ನೀವೂ ತಿರುಪತಿ ತಿಮ್ಮಪ್ಪನ ಹುಂಡಿ ಹಣ ಎಣಿಸಬೇಕೆ?
ಈ ಸೇವೆಗೆ 'ಪರಕಾಮಣಿ ಶ್ರೀವಾರಿ ಸೇವಾ' ಎಂದು ಹೆಸರಿಡಲಾಗಿದೆ. ಈ ಅವಕಾಶವನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ) ಸಂಸ್ಥೆಯ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿಯನ್ನು ತುಂಬಬೇಕು. ಅದರಲ್ಲಿ ತಮ್ಮತಮ್ಮ ಭಾವಚಿತ್ರ, ಸ್ವವಿವರ, ಇಮೇಲ್ ವಿಳಾಸ, ಗುರುತಿನ ಚೀಟಿಯ ಸ್ಕ್ಯಾನ್ ಕಾಪಿ, ದೂರವಾಣಿ ಸಂಖ್ಯೆಯ ಸಂಪೂರ್ಣ ಮಾಹಿತಿ ನೀಡಬೇಕು.
ಅದಾದ ಮೇಲೆ ಟಿಟಿಡಿ ಒಂದು ಕೋಡ್ ನಂಬರ್ ಅನ್ನು ನೀಡುತ್ತದೆ. ಆ ಸಂಖ್ಯೆಯ ಆಧಾರದ ಮೇಲೆ ಕೆಲವೇ ದಿನಗಗಳಲ್ಲಿ ಈ ಸೇವೆ ಮಾಡಲು ಬೇಕಾಗಿರುವ ಗುರುತಿನ ಚೀಟಿಯನ್ನು ಅಭ್ಯರ್ಥಿಗಳ ವಿಳಾಸಕ್ಕೆ ಕಳುಹಿಸುತ್ತಾರೆ. ಅಭ್ಯರ್ಥಿಗಳ ಸೂಕ್ತವಾದ ದಿನದಂದು ಅಥವಾ ಟಿಟಿಡಿ ಸೂಚಿಸಿದ ದಿನದಂದು ಸಪ್ತಗಿರಿ ವಾಸ, ಅಷ್ಟೈಶ್ವರ್ಯಗಳ ಒಡೆಯ ತಿರುಪತಿ ತಿಮ್ಮಪ್ಪನ ಹುಂಡಿಯ ಹಣ ಎಣಿಸೋ ಆಸೆಯನ್ನು ಅಥವಾ ಸೇವೆಯನ್ನು ಪೂರೈಸಿಕೊಳ್ಳಬಹುದು.
ತಿರುಪತಿ ಬಸ್ ನಿಲ್ದಾಣದ ಬಳಿಯ ಸಂಸ್ಥೆಯ ಕಚೇರಿಗೆ ತೆರಳಿ ಗುರುತಿನ ಚೀಟಿ ಮತ್ತು ಸ್ಪಷ್ಟ ಮಾಹಿತಿಯನ್ನು ಒದಗಿಸಿ ಮತ್ತೊಮ್ಮೆ ನೊಂದಾಯಿಸಬೇಕು.
ಈ
ಸೇವೆಗೆ
ಯಾರು
ಅರ್ಹರು?
1.
ದಕ್ಷಿಣ
ಭಾರತದ
ವಾಸಿಗಳು
ಮಾತ್ರ.
2.
ಕೇವಲ
ಪುರುಷರು
3.
35
ರಿಂದ
65
ವಯೋಮಿತಿಯುಳ್ಳ
ಹಿಂದೂಗಳು
4.
ಅಸ್ತಮಾ,
ಬೆನ್ನುನೋವು
ಇರುವ
ಅಭ್ಯರ್ಥಿಗಳು
ಅರ್ಜಿ
ಸಲ್ಲಿಸುವಂತಿಲ್ಲ.
ಈ ಹಣ ಎಣಿಸುವ ಪ್ರಕ್ರಿಯೆಗೆ ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನ, ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಎಂದು ವಿಭಾಗಿಸಲಾಗಿದೆ. ಅಭ್ಯರ್ಥಿಗಳು ಒಂದು ದಿನದ ಮೊದಲು ಹೆಸರು ನೋಂದಾಯಿಸಬೇಕು. ಈ ಸೇವೆ ಮಾಡಿದ ಅಭ್ಯರ್ಥಿಗಳಿಗೆ ಟಿಟಿಡಿ ವತಿಯಿಂದ ವಿಶೇಷ ದರ್ಶನ ಮತ್ತು ಮೂರು ಲಡ್ಡು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ: www.tirumala.org