ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್‌ ಭೂ ಹಗರಣ: ನಿವೇಶನ ಬಿಡಿಎಗೆ ವಾಪಸ್; ಕೇಸ್ ಖಲಾಸ್ ?

By Srinath
|
Google Oneindia Kannada News

denotification-ashoka-gifts-chargesheeted-land-to-bda
ಬೆಂಗಳೂರು, ನ.7: ಭೂಹಗರಣದ ಶನಿಯನ್ನು ಹೆಗಲಿಗೇರಿಸಿಕೊಂಡಿರುವ ಗೃಹ ಸಚಿವ ಆರ್‌. ಅಶೋಕ್‌ ವಿವಾದಿತ ನಿವೇಶನವನ್ನು ದಾನವೀರ ಶೂರ ಕರ್ಣನಂತೆ ಬಿಡಿಎಗೆ ಮುಫತ್ತಾಗಿ ವಾಪಸ್ ಮಾಡಿದ್ದಾರೆ. ಇದರೊಂದಿಗೆ ಅಶೋಕ್‌ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿಕೊಂಡಿರುವ ಕೇಸ್ ಖಲಾಸ್ ಆಗುತ್ತದಾ ಎಂಬವ ಪ್ರಶ್ನೆ ಎದ್ದಿದೆ.

ಸದ್ಯೋಭವಿಷ್ಯತ್ತಿನಲ್ಲಿ ಅಕ್ರಮ ಡಿನೋಟಿಫಿಕೇಶನ್ ಭೂತ ಕಾಡುವ ಸುಳಿವನ್ನರಿತ ಸಚಿವ ಅಶೋಕ್ ತಕ್ಷಣವೇ ಸದರಿ ವಿವಾದಿತ ಭೂಮಿಯನ್ನು ಸಾಮಾಜಿಕ ಉಪಯೋಗಕ್ಕಾಗಿ ಬಳಸಿಕೊಳ್ಳುವಂತೆ ಕೋರಿ ಬಿಡಿಎ ಪತ್ರ ಬರೆದು ತಿಳಿಸಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಕೇಸ್ ನಿಂದ ನಾನು ಬಚಾವ್ ಎಂದು ಅಶೋಕ್ ಹೇಳಿದ್ದಾರೆ.

ಆದರೆ ... ಈ ಹಿಂದೆ ಹೀಗೇ ಭೂತಾರಾಧನೆಯಲ್ಲಿ ತೊಡಗಿದ್ದ ಅನೇಕ ಭೂತರಾಜರು ಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ತೆಪ್ಪಗೆ ಭೂಮಿಯನ್ನು ವಾಪಸ್ಸು ಮಾಡಿದರಾದರೂ ಒಬ್ಬರನ್ನು ಬಿಟ್ಟು ಎಲ್ಲರೂ ಜೈಲು ಸೇರಿಕೊಂಡರು. ಸೋ, ಈ ಲೆಕ್ಕಾಚಾರದಲ್ಲಿ ನೋಡಿದಾಗ ಅಶೋಕ್ ಸಹ ಭೂಮಿ ವಾಪಸ್ ಮಾಡಿದರೂ ಕೇಸಿನಿಂದ ಬಚಾವಾಗುವುದು ಕಷ್ಟ ಕಷ್ಟ ಎನ್ನಲಾಗಿದೆ. ನವೆಂಬರ್ 21ರವರೆಗೂ ಅಶೋಕ ಮಹಾರಾಜಗೆ ಶಾಂತಿಕಾಲ ಇದ್ದಂತಿದೆ.

ಇನ್ನೆಲ್ಲಿಯ ಕೇಸು!?: 'ಇನ್ನೆಲ್ಲಿಯ ವಿವಾದ!? ನಾನು ಎಂದೋ (2 ತಿಂಗಳ ಹಿಂದೆ) ಲೊಟ್ಟೆಗೊಲ್ಲಹಳ್ಳಿಯ ಬಿಇಎಲ್ ವೃತ್ತದಲ್ಲಿರುವ ವಿವಾದಿತ ಭೂಮಿಯನ್ನು ಸಾರ್ವಜನಿಕ ಬಳಕೆಗಾಗಿ ಬಿಡಿಎಗೆ ದಾನ ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಇದರಲ್ಲಿ ಸಿಕ್ಕಿಹಾಕಿಕೊಂಡೆ' ಎಂದು ವಿಷಾದಛಾಯೆ ಹೊತ್ತು ಅಶೋಕ್ ಹೇಳಿದ್ದಾರೆ.

English summary
In a letter to BDA, R Ashoka said he was returning the land which he allegedly got denotified by then CM Yeddyurappa. But the moot point is whether it will save him from the punitive arm of the law. Home minister drops ‘hot’ land, but may still face chargesheet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X