10 ಸಾವಿರ ಕೋಟಿ ಅವ್ಯವಹಾರದಲ್ಲಿ ಆಚಾರ್ಯ
ಬಿಎಂಎಸ್ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿಯಾಗಿರುವ ಬಿವಿ ಆಚಾರ್ಯ ಜೊತೆಗೆ ಉದ್ಯಮಿ ಪಿ ದಯಾನಂದ ಪೈ ಹಾಗೂ ಇತರೆ ಮೂವರು ಸದಸ್ಯರನ್ನು ಕೂಡಾ ಆರೋಪಿಗಳು ಎಂದು ಹೆಸರಿಸಿ ಎನ್ ವೆಂಕಟಾಚಲಯ್ಯ ಎಂಬುವರು ದೂರು ನೀಡಿದ್ದಾರೆ.
ಲಕ್ಷ್ಮಮ್ಮ ಬಿಎಂ ಶ್ರೀನಿವಾಸಯ್ಯ ದಾನ ದತ್ತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಆಗಿರುವ ವೆಂಕಟಾಚಲಯ್ಯ ಅವರು ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಆಚಾರ್ಯ ಸೇರಿದಂತೆ ಸಹ ಆರೊಪಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.
ಬಿವಿ ಆಚಾರ್ಯ, ಎಚ್ ಯು ತಳವಾರ್, ಬಿಎಸ್ ರಾಗಿಣಿ ನಾರಾಯಣ್, ಪಿ ದಯಾನಂದ ಪೈ ಹಾಗೂ ವಿಜಯ್ ಗೋರೆ ಅವರು ಟ್ರಸ್ಟ್ ಹಣವನ್ನು ನುಂಗಿ ಹಾಕಿದ್ದಾರೆ. ಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಬಿಎಂ ಶ್ರೀನಿವಾಸಯ್ಯ ಶಿಕ್ಷಣ ಟ್ರಸ್ಟ್ ನ ಮೌಲ್ಯ ಸುಮಾರು 10,000 ಕೋಟಿ ದಾಟಲಿದೆ. ಅದರೆ, ಆರೋಪಿಗಳು ಇನ್ನೂ ಹೆಚ್ಚಿನ ಹಣವನ್ನು ನುಂಗಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದೇವೇಗೌಡರ ಗುಡುಗು: 2009ರಲ್ಲಿ ಟ್ರಸ್ಟ್ ಸದಸ್ಯರನ್ನು ಬದಲಾಯಿಸಿದ ನಂತರ ಈ ಅವ್ಯವಹಾರ ಹೆಚ್ಚಾಗಿದೆ. ಚೆಕ್ ಗಳು ಬೇರೆ ಬೇರೆ ಖಾತೆಗಳಿಗೆ ರವಾನಿಸಲಾಗಿದೆ. ರಾಗಿಣಿ ನಾರಾಯಣ್ ಅವರ ಸದಸ್ಯತ್ವದ ಬಗ್ಗೆ ಕೂಡಾ ಅನುಮಾನವಿದೆ. ವೆಂಕಟಾಚಲಯ್ಯ ಅವರು ಮಾಡಿರುವ ಅರೋಪಗಳು ಸರಿಯಾಗಿದೆ. ಆಚಾರ್ಯ ಅವರು ಪ್ರತಿಕ್ರಯೆ ನೀಡಿದರೆ ನುಣುಚಿಕೊಳ್ಳುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದ್ದರು.