ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ: ಹೈ ಕಮಾಂಡ್ vs ಯಡಿಯೂರಪ್ಪ ಯುದ್ಧ

By Mahesh
|
Google Oneindia Kannada News

BS Yeddyurappa
ಕೊಪ್ಪಳ, ಸೆ.15: 'ಕೊಪ್ಪಳ ಚುನಾವಣೆಯನ್ನು ಯಡಿಯೂರಪ್ಪನವರ ನಾಯಕತ್ವದಲ್ಲಿಯೇ ಸೆಣಸಬೇಕು. ಅವರಿಂದ ಮಾತ್ರ ಗೆಲುವುದು ಸಾಧ್ಯ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ನಾಯಕತ್ವದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ' ಎಂದು ಹಿರಿಯ ಬಿಜೆಪಿ ನಾಯಕ ಡಿಬಿ ಚಂದ್ರೇಗೌಡ ಹೇಳಿದ್ದು ಹೈಕಮಾಂಡ್ ಗೆ ಚುರುಕು ಮುಟ್ಟಿಸಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಈಗ ಚೇತರಿಸಿಕೊಂಡು ಮೇಲಕ್ಕೆದ್ದು ನಿಂತಿದ್ದರೂ ಚುನಾವಣೆ ನಾಯಕತ್ವ ವಹಿಸುವಂತಿಲ್ಲ. ಜಗದೀಶ್ ಶೆಟ್ಟರ್ ಎಂದಿದ್ದರೂ ಎರಡನೆ ಸಾಲಿನ ನಾಯಕ. ಹಾಲಿ ಸಿಎಂ ಸದಾನಂದ ಗೌಡರು ಒಲ್ಲದ ಮನಸ್ಸಿನಿಂದ ಕರಡಿ ಪಕ್ಕದಲ್ಲಿ ನಿಂತು ಕಿಸಕ್ಕನೆ ನಗುತ್ತಿದ್ದಾರೆ.

ಅಜೇಯ ವೀರನಿಗೆ ಮತ್ತೆ ಮಣೆ: ಹೈಕಮಾಂಡ್ ವಿರೋಧದ ನಡುವೆಯೂ ಕೊಪ್ಪಳಕ್ಕೆ ಬಂದು ಗವಿ ಸಿದ್ದೇಶ್ವರ, ಮಲೆ ಮಲ್ಲೇಶ್ವರ ಗುಡಿಗೆ ತೆರಳಿ ಕೈ ಮುಗಿದು ಬಂದಿರುವ ಬಿಎಸ್ ಯಡಿಯೂರಪ್ಪ ಅವರು ಕರಡಿ ಅವರನ್ನು ಗೆಲ್ಲಿಸಲು ಸಂಕಲ್ಪ ತೊಟ್ಟಿದ್ದಾರೆ.

ನನ್ನ ನೇತೃತ್ವದಲ್ಲಿ ಲೋಕಸಭೆ, ವಿಧಾನ ಸಭೆ, ನಗರಪಾಲಿಕೆ ಚುನಾವಣೆಯನ್ನು ಗೆದ್ದು ಸಿಹಿ ತಿಂದು ಸಂಭ್ರಮಿಸಿದ ಬಿಜೆಪಿ ವರಿಷ್ಠರು, ಕಷ್ಟಕಾಲದಲ್ಲಿ ನನ್ನ ಕೈ ಹಿಡಿಯಲಿಲ್ಲ ಎಂಬ ನೋವು ಯಡಿಯೂರಪ್ಪ ಅವರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಇದನ್ನು ಪ್ರಚಾರ ಸಮಾರಂಭದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಕೂಡಾ.

ಒಂದು ಕುಟುಂಬದಲ್ಲಿ ಅಣ್ಣ ತಮ್ಮಂದಿರಂತೆ ಇದ್ದ ನಮ್ಮನ್ನು ಅಕ್ರಮ ಗಣಿಗಾರಿಕೆ ವರದಿ ಹಾಳು ಮಾಡುಬಿಟ್ಟಿತು, ವರದಿಯನ್ನು ನಂಬಿಕೊಂಡು ಹೈಕಮಾಂಡ್ ಕ್ರಮ ಜರುಗಿಸಿದ್ದು ನೋವು ತಂದಿದೆ ಎಂದ ಯಡಿಯೂರಪ್ಪ ಕಣ್ಣಲ್ಲಿ ಹೈಕಮಾಂಡ್ ಪಾಠ ಕಲಿಸುವ ಚಾಲೆಂಜ್ ಕಾಣಿಸುತ್ತಿತ್ತು.

ಯಡಿಯೂರಪ್ಪ ಅವರನ್ನು ಮೂಲೆಗುಂಪಾಗಿಸಿ ಸಾಮೂಹಿಕ ನಾಯಕತ್ವದ ಪರ ನಿಂತಿರುವ ಬಿಜೆಪಿಗೆ ತನ್ನ ತಂತ್ರವೇ ಮುಳುವಾಗುವ ಸಾಧ್ಯತೆಯದೆ. ಯಡಿಯೂರಪ್ಪ ನೇತೃತ್ವದಲ್ಲಿ 1999. 2004 ಹಾಗೂ 2008ರಲ್ಲಿ ಬಿಜೆಪಿ ಕೀರ್ತಿ ಪಾತಕೆ ಹಾರಿಸಿದ ಯಡಿಯೂರಪ್ಪ ಮತ್ತೊಮ್ಮೆ ಈ ಆಂತರಂಗ, ಬಹಿರಂಗ ಸಮರ ಗೆಲ್ಲುತ್ತಾರಾ? ಸೆ.26 ರ ನಂತರ ಉತ್ತರ ದೊರೆಯಲಿದೆ.

English summary
Koppal By Election 2011: Former CM BS Yeddyurappa all set to show is power by continuing his winning strike in polls. BSY want to prove that he can lead the Team BJP even after dethroned from CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X