'ಕೊನೆಯ ಉಪ ಚುನಾವಣೆಯಲ್ಲಿ ಯಡಿಯೂರಪ್ಪಗೆ ಮೊದಲ ಸೋಲು ನಿಶ್ಚಿತ'

ಆದರೆ ಯಡಿಯೂರಪ್ಪ ಯಶಸ್ಸಿನ ಹಿಂದೆ ಬಳ್ಳಾರಿ ರೆಡ್ಡಿ ಸೋದರರ ದಟ್ಟ ಛಾಯೆಯಿತ್ತು. ಸಾರಥ್ಯವಷ್ಟೇ ಯಡಿಯೂರಪ್ಪನವರದಾಗಿತ್ತು. ಆದರೆ ಈ ಬಾರಿ ಈ ಸಾರಥಿಗೇ ಸಡ್ಡು ಹೊಡೆಯಲು ಬಳ್ಳಾರಿ ರೆಡ್ಡಿ ಸೋದರರು ನಿರ್ಧರಿಸಿದ್ದಾರೆ. ಶತಾಯಗತಾಯ ಗೆಲ್ಲಬೇಕೆಂದು ಯಡಿಯೂರಪ್ಪ ಗೆಲ್ಲುವ ಯತ್ನ ನಡೆಸಿದರೂ ಸೋಲು ಅವರಿಗೆ ಖಚಿತ ಎನ್ನುತ್ತಾರೆ ವಿಶ್ಲೇಷಕರು.
ಹಾಗೆ ನೋಡಿದರೆ ಭ್ರಷ್ಟಾಚಾರದ ಕೆಸರಿನ ಮಧ್ಯೆಯೂ ಯಡಿಯೂರಪ್ಪ ಕಮಲವನ್ನು ಅರಳಿಸಿದ್ದಾರೆ. ಇದಕ್ಕಾಗಿ ಅವರು ಪಕ್ಷದ ಹೈಕಮಾಂಡಿಗೇ ಸಡ್ಡು ಹೊಡೆದಿದ್ದರು. ಕೊಪ್ಪಳ ಉಪ ಚುನಾವಣೆ ಖಂಡಿತಾ ಯಡಿಯೂರಪ್ಪನವರ ಗೆಲುವೇ ಎನ್ನಬಹುದು. ಆದಾಗ್ಯೂ, ಈ ಬಾರಿ ಯಡಿಯೂರಪ್ಪ ಜಾದೂ ನಡೆಯದು.
ಜೈಲಿನಿಂದ ಬಿಡುಗಡೆಯಾಗಿ ನವ ಚೈತನ್ಯ ಪಡೆದಿರುವ ಯಡಿಯೂರಪ್ಪ ಎಷ್ಟೇ ಪ್ರಯತ್ನಿಸಿದರೂ ಈ ಉಪ ಚುನಾವಣೆಯಲ್ಲಿ ತಮ್ಮ ಕರಾಮತ್ತು ತೋರಿಸಲಾಗದು. ಒಂದು ವೇಳೆ ಯಡಿಯೂರಪ್ಪ ಗೆಲ್ಲಬೇಕಾದರೆ ದೊಡ್ಡ ಪವಾಡವೇ ನಡೆಯಬೇಕು ಎನ್ನುತ್ತಿದ್ದಾರೆ ಬಳ್ಳಾರಿ ಮಂದಿ.












Click it and Unblock the Notifications