಪಿ ಆಯುಕ್ತರು ಮತ್ತು Chief Conservator of Forests (CCF), Deputy Conservator of Forests (DCF) ಮತ್ತು Assistant Conservator of Forests (ACF) ಸಹ ಇರುತ್ತಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications