ಕರೆಂಟ್ ಇಲ್ಲ,ಪೇಪರ್ ಇಲ್ಲ, ಸವದಿ ಸ್ವಕ್ಷೇತ್ರ ಟೋಟಲ್ ಬಂದ್

Total bundh in Athani town
ಅಥಣಿ, ಫೆ 8: ಮಾಜಿ ಸಚಿವ ಲಕ್ಷ್ಮಣ್ ಸವದಿ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ವಿರೋಧ ಪಕ್ಷಗಳು ಕರೆನೀಡಿದ್ದ ಬಂದ್ ಗೆ ಸಾರ್ವಜನಿಕರಿಂದ ಇದೀಗ ಬಂದ ವರದಿಗಳ ಪ್ರಕಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಬಂದ್ ಗೆ ಕರೆನೀಡಿವೆ.

ಅತ್ಯಂತ ವಿಪರ್ಯಾಸದ ಸಂಗತಿ ಏನೆಂದರೆ, ಅಥಣಿ ಟೌನ್ ನಲ್ಲಿ ವಿದ್ಯುತ್ ಮತ್ತು ದಿನಪತ್ರಿಕೆ ಸರಬರಾಜು ಸಂಪೂರ್ಣ ಬಂದ್ ಆಗಿದ್ದು, ಸವದಿ ಬೆಂಬಲಿಗರು ಇವೆರಡಕ್ಕೂ ತಡೆಯೊಡ್ಡಿದ್ದಾರೆಂದು ಅನಧಿಕೃತ ಮೂಲಗಳಿಂದ ವರದಿಯಾಗಿದೆ.

ಗೋಕಾಕ್ ಪಟ್ಟಣದಿಂದ ಯಾವುದೇ ದಿನಪತ್ರಿಕೆಗಳು ಅಥಣಿ ಕಡೆ ಹೋಗುತ್ತಿಲ್ಲ. ಬೆಳಗಾವಿಯಿಂದ 150 ಕಿ.ಮೀ ದೂರದಲ್ಲಿರುವ ಅಥಣಿ ಪಟ್ಟಣವನ್ನು ಸಚಿವ ಲಕ್ಷಣ್ ಸವದಿ ಪ್ರತಿನಿದಿಸುತ್ತಿದ್ದಾರೆ. ತನ್ನ ಕ್ಷೇತ್ರದಲ್ಲಿ ಆಗುವ ಇನ್ನಷ್ಟು ಅವಮಾನಗಳಿಂದ ತಪ್ಪಿಸಲು ಸವದಿ ಹುಕುಂ ಮೇರೆಗೆ ಅವರ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+