ಅಪರಿಚಿತರ ಪ್ರವೇಶ: ಶಬರಿಮಲೆ ಭದ್ರೆತೆಗೆ ಆತಂಕ

ದೇವಾಸ್ಥಾನದ ವಿಜಿಲೆನ್ಸ್ ವಿಭಾಗ ನಡೆಸಿದ ತನಿಖೆಯಲ್ಲಿ ಈ ಮೇಲಿನ ಅಂಶ ಬಹಿರಂಗ ಗೊಂಡಿದ್ದು, ಸುಮಾರು 250 ಮಂದಿ ಪೋಲೀಸ್ ಕ್ಲಿಯೇರನ್ಸ್ ಪತ್ರವನ್ನೇ ನಕಲಿ ಮಾಡಿ ದೇವಾಲಯದ ಆವರಣಕ್ಕೆ ಆಗಮಿಸಿದ್ದಾರೆ. ಇದರಲ್ಲಿ ಬಹಳಷ್ಟು ಮಂದಿ ಕ್ಷೇತ್ರದ ಸನ್ನಿಧಾನ ಮತ್ತು ಇತರ ಕಡೆ ಕೆಲಸ ಕೂಡಾ ನಿರ್ವಹಿಸುತ್ತಿದ್ದಾರೆಂದು ವರದಿಯಾಗಿದೆ.
ಶಬರಿಮಲೆಗೆ ವಿವಿಧ ಕೆಲಸಗಳಿಗೆ ಬರುವವರಲ್ಲಿ ಯಾರಾದರೂ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆಯೇ ಅಥವಾ ಶಿಕ್ಷೆ ಅನುಭವಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯ ಪಡಿಸುವ ಪೋಲೀಸ್ ಕ್ಲಿಯೇರನ್ಸ್ ಪತ್ರವನ್ನೇ ನಕಲಿ ಮಾಡಿರುವ ಬಗ್ಗೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಗೃಹ ಖಾತೆಗೆ ಪತ್ರ ಬರೆಯಲಾಗಿದೆ ಎಂದು ಮಂಡಳಿ ಹೇಳಿಕೆ ನೀಡಿದೆ.
ಗುರುತಿನಪತ್ರ ಇಲ್ಲದವರನ್ನು ವಿಜಿಲೆನ್ಸ್ ಕಂಡು ಹಿಡಿದಿದ್ದರೂ ಇಂಥವರನ್ನು ಶಬರಿಮಲೆಯಿಂದ ಹೊರ ಕಳುಹಿಸುವುದಕ್ಕೆ ಅಥವಾ ಕ್ರಮ ತೆಗೆದು ಕೊಳ್ಳಲು ಕೇರಳ ಪೊಲೀಸರು ಇದುವರೆಗೆ ಮುಂದಾಗದೆ ಇರುವುದು ವ್ಯಾಪಕ ಟೀಕೆಗೆ ಒಳಗಾಗಿದೆ.












Click it and Unblock the Notifications