ಮೈನಿಂಗ್ ಮಾಫಿಯಾಗೆ ದಕ್ಷ ಅಧಿಕಾರಿ ಬಲಿ

ಮಧ್ಯಪ್ರದೇಶದ ಮೊರೇನ ಜಿಲ್ಲೆಯಲ್ಲಿನ ಕಲ್ಲು ಗಣಿ ಮಾಫಿಯಾಕ್ಕೆಬನ್ಮೋರ್ ಪಟ್ಟಣದಲ್ಲಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿಯಾಗಿದ್ದ 30 ವರ್ಷದ ನರೇಂದ್ರ ಕುಮಾರ್ ಸಿಂಗ್ ಬಲಿಯಾಗಿದ್ದಾರೆ.
ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹಿಂಬಾಲಿಸಿ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ, ಅಧಿಕಾರಿ ಮಾತು ನಿರ್ಲಕ್ಷಿಸಿದ ಟ್ರ್ಯಾಕ್ಟರ್ ಚಾಲಕ ವಾಹನವನ್ನು ವೇಗವಾಗಿ ಚಲಾಯಿಸಿ ನರೇಂದ್ರ ಅವರ ಮೇಲೆ ಹರಿಸಿದ್ದಾರೆ.
ನರೇಂದ್ರ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ ಎಂದು ಉಪ ಪೊಲೀಸ್ ಮಹಾನಿರ್ದೇಶಕ ಡಿ.ಪಿ.ಗುಪ್ತ ಹೇಳಿದ್ದಾರೆ.












Click it and Unblock the Notifications