ಅಸಲಿಗೆ, ಬೆಂಗಳೂರಿನಲ್ಲಿ ಧರಿತ್ರಿ ಕಂಪಿಸಿದ್ದೇಕೆ?

ಇಷ್ಟೆಲ್ಲ ಅನಾಚಾರಗಳು ಈ ನೆಲದ ಮೇಲೆ, ಅದರಲ್ಲೂ ರಾಜ್ಯ ಅಧಿಕಾರದ ಕೇಂದ್ರಬಿಂದು ಬೆಂಗಳೂರಿನಲ್ಲಿ ನಡೆಯುತ್ತಿರುವಾಗ, ಸ್ವತಃ ಹೆಣ್ಣಿನ ಸಂಕೇತವಾಗಿರುವ ಧರಿತ್ರಿ ಗಡಗಡನೆ ನಡುಗದೆ ಇನ್ನೇನು ಮಾಡಿಯಾಳು? ಏ.11ರಂದು ಮಧ್ಯಾಹ್ನ ಬೆಂಗಳೂರು ಕಂಪಿಸಿದ್ದು ಭೂಕಂಪನದಿಂದ ಅಲ್ಲವೇ ಅಲ್ಲ. ಈ ಎಲ್ಲ ದೌರ್ಜನ್ಯ, ಕ್ರೌರ್ಯಗಳನ್ನು ನೋಡಿಯೂ ಏನೂ ಮಾಡಲಾಗದೆ ನಿಸ್ಸಹಾಯಕಳಾಗಿದ್ದಕ್ಕೆ ಥರಥರಿಸಿದ್ದಾಳೆ ಭೂಮಿ.
ಭೂಮಿಯ ಹೊಟ್ಟೆಯನ್ನೇ ಬಗೆದಿರುವ ಹಣಪಿಪಾಸುಗಳಿಗೆ, ಸ್ವಹಿತಕ್ಕಾಗಿ ಮಕ್ಕಳಹಿತಕ್ಕಾಗಿ ಭೂಮಿಯನ್ನು ಕಬಳಿಸುತ್ತಿರುವವರಿಗೆ, ಕಂಡವರ ಹೆಂಡಿರ ಸೆರಗಿಗೆ ಕೈಹಾಕಿದ್ದರೂ ಬಿರಬಿರನೆ ಅಡ್ಡಾಡುತ್ತಿರುವವರಿಗೆ, ತನ್ನ ಸ್ವಂತ ಮಗಳನ್ನೇ ನಿರ್ದಯವಾಗಿ ಕೊಂದವನಿಗೆ, ದುರಾಸೆಯಿಂದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವವರಿಗೆ ಶಿಕ್ಷೆ ಎಂದು? ಎಂದು ಎಲ್ಲವನ್ನೂ ಸುಮ್ಮನೆ ಸಹಿಸಿಕೊಂಡಿದ್ದ ಪೃಥ್ವಿ ಸಣ್ಣಗೆ ಕಂಪಿಸಿ ಈ ಜನಸಮುದಾಯವನ್ನು ಕೇಳಿದ್ದಾಳೆ.
ಸರಕಾರಿ ಕಚೇರಿಗಳಲ್ಲಿ ಮಾತ್ರವಲ್ಲ ಖಾಸಗಿ ಕಂಪನಿಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಧಾನಸೌಧದ ಕೊಠಡಿಗಳಿಂದ ಹಿಡಿದು, ಆರ್ಟಿಓ, ಆಸ್ಪತ್ರೆ, ಕಾಲೇಜು, ಪೊಲೀಸ್ ಇಲಾಖೆಗಳಲ್ಲಿ ಭ್ರಷ್ಟಾಚಾರ ರುದ್ರನರ್ತನ ಮಾಡುತ್ತಿದೆ. ಅಣ್ಣಾ ಹಜಾರೆ ಅಂಥವರು ಏಕಾಂಗಿಯಾಗಿ ಹೋರಾಡುತ್ತಿದ್ದರೂ ಲಂಚಾವತಾರದ ಮೇಲೆ ಎಳ್ಳಷ್ಟೂ ಕಡಿವಾಣ ಬಿದ್ದಿಲ್ಲ. ಲೆಸೆನ್ಸ್ ಪಡೆಯಬೇಕಾದರೆ ಲಂಚ, ಮನೆ ನೊಂದಾವಣಿ ಮಾಡಬೇಕಾದರೆ ಲಂಚ, ಟ್ರಾಫಿಕ್ ಪೊಲೀಸ್ ಕೈಯಲ್ಲಿ ಸಿಕ್ಕುಬಿದ್ದಾಗಲೂ ಲಂಚ, ಉತ್ತಮ ಸೇವೆಗಾಗಿ ವೈದ್ಯರಿಗೆ ಲಂಚ.... ಮಾನವರೇ, ಇದನ್ನು ಎಲ್ಲಿಯವರೆಗೆ ನಡೆಸಿಕೊಂಡು ಹೋಗುತ್ತೀರಿ ಎಂದು ನಮ್ಮನ್ನೇ ಧರಿತ್ರಿ ಅಲ್ಲಾಡಿಸಿದ್ದಾಳೆ.
ಒಂದೆಡೆ ಉತ್ತರ ಕರ್ನಾಟಕದಲ್ಲಿ, ದಕ್ಷಿಣ ಕರ್ನಾಟಕದಲ್ಲಿ ಭೂಮಿ ಬಾಯಿ ಬಿರಿದು ಕೂತಿದೆ. ಕುಡಿಯಲು ಹನಿ ನೀರಿಲ್ಲ, ದನಕರುಗಳಿಗೆ ಮೇವಿಲ್ಲ, ರೈತರಿಗೆ ವಿಷದ ಬಾಟಲಿಯೊಂದು ಬಿಟ್ಟು ಬೇರೇನೂ ಉಳಿದಿಲ್ಲ. ಇನ್ನೊಂದೆಡೆ ಅರಣ್ಯ ಪ್ರದೇಶವನ್ನು ಹಣದಾಹಿಗಳು ಎಲ್ಲೆಡೆಯಿಂದ ಸವರಿಹಾಕುತ್ತ ಬರುತ್ತಿದ್ದಾರೆ. ಅರಣ್ಯವೇ ನಿರ್ನಾಮವಾದ ಮೇಲೆ ಮಳೆಯಾದರೂ ಎಲ್ಲಿಂದ ಬಂದೀತು? ಬೆಳೆಯಾದರೂ ಎಲ್ಲಿಂದ ಹುಟ್ಟೀತು?
ಇದೆಲ್ಲ ಒಂದು ರೀತಿಯದಾದರೆ, ಹಳ್ಳಿಯಿಂದ, ಪಕ್ಕದ ರಾಜ್ಯಗಳಿಂದ, ದೂರದ ನಗರಗಳಿಂದ ಬೆಂಗಳೂರಿಗೆ ನದಿಯೋಪಾದಿಯಲ್ಲಿ ಬಂದು ಸೇರಿಕೊಳ್ಳುತ್ತಿದ್ದಾರೆ. ಅಪಾರ್ಟ್ಮೆಂಟುಗಳನ್ನು ಎಬ್ಬಿಸಿ, ಭೂಮಿಗೆ ನೀರಿಗಾಗಿ ತೂತು ಕೊರೆದು ಕೊರೆದು ಅಂತರ್ಜಲ ಬತ್ತಿಹೋಗಿದೆ. ಬಹುಶಃ ಜನರ ಭಾರವನ್ನು, ಈ ಭೂಮಿಯ ಮೇಲಾಗುತ್ತಿರುವ ಅನಾಚಾರವನ್ನು ಸಹಿಸಿಕೊಳ್ಳಲಾಗದೆ ಭೂಮಿ ಒಂದೆರಡು ಕ್ಷಣ ಕದಲಿದ್ದರೂ ಆಶ್ಚರ್ಯವಿಲ್ಲ. ಇನ್ನು ಮುಂದೆ ಏನು ಮಾಡಬೇಕೆಂದು ನೀವೇ ಸರಿಯಾದ ರೀತಿಯಲ್ಲಿ ನಿರ್ಧರಿಸದೆ ಹೋದರೆ, ಮುಂದಿನ ಅನಾಹುತಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಇಳೆ ನಮ್ಮನ್ನು ಎಚ್ಚರಿಸಿದ್ದಾಳೆ. ಏನಂತೀರಿ?
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications