ಕೆಎಂಎಫ್ ಸೋಮಶೇಖರ ರೆಡ್ಡಿ ಎಲ್ಲೇ ಇದ್ದರೂ ಬಂಧನ

'ತಾವು ಕರ್ನಾಟಕದ ಘನತೆವೆತ್ತ ಶಾಸಕರು. ಅದರಲ್ಲೂ ಬಿಜೆಪಿಯ ಶಾಸಕರು. ಈ ಮಧ್ಯೆ ಬಿಜೆಪಿ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪೂರಕ ಬಜೆಟ್ ಗೆ ಅನುಮೋದನೆ ಕೋರಿರುವುದರಿಂದ ಪಕ್ಷವು ಬಿಜೆಪಿ ಶಾಸಕರಿಗೆಲ್ಲ ವಿಪ್ ನೀಡಿದೆ. ಹಾಗಾಗಿ ವಿಧಾನಸಭೆಯಲ್ಲಿ ತಮ್ಮ ಉಪಸ್ಥಿತಿ ಅತ್ಯಂತ ಜರೂರಾಗಿದೆ. ಹಾಗಾಗಿಯೇ ACB ಮುಂದೆ ಗೈರು ಹಾಜರಾಗುತ್ತಿರುವುದಾಗಿ' ನೆಪ ಹೇಳುತ್ತಿರುವ ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯನ್ನು ಕಂಡಲ್ಲಿ ವಶಕ್ಕೆ ತೆಗೆದುಕೊಳ್ಳಲು ACB ನಿರ್ಧರಿಸಿದೆ.
ಅದರೊಂದಿಗೆ ಬಹುಶಃ ಸದ್ಯಕ್ಕೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸಿದಂತಾಗುತ್ತದೆ. ಏಕೆಂದರೆ ಪ್ರಕರಣದಲ್ಲಿ ಬಂಧನವಾಗದೆ ಉಳಿದಿರುವ ಏಕೈಕ ಆರೋಪಿ ಅಂದರೆ ಸೋಮಶೇಖರ ರೆಡ್ಡಿ ಮಾತ್ರವೇ. ಅಂದಹಾಗೆ ನಿನ್ನೆ ಸಂಜೆ ನಾಟಕೀಯ ಬೆಳವಣಿಗೆಯೊಂದರಲ್ಲಿ ACB ಪೊಲೀಸರು ಶಾಸಕ ಕಂಪ್ಲಿ ಬಾಬುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕಂಪ್ಲಿ ಬಾಬು ಜೈಲುಪಾಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಸದ್ಯಕ್ಕೆ ಈ ಪ್ರಕರಣಗಳಲ್ಲಿ ನ್ಯಾಯಾಲಯಗಳ ಪರಿಸ್ಥಿತಿ ಹೇಗಿದೆಯೆಂದರೆ...
'ಒಂದು ವೇಳೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಆರೋಪಿ ಜಾಮೀನಿಗೆ ಅರ್ಹವಾಗಿದ್ದರೂ ಇಲ್ಲದ ಊಸಾಬರಿ ನಮಗ್ಯಾಕೆ ಎಂದು ಆರೋಪಿಗಳು ಒಂದಷ್ಟು ದಿನ ಜೈಲಿನಲ್ಲಿರಲಿ ಬಿಡಿ. ಹೋಗೋದೇನು?' ಎಂಬ ತೀರ್ಮಾನಕ್ಕೆ ಕೋರ್ಟುಗಳು ಬಂದಂತಿವೆ. 'ಆಮೇಲೆ ಪ್ರಕರಣವು ಒಂದು ತಾರ್ಕಿಕ ಅಂತ್ಯಕ್ಕೆ ಬಂದಾಗ ನೋಡಿಕೊಂಡರಾಯಿತು. ಈಗ ಸುಮ್ಮ ಸುಮ್ಮನೆ ಜಾಮೀನು ನೀಡುವುದು... ಆ ಮೇಲೆ, ದುಡ್ ತಗೊಂಡು ಜಾಮೀನು ಕೊಟ್ಟವ್ರೆ ಅನ್ನಿಸಿಕೊಂಡು ಈಗಾಗಲೇ ಜೈಲಿನಲ್ಲಿರುವ ಮೂವರು ಮಹಾಮಹಿಮ ಜಡ್ಜುಗಳ ಪಕ್ಕದ ಜೈಲಿನಲ್ಲಿ ನಾವೇಕೆ ಬಂಧಿಯಾಗಬೇಕು' ಎಂಬ ತೀರ್ಮಾನಕ್ಕೆ ಬಂದಂತಿದೆ ಈ ACB, CBI ಕೋರ್ಟುಗಳು.
ಮತ್ತೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿಷಯಕ್ಕೆ ಬರುವುದಾದರೆ ಅವರ ಬಂಧನ ಈಗಾಗಲೇ ವಿಳಂಬವಾಗಿದೆಯಾದರೂ ಸಮಯ ಸಾಧಿಸಿ, ಆತನನ್ನು ಪ್ರಕರಣದಲ್ಲಿ 10ನೆಯವರಾಗಿ ಬಂಧಿಸಲು ACB ಸಜ್ಜಾಗಿದೆ. ಏಕೆಂದರೆ... ಪ್ರಕರಣದ A1 ಆರೋಪಿ ಲಂಚ ತಿಂದು ಜಾಮೀನು ನೀಡಿದ ಜಡ್ಜ್ ಪಟ್ಟಾಭಿ. ಹಾಗೆಯೇ, ಅಷ್ಟೇ ಗುರುತರ ಆರೋಪವಿರುವುದು ಲಂಚ ನೀಡಿದ ವ್ಯಕ್ತಿಯ ಮೇಲೆ. ACB ಮೂಲಗಳ ಪ್ರಕಾರ ಈ ಅಷ್ಟೂ ಲಂಚದ ಹಣವನ್ನು ಹೊಂದಿಸಿದ್ದು ಕೆಎಂಎಫ್ ಸೋಮಶೇಖರ ರೆಡ್ಡಿ. ಈ ನೆಲದ ಕಾನೂನು ಏನು ಹೇಳುತ್ತದೆ ಅಂದರೆ - ಲಂಚ ತೆಗೆದುಕೊಳ್ಳುವುದು ಮತ್ತು ಲಂಚ ನೀಡುವುದು ಸಮಾನ ಅಪರಾಧಗಳು.
ಸದ್ಯಕ್ಕೆ ಸೋಮಶೇಖರ ರೆಡ್ಡಿ ACB ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿದ್ದಾರೆ. ಹಾಗೆ ನೋಡಿದರೆ ಕಂಪ್ಲಿ ಬಾಬು ಮತ್ತು ಶಾಸಕ ಸೋಮಶೇಖರ ರೆಡ್ಡಿ ಇಬ್ಬರೂ ಮರೆಯಾಗಿದ್ದರು. ಆದರೆ ತಂತ್ರ ಬದಲಿಸಿದ ಶಾಸಕ ಸೋಮಶೇಖರ ರೆಡ್ಡಿ ಮೊದಲು ಕಂಪ್ಲಿ ಬಾಬುಗೆ ಶರಣಾಗುವಂತೆ ಸೂಚಿಸಿದ್ದಾರೆ. ಅವರ ಬಂಧನವಾದ ತಕ್ಷಣ ಏನೆಲ್ಲ ಬೆಳವಣಿಗೆಗಳಾಗುತ್ತದೋ ನೋಡಿಕೊಂಡು ತಾನೂ ಶರಣಾಗುವುದು ಆತನ ಲೆಕ್ಕಾಚಾರವಾದಂತಿದೆ.
ಅದರೊಂದಿಗೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಾ CBI ಕೋರ್ಟಿನಲ್ಲಿ ಜನಾರ್ದನ ರೆಡ್ಡಿಯನ್ನು 'ಆರ್ಥಿಕ ಭಯೋತ್ಪಾದಕ' ಎಂದು ಬಣ್ಣಿಸಿರುವ CBI ಲಕ್ಷ್ಮಿನಾರಾಯಣ ಅವರ ಕೆಲಸ ಮತ್ತಷ್ಟು ಸಲೀಸಾಗುತ್ತದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications