ದೊಡ್ಡಗೌಡ್ರು ಕ್ಲಬ್ಬಿನಲ್ಲಿ ವಿಸ್ಕಿ ಗ್ಲಾಸಿನಲ್ಲಿ ಕುಡಿದಿದ್ದೇನು?

ಏನಾಯಿತೆಂದರೆ ನಿನ್ನೆ ರಾಜಧಾನಿಯಲ್ಲಿ ಕಬ್ಬನ್ ಪಾರ್ಕಿನ ತುದಿಯಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಮಿತ್ರರು ಮಾಜಿ ಪ್ರಧಾನಿಯ ಪತ್ರಿಕಾ ಸಂವಾದವನ್ನು ಆಯೋಜಿಸಿದ್ದರು. ಮೊದಲೇ...ಪ್ರೆಸ್ ಕ್ಲಬ್ಬು 'ಅದಕ್ಕೆ' ಫೇಮಸ್ಸು, ಅಂಥಾದ್ದರಲ್ಲಿ ಪ್ರೆಸ್ ಮೀಟಿಗೆಂದು ಬಂದ ಗೌಡರೂ ಗ್ಲಾಸು ಎತ್ತಿದರಾ? ಎಂದು ಆತಂಕ/ಆಶ್ಚರ್ಯಕ್ಕೆ ಬೀಳಬೇಡಿ.
ಜೀವನದಲ್ಲಿ ಎಂದೆಂದಿಗೂ/ ಎಂಥಹುದೇ ದುರ್ಭರ ಪರಿಸ್ಥಿತಿಯಲ್ಲಿ (ಗೌಡರಿಗೆಂಥಾ ದುಃಖ ಅಲ್ವಾ!?) ಅಂತಹುಗಳನ್ನೆಲ್ಲಾ ಟಚ್ಚೇ ಮಾಡದ ದೊಡ್ಡಗೌಡರಿಗೆ ಜೀವನದ ಸಂಧ್ಯಾಕಾಲದಲ್ಲಿ ಇದೇನು ಬಂತು ಎಂದೂ ಮರುಗಬೇಡಿ. ಏಕೆಂದರೆ ಅಲ್ಲಿ ಆಗಿದ್ದೇ ಬೇರೆ.
ನಮ್ಮ ಗೌಡರು ಎಂದಿನಂತೆ ಫುಲ್ ಫೋರ್ಸಿನೊಂದಿಗೆ 'ನಾನೇ ಕಿಂಗ್' ಎಂದು ಸುದ್ದಿಗಾರರ ಮುಂದೆ ಕೊಚ್ಚಿಕೊಳ್ಳುತ್ತಿದ್ದರು. ಆಗ ಗೌಡರ ಫೋರ್ಸನ್ನು ನಿಯಂತ್ರಿಸಲು ಅವರಿಗೆ ಕಾಫಿ-ಟೀ ಕೊಟ್ಟರೆ ಹೇಗೆ ಎಂದು ಆಯೋಜಕರು ಆಲೋಚಿಸಿದ್ದಾರೆ.
ಅದರಂತೆ ಚಿಕ್ಕ ಪ್ಲಾಸ್ಟಿಕ್ ಕಪ್ಪಿನಲ್ಲಿ (ಶುಗರ್ ಲೆಸ್) ಚಹಾ ತುಂಬಿಸಿ, ಅವರ ಮುಂದೆ ಹಿಡಿದಿದ್ದಾರೆ. ಮೊದಲೇ ದೊಡ್ಡಗೌಡರಿಗೆ ಚಹಾ ಅಂದರೆ ಶಾನೆ ಪ್ರೀತಿ. ಅವರು ಕೊಡಗಗಟ್ಟಲೆ ಚಹಾ ಹೀರುತ್ತಾರಂತೆ. ಹಾಗೇಂತ ಇದನ್ನೂ ಕುಡಿದು ಜೀವ ತಂಪು ಮಾಡಿಕೊಳ್ಳಲಿ ಬಿಡು ಎಂದು ಆಯೋಜಕರು ಭಾವಿಸಿದ್ದಾರೆ.
ಆದರೆ ಚಹಾ-ಪ್ರಿಯ ಗೌಡರಿಗೆ ಅದು ಅರೆಕಾಸಿನ ಮಜ್ಜಿಗೆಯಂತೆ ಎಂಬುದು ಅವರ ಅರಿವಿಗೆ ಬಂದಂತಿಲ್ಲ. ತಕ್ಷಣ ಅದೆಲ್ಲಿಂದಲೋ ಹಾರಿಬಂದ ಗೌಡರ ಗನ್ ಮ್ಯಾನ್ ಅಪಚಾರವಾಯ್ತು, ಅಪಚಾರವಾಯ್ತು ಎಂದು ಅರಚುತ್ತಾ 'ನಮ್ ಸಾಹೇಬರಿಗೆ ಹೀಗೆ ಸಣ್ಣಪುಟ್ಟ ಲೋಟದಲ್ಲಿ ಕೊಟ್ಟು ಅವಮಾನ ಮಾಡಬೇಡಿ. ಕುಡಿದರೆ ದೊಡ್ಡ ಚೆಂಬಿನಲ್ಲೇ ಕುಡಿಯುವ ಅಭ್ಯಾಸ ಅವರದು. ಅವರು ಜೀವನದಲ್ಲಿ ಚಹಾ ಬಿಟ್ಟು ಬೇರೇನನ್ನೂ ಕುಡಿದಿಲ್ಲ' ಎಂದಿದ್ದಾನೆ.
ಇದನ್ನು ಕೇಳಿ ಅಧೀರರಾದ ಆಯೋಜಕ ಪತ್ರಿಕಾ ಮಿತ್ರರು ಚೆಂಬಿಗಾಗಿ ತಡಕಾಡಿದ್ದಾರೆ. ಆದರೆ ಆ ತಕ್ಷಣಕ್ಕೆ ಅಲ್ಲೆಲ್ಲಿ ಚೆಂಬು ಸಿಗಬೇಕು? ಕ್ಲಬ್ಬಿನಲ್ಲೇನಿದ್ದರೂ ದೊಡ್ಡ ಗ್ಲಾಸು ಸಿಗೋದು. ಆದರೂ ಸಾವರಿಸಿಕೊಂಡ ಆಯೋಜಕರು ದೊಡ್ಡ ಗೌಡರನ್ನು ತಣಿಸಲೆಂದು ಅಲ್ಲೇ ಇದ್ದ ವಿಸ್ಕಿ ಗ್ಲಾಸು ತಂದವರೇ ಅದರ ತುಂಬಾ ಚಹಾ ತುಂಬಿ ದೊಡ್ಡ ಗೌಡರ ಮುಂದೆ ಹಿಡಿದಿದ್ದಾರೆ. ಗೌಡರ ಮೂಗಿಗೆ ಆ ಚಹಾ ವಾಸನೆ ಬಡಿದಿದ್ದೇ ತಡ ಗೌಡರು ಒಂದು Tea Break ತೆಗೆದುಕೊಂಡಿದ್ದಾರೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications