ಕೊನೆಯ ಹಂತದಲ್ಲಿ ಶಿಷ್ಯನ ಕೊಂಡಾಡಿದ ಕೃಷ್ಣ
'10 ವರ್ಷಗಳ ಹಿಂದೆ ನಾನು ಕನಕಪುರಕ್ಕೆ ಬಂದಾಗ ಶಿವಕುಮಾರ್ ಅವರನ್ನು ಗೆಲ್ಲಿಸಿಕೊಡುವಂತೆ ನಿಮ್ಮಲ್ಲಿ ಪ್ರಾರ್ಥಿಸಿದ್ದೆ. ನನಗೆ ಇವರನ್ನು ಗೆಲ್ಲಿಸಿಕೊಟ್ಟಿರಿ. ನಾನೂ ಸಹ ನಿಮಗೆ ಮಾತುಕೊಟ್ಟಂತೆ ಕರ್ನಾಟಕಕ್ಕೆ ಒಬ್ಬ ಯುವನಾಯಕನನ್ನು ಸೃಷ್ಟಿ ಮಾಡಿಕೊಟ್ಟಿದ್ದೇನೆ' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೃಷ್ಣ ಅವರು ಇದೇ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಕ್ಷೇತ್ರದ ಜನತೆಯನ್ನು ಪರಸ್ಪರ ಅಭಿನಂದಿಸಿದರು.
ಶಿವಕುಮಾರ್ ಅವರು ಕೈಗೊಂಡಿರುವ ಸಾಧನೆಗಳನ್ನು ಮೆಲುಕು ಹಾಕಿದ ಕೃಷ್ಣ ಅವರು ಕನಕಪುರದ ಎಂಜಿ ರಸ್ತೆಯ ಆಗಲೀಕರಣ ಅಭಿವೃದ್ಧಿಯಾಗಿರುವುದನ್ನು ನೋಡಿದರೆ ನನಗೆ ಕನಸಿನಂತೆ ಕಾಣುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ನನ್ನ ಸರ್ಕಾರದ ಅವಧಿಯಲ್ಲೇ ಎಲ್ಲಾ ಪಟ್ಟಣದ ಮುಖ್ಯ ರಸ್ತೆಗಳನ್ನು ಆಗಲೀಕರಣ ಮಾಡಬೇಕೆಂಬ ಪ್ರಯತ್ನ ಮಾಡಲಾಗಿತ್ತು. ಅದರೆ ಜೆಡಿಎಸ್ ಪಕ್ಷದವರು ಸುಳ್ಳು ಹೇಳಲು ಹೊರಟಿದ್ದಾರೆ. ಕನಕಪುರ ಅಭಿವೃದ್ಧಿ ಸಹಿಸದವರು ಶಿವಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ ಎಂದು ಕೃಷ್ಣ ವ್ಯಘ್ರರಾದರು.
ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಪಟ್ಟಣ ವ್ಯಾಪ್ತಿಯಲ್ಲಿನ ಶೇ. 90ರಷ್ಟು ಎಲ್ಲ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿವೆ. ಹಾಗೆಯೇ ಶೇ.85ರಷ್ಟು ಚರಂಡಿಗಳಾಗಿವೆ ಎಂದು ತಮ್ಮ ಸಾಧನೆಗಳ ಪಟ್ಟಿ ನೀಡಿದ ಸ್ಥಳೀಯ ಅಭ್ಯರ್ಥಿ ಶಿವಕುಮಾರ್, ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿದ್ದ ಪಿಜಿಆರ್ ಸಿಂಧ್ಯಾ ಅವರು ಏಕೆ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿಲ್ಲ ಎಂದು ಪ್ರಶ್ನಿಸಿದರು.
ಇದೇ 5ರಂದು ನಡೆಯುವ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿ ಕನಕಪುರವನ್ನು ಕನಕನಗರವನ್ನಾಗಿ ಮಾಡಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.