ಹೆಂಗಸರನ್ನು ಪಲ್ಲಂಗಕ್ಕೆ ಆಹ್ವಾನಿಸುತ್ತಿದ್ದ ಸೈಕೋ ಅರೆಸ್ಟ್

ಸ್ವಾಮಿ ಅಲಿಯಾಸ್ ಮನೀಷ್ ಪಾಂಡೆ ಅಲಿಯಸ್ ಶ್ರೀಧರ್ (28)ಎಂಬುವವನೇ ಪೊಲೀಸರ ಬಲೆಗೆ ಬಿದ್ದ ವಿಕೃತ ಮನಸ್ಸಿನ ವ್ಯಕ್ತಿ. ಈತ ತನ್ನ ಮೊಬೈಲ್ನಿಂದ ಮಹಿಳೆಯರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಭಾವಚಿತ್ರಗಳನ್ನು ಎಲ್ಲರಿಗೂ ತೋರಿಸುತ್ತೇನೆ. ಇದಕ್ಕೆ ಒಪ್ಪದಿದ್ದರೆ ಎಂ.ಎಂ.ಎಸ್.ನಲ್ಲಿಯೂ ಪ್ರಕಟಿಸಿ ಅವಮಾನ ಮಾಡುತ್ತೇನೆ. ಅದಕ್ಕಾಗಿ ನೀವು ಒಂದು ದಿನ ತನ್ನೊಂದಿಗೆ ಕಳೆಯಬೇಕೆಂದು ಹಲವಾರು ಬಾರಿ ಕರೆಮಾಡುತ್ತಾ ತೊಂದರೆ ನೀಡುತ್ತಿದ್ದ.
ಆರೋಪಿಯ ಪತ್ತೆಗಾಗಿ ಯಶವಂತಪುರ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ವಿಶೇಷ ತಂಡದವರು ಆರೋಪಿಯು ಪತ್ತೆಗಾಗಿ ಗುಬ್ಬಿ, ಚನ್ನರಾಯಪಟ್ಟಣ, ಶ್ರವಣಬೆಳಗೋಳ, ಮತ್ತಿತರ ಕಡೆಗಳಲ್ಲಿ ಸುತ್ತಾಡಿ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯು ಪೀಣ್ಯ 2ನೇ ಹಂತದ ಪೀಜಾ ಹಟ್ನಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಳನೆ ತರಗತಿಯವರೆಗೆ ಓದಿರುವ ಈತ ಊರಿನಲ್ಲಿ ಖೋಟಾ ನೋಟು ಪ್ರಕರಣದಲ್ಲೂ ಭಾಗಿಯಾಗಿ ಏಳು ತಿಂಗಳ ಕಾಲ ಮಂಡ್ಯ ಜೈಲಿನಲ್ಲಿದ್ದು ಪ್ರಕರಣ ಮುಗಿಸಿಕೊಂಡು ಹೊರಬಂದಿದ್ದ. ಬಳಿಕ ಬೆಂಗಳೂರಿಗೆ ಬಂದು ಪೀಣ್ಯ 2ನೇ ಹಂತದಲ್ಲಿರುವ ಪೀಜಾ ಹಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಪೀಜಾವನ್ನು ಮನೆಗಳಿಗೆ ಡೆಲಿವರಿ ಮಾಡುತ್ತಿದ್ದ.
ಆ ಸಮಯದಲ್ಲಿ ಅಮಾಯಕ ಮಹಿಳೆಯರಿಂದ ಮತ್ತು ವಿದ್ಯಾರ್ಥಿನಿಯರಿಂದ ಮೊಬೈಲ್ ದೂರವಾಣಿ ನಂಬರ್ಗಳನ್ನು ಪಡೆದುಕೊಂಡು ಬೇರೆ ಬೇರೆ ಹೆಸರುಗಳಿಂದ ಅವರುಗಳಿಗೆ ತನ್ನ ಮೊಬೈಲ್ನಿಂದ ಅಶ್ಲೀಲ ಎಸ್.ಎಂ.ಎಸ್/ದೂರವಾಣಿ ಕರೆಗಳನ್ನು ಮಾಡುತ್ತಿದ್ದ. ನೀವು ತನ್ನ ಸಂಗಡ ಬರಬೇಕು ಇಲ್ಲದಿದ್ದರೆ ನಿಮ್ಮ ಪೋಟೊಗಳನ್ನು ಎಂ.ಎಂ.ಎಸ್ ಮೂಲಕ ಎಲ್ಲರಿಗೂ ಕಳುಹಿಸಿ ಅವಮಾನ ಮಾಡುತ್ತೇನೆಂದು ಹೆದರಿಸುತ್ತಾ ಸ್ನೇಹ ಬೆಳೆಸಲು ಪ್ರಯತ್ನಿಸಿ ಮೋಸ ಮಾಡುವ ಹವ್ಯಾಸ ಬೆಳೆಸಿಕೊಂಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಈತನು ಇದುವರೆವಿಗೂ ಪೀಣ್ಯ, ಗೊರಗುಂಟೆಪಾಳ್ಯ ಮತ್ತು ಯಶವಂತಪುರ ಮುಂತಾದ ಕಡೆ ಸುಮಾರು 10 ಜನ ಮಹಿಳೆಯರಿಗೆ (ಆಶಾ, ಉಷಾ, ಪ್ರೀತಿ, ಜಾನ್ಸಿ, ಮೇರಿ, ರಾಧಿಕಾ, ರಮ್ಯ, ಸುಮ, ಭೂಮಿಕಾ, ಮತ್ತು ಸೌಮ್ಯ ಹೆಸರು ಬದಲಾವಣೆ ಮಾಡಲಾಗಿದೆ.) ಈ ರೀತಿ ಬ್ಲಾಕ್ ಮೇಲ್ ಮಾಡಿದ್ದು ಅಲ್ಲದೆ, ಶಾಲಾ ಕಾಲೇಜುಗಳಿಗೆ ಹೋಗುವ ಹುಡುಗಿಯರ ಮೊಬೈಲ್ಗಳಿಗೂ ಸಹ ಇದೇ ರೀತಿ ಕರೆಗಳನ್ನು ಮಾಡುತ್ತಾ ಶಾಲಾ ಮಕ್ಕಳ ಮನಸ್ಸನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಈ ರೀತಿ ಬ್ಲಾಕ್ಮೇಲ್ ತಂತ್ರದಿಂದ ಒಬ್ಬ ಹೆಣ್ಣು ಮಗುವಿನ ಮದುವೆ ನಿಂತು ಹೋಗಿರುವುದು ಮೇಲ್ನೊಟಕ್ಕೆ ವಿಚಾರಣೆಯಿಂದ ಕಂಡು ಬಂದಿರುತ್ತದೆ.
ಈ ರೀತಿಯ ವಿಕೃತ ಮನಸ್ಸಿನ ಆರೋಪಿಯನ್ನು ದಸ್ತಗಿರಿ ಮಾಡಿರುವುದರಿಂದ ಅಮಾಯಕ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ವಿಕೃತ ಮನಸ್ಸಿನ ವ್ಯಕ್ತಿಯ ಕಾಟದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುತ್ತಾರೆ. ಯಶವಂತಪುರ ಪೊಲೀಸರಿಗೆ ನಿಜಕ್ಕೂ ಥ್ಯಾಂಕ್ಸ್ ಹೇಳಲೇಬೇಕು. (ಒನ್ಇಂಡಿಯಾ ಕನ್ನಡ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications