ವಿಧಾನಸೌಧ ಎದುರು ಸಂತೋಷ್ ಹೆಗ್ಡೆ ಪ್ರತಿಮೆ ಸ್ಥಾಪಿಸಿ

ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದು, ವಿಧಾನಸೌಧದ ಬಳಿ ಅವರ ಪ್ರತಿಮೆ ನೋಡುತ್ತಿದ್ದಂತೆ ಭ್ರಷ್ಟರಿಗೆ ನಡುಕ ಹುಟ್ಟಬೇಕು ಎಂದು ಅಭಿಪ್ರಾಯಪಟ್ಟರು. ಲೋಕಾಯುಕ್ತರಾಗಿ ಸರ್ಕಾರಕ್ಕೆ ಅನೇಕ ವರದಿಗಳನ್ನು ನೀಡಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ವರದಿಗಳು ಮೂಲೆಗೆ ಸೇರಿವೆ ಎಂದು ವಿಷಾದಿಸಿದರು.
ಜನ ಲೋಕಪಾಲ ಮಸೂದೆ ಸಿದ್ಧಪಡಿಸುವ ಕಾರ್ಯದಲ್ಲಿಯೂ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅವರಾದ ಸಂತೋಷ್ ಹೆಗ್ಡೆ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಈಗಿನ ಲೋಕಾಯುಕ್ತರಾದ ಶಿವರಾಜ ಪಾಟೀಲ್ ಅವರು ಸಹ ಸಂತೋಷ್ ಹೆಗ್ಡೆ ಅವರ ಕಾರ್ಯವೈಖರಿಯನ್ನು ಮುಂದುವರಿಸುವ ಮೂಲಕ ಭ್ರಷ್ಟರನ್ನು ಮಟ್ಟಹಾಕಬೇಕು ಎಂದೂ ಬಂಗಾರಪ್ಪ ಆಗ್ರಹಿಸಿದರು.












Click it and Unblock the Notifications