ಅಕ್ರಮ ಆಸ್ತಿ ಗಳಿಕೆ, ಚಂದ್ರಬಾಬು ನಾಯ್ಡುಗೆ ಸಿಬಿಐ ಬುಲಾವ್

1995 ರಿಂದ 2004ರ ಅವಧಿಯಲ್ಲಿ ತೆಲುಗು ದೇಶಂ ಪಕ್ಷ ಹಾಗೂ ಅದರ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಗಳಸಿರುವ ಆಸ್ತಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಂಧ್ರಪ್ರದೇಶ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂರು ತಿಂಗಳೊಳಗೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಿಬಿಐಗೆ ಹೇಳಿದೆ.
ಟಿಡಿಪಿ ಹಾಗೂ ವೈಎಸ್ ಆರ್ ಕಾಂಗ್ರೆಸ್ ಕದನ ತಾರಕ್ಕೇರುತ್ತಿರುವುದನ್ನು ಕಂಡು ಕಾಂಗ್ರೆಸ್ ಪಕ್ಷ ಸಂಭ್ರಮ ಆಚರಿಸುತ್ತಿದೆ.
ಅಸಲಿಗೆ ನಾಯ್ಡು ಮೇಲೆ ಸಿಬಿಐ ಕಣ್ಣು ಬೀಳಲು ಜಗನ್ ಕಾರಣವೇ...?












Click it and Unblock the Notifications