Get Updates
Get notified of breaking news, exclusive insights, and must-see stories!

ಮೋದಿ ಗೆಲುವಿನ ರಹಸ್ಯ ಕಂಡುಕೊಂಡ ಕುಮಾರಸ್ವಾಮಿ

Narendra Modi wins in Gujarat because Congress fails as Opposition
ಕೆ ಆರ್ ಪೇಟೆ, ಜ 4: ಗುಜರಾತಿನಲ್ಲಿ ನರೇಂದ್ರ ಮೋದಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದ್ದು ಅಭಿವೃದ್ದಿ ಕೆಲಸದಿಂದಲ್ಲ. ಅಲ್ಲಿ ವಿರೋಧಪಕ್ಷವಾಗಿರುವ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿರುವುದೇ ಮೋದಿ ಗೆಲುವಿಗೆ ಕಾರಣ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿಭಿನ್ನ ಹೇಳಿಕೆ ನೀಡಿದ್ದಾರೆ.

ಗುಜರಾತಿನಲ್ಲಿ ಅಂಥಹ ಅಭಿವೃದ್ದಿ ಕೆಲಸವೇನೂ ನಡೆದಿಲ್ಲ. ಮಾಧ್ಯಮ ನರೇಂದ್ರ ಮೋದಿಯವರನ್ನು 'ಅಭಿವೃದ್ದಿಯ ಹರಿಕಾರ' ಎನ್ನುವಂತೆ ಬಿಂಬಿಸಿತು.

ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸದೇ ಇದ್ದಿದ್ದರಿಂದ ಮೋದಿ ಸತತ ಗೆಲುವು ಕಂಡರು ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತಿನಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ವಿರೋಧಪಕ್ಷವಾಗಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಬಿಜೆಪಿ ದುರಾಡಳಿತವನ್ನು ಜನತೆಗೆ ಮನದಟ್ಟು ಮಾಡುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ.

ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಭಾರೀ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ.

ವಿಶ್ವನಾಯಕರೆಂದೇ ಬಿಂಬಿಸಲ್ಪಡುತ್ತಿರುವ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಎಸ್‌.ಎಂ.ಕೃಷ್ಣ ನನ್ನ ಈ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಲಿ ಎಂದು ಕುಮಾರಸ್ವಾಮಿ ಮತ್ತೊಮ್ಮೆ ಕೃಷ್ಣ ವಿರುದ್ದ ತೊಡೆ ತಟ್ಟಿದ್ದಾರೆ.

ಮೋದಿಯಂತೆ ನನಗೂ ಮೂರು ಅವಧಿ ಆಡಳಿತ ನಡೆಸಲು ಜನತೆ ಆಶೀರ್ವದಿಸಿದ್ದರೆ ಕರ್ನಾಟಕವನ್ನು ಬಿಜೆಪಿಯವರ ರಾಮ ಅಲ್ಲ 'ನಿಜವಾದ ರಾಮರಾಜ್ಯ' ಮಾಡುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+