ಕೊಡಗಿನ ಕಾಮುಕ ಪೊಲೀಸನಿಗೆ ಇಲಾಖೆಯ ಶ್ರೀರಕ್ಷೆ

ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಕಳೆದ ನಾಲ್ಕು ವರ್ಷಗಳಿಂದ ಸೋಮವಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ.
2011 ರ ಏಪ್ರಿಲ್ ತಿಂಗಳಿನಿಂದ ಈಕೆ ಬದುಕು ಸಂಕಷ್ಟಮಯವಾಗಿದೆ. ಇದಕ್ಕೆ ಕಾರಣ ಇಲ್ಲಿನ ಇನ್ಸ್ಪೆಕ್ಟರ್ ವಿ ಕೃಷ್ಣಯ್ಯ. ಕೃಷ್ಣಯ್ಯ ತನ್ನ ಅಧೀನದಲ್ಲೇ ಕೆಲಸ ಮಾಡುತ್ತಿದ್ದ ಜ್ಯೋತಿಯ ಮೇಲೆ ತನ್ನ ಕಾಮುಕ ದೃಷ್ಟಿ ಬೀರಿದ್ದಾರೆ.
ಮೊದಲಿಗೆ ಈ ವಿವಾಹಿತ ಮಹಿಳಾ ಕಾನ್ಸ್ಟೇಬಲ್ ಜತೆ ಸಲಿಗೆಯಿಂದ ವರ್ತಿಸಲು ಆರಂಭಿಸಿದ ಈತ ನಂತರ ಮದ್ಯದ ಅಮಲಿನಲ್ಲಿ ಕಚೇರಿ ಮುಗಿದ ನಂತರ ರಾತ್ರಿ 11 ಗಂಟೆಯವರೆಗೆ ಕನಿಷ್ಟ 38 ಬಾರಿ ಮೊಬೈಲ್ ಗೆ ಕರೆ ಮಾಡಿದ್ದಾರೆ.
ಒಂದೆರಡು ಬಾರಿ ಕರೆ ಸ್ವೀಕರಿಸಿದಾಗ ಸಲುಗೆಯಿಂದ ಮಾತನಾಡಿದ್ದಾರೆ. ನಂತರ ಕರೆ ಸ್ವೀಕರಿದಿದ್ದಾಗ ಸೋಮವಾರಪೇಟೆ ಪೋಲೀಸ್ ಠಾಣೆಯ ಪೇದೆ ಈರಪ್ಪ ಅವರನ್ನು ಜ್ಯೋತಿ ಅವರ ಮನೆಗೆ ರಾತ್ರಿ 10.30 ಗಂಟೆಗೆ ಕಳುಹಿಸಿ ಕರೆ ಸ್ವೀಕರಿಸುವಂತೆಯೂ ಕೋರಿದ್ದಾನೆ.
ಜ್ಯೋತಿ ಅವರಿಗೆ ಪತ್ರಗಳನ್ನೂ ನೀಡಿದ್ದಲ್ಲದೆ, ಆಗಾಗ ಕ್ಯಾಡ್ ಬರಿ ಚಾಕಲೋಟ್ ತಿನ್ನಿಸಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ.
ಜ್ಯೋತಿ ಈತನ ವರ್ತನೆಯನ್ನು ಖಂಡಿಸಿ ಡಿವೈ ಎಸ್ ಪಿ ಜಯಪ್ರಕಾಶ್ ಹಾಗೂ ಎಸ್ ಪಿ ಮಂಜುನಾಥ್ ಅಣ್ಣಿಗೇರಿ ಅವರಿಗೆ ದೂರು ನೀಡಿದ್ದಾರೆ. ಆದರೆ, ಎಸ್ ಪಿ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ತನಿಖೆಗೆ ಆದೇಶಿಸಿದ ನಾಟಕವಾಡಿದ್ದಾರೆ.
ತನಿಖಾಧಿಕಾರಿ ಜಯ ಪ್ರಕಾಶ್ ಅವರು ಇನ್ಸ್ಪೆಕ್ಟರ್ ಕೃಷ್ಣಯ್ಯನನ್ನು ತಪ್ಪಿತಸ್ಥನೆಂದು ವರದಿ ನೀಡಿದರೂ ಈ ಇನ್ಸ್ಪೆಕ್ಟರ್ ವಿರುದ್ದ ಏನೂ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಕಂಗಾಲಾದ ಜ್ಯೋತಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ ಅದು ಪೊಲೀ ಇಲಾಖೆ ಸಹದ್ಯೋಗಿಗಳಿಂದ ಎಂಬುದು ಆಘಾತಕಾರಿಯಾಗಿದೆ.
ಜ್ಯೋತಿಗೆ ಕಾದಿತ್ತು ಇನ್ನೊಂದು ಶಾಕ್? ಮುಂದೆ ಓದಿ
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications