ಬಿಜೆಪಿಗೆ ಕಟ್ಟಕಡೆಯ ಉಪ ಚುನಾವಣೆಯಲ್ಲಿ ದಂತ ಭಗ್ನ!

bjp-defeat-definite-in-by-poll-political-analysts
ಬೆಂಗಳೂರು, ನ. 10: ಮೊದಲ ಚುಂಬನಂ ದಂತ ಭಗ್ನಂ ಎನ್ನುವುದು ಲೋಕರೂಢಿ ಮಾತು. ಆದರೆ ಇದಕ್ಕೆ ಅಪವಾದ ಎಂಬಂತೆ ರಾಜ್ಯ ಬಿಜೆಪಿಗೆ ಕಟ್ಟಕಡೆಯ ಉಪ ಚುನಾವಣೆಯಲ್ಲಿ ಅಪಜಯ ಅನುಭವಿಸುವುದು ಖಚಿತ ಎಂದು ರಾಜಕೀಯ ವಿಶ್ಲೇಷಣೆಕಾರರು ಅದಾಗಲೇ ಭವಿಷ್ಯ ನಿಡುಯತೊಡಗಿದ್ದಾರೆ.

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಶ್ರೀರಾಮುಲು ಬಿಜೆಪಿಗೆ ಬಳ್ಳಾರಿಯ ಜಾಲಿ ಮುಳ್ಳಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ವಿಧಾನಸಭೆಗೆ ಇದು ಕೊನೆಯ ಉಪ ಚುನಾವಣೆ ಎನ್ನಬಹುದು.

110 ಶಾಸಕರ ಬಲದೊಂದಿಗೆ ಅಧಿಕಾರಕ್ಕೆ ಬರುವ ತರಾತುರಿಯಲ್ಲಿ ಉಪ ಚುನಾವಣೆಯ ಪರ್ವವನ್ನೇ ಆರಂಭಿಸಿದ್ದ ಬಿಜೆಪಿ ಇದುವರೆಗೆ ಒಂದೂ ಉಪ ಚುನಾವಣೆಯನ್ನು ಸೋತಿಲ್ಲ. ಆದರೆ ಕೊನೆಯದರಲ್ಲಿ ಅದರ ನೀತಿಯೇ (ಆಪರೇಶನ್ ಕಮಲ) ಪಕ್ಷಕ್ಕೆ ಜಾಲಿಮುಳ್ಳಾಗಲಿದೆ.

ಹಾಗೆ ನೋಡಿದರೆ ಆಪರೇಶನ್ ಕಮಲ ಸೂತ್ರದ ರೂವಾರಿಗಳೇ ಬಳ್ಳಾರಿ ರೆಡ್ಡಿ ಸೋದರರು. ಆಪರೇಶನ್ ಕಮಲದ ಅಷ್ಟೂ ಜಯಗಳು ಇವರಿಗೇ ಸಲ್ಲಬೇಕು. ಆಪರೇಶನ್ ಕಮಲದ ಫಲವಾಗಿ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿಲ್ಲವಾದರೂ ಈ ಬಾರಿಯೂ ಗೆಲುವು ರೆಡ್ಡಿ ಸೋದರರಿಗೇ ಕಟ್ಟಿಟ್ಟಬುತ್ತಿ ಎಂದು ವಿಶ್ಲೇಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+