Get Updates
Get notified of breaking news, exclusive insights, and must-see stories!

ಬಿಜೆಪಿ ಶಾಸಕರನ್ನು ಇಂಡೋನೇಷ್ಯಾಗೆ ಹೊತ್ತೊಯ್ದ ರೆಡ್ಡಿಗಳು

ಬಳ್ಳಾರಿ, ಆಗಸ್ಟ್ 24: ಅಧಿಕಾರದಲ್ಲಿ ಇಲ್ಲದಿದ್ದರೆ ತಮ್ಮ ಪಾಡು ಏನಾಗಬಹುದು ಎಂಬುದು ಬಳ್ಳಾರಿಯ ರೆಡ್ಡಿ ಸೋದರರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಸಂಪುಟದಿಂದ ದೂರಚಾಗಿರುವ ರೆಡ್ಡಿ ಸಹೋದರರು, ತಮಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಸರಕಾರವನ್ನು ಬ್ಲಾಕ್‌ಮೇಲ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಮತ್ತು ನೆರೆ ಜಿಲ್ಲೆಗಳ ಕೆಲ ಬಿಜೆಪಿ ಶಾಸಕರನ್ನು ರೆಡ್ಡಿ ಸಹೋದರರು ಇಂಡೋನೇಷ್ಯಾಗೆ ಕಳುಹಿಸಿದ್ದಾರೆ. ಒಂದು ತಂಡ ಸೋಮವಾರವೇ ತೆರಳಿದೆ. ಮಂಗಳವಾರ ಕೂಡ ಒಂದು ತಂಡ ಹೋಗಿದೆ ಎಂದು ಗೊತ್ತಾಗಿದೆ. 14 ಮಂದಿ ಶಾಸಕರು ತಮ್ಮ ಬೆಂಬಲಕ್ಕೆ ಇದ್ದು, ತಾವು ಹೇಳಿದವರು ಸಚಿವರಾಗಬೇಕು. ಶ್ರೀರಾಮುಲು ಸೇರಿದಂತೆ ಐದು ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂದು ರೆಡ್ಡಿ ಬಣ ಒತ್ತಡ ಹಾಕಿದೆ ಎಂದು ಗೊತ್ತಾಗಿದೆ.

ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಶಾಸಕರನ್ನು ಸೇರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬಳ್ಳಾರಿ ಜಿಲ್ಲೆಯ ಬಿಜೆಪಿ ಶಾಸಕರೆಲ್ಲ ಒಗ್ಗಟ್ಟಾಗಿದ್ದು, ರೆಡ್ಡಿ ಬಣದ ಜತೆ ಇದ್ದಾರೆ. ಅವರಲ್ಲೂ ಕೆಲವರನ್ನು ಇಂಡೋನೇಷ್ಯಾಕ್ಕೆ ಕರೆದೊಯ್ಯಲಾಗಿದೆ.

ಅಲ್ಲದೆ, ಇತರ ಶಾಸಕರನ್ನು ಕೂಡಾ ತಮ್ಮತ್ತ ಸೆಳೆಯುವ ಯತ್ನವನ್ನು ಕೂಡಾ ಅವರು ನಡೆಸುತ್ತಿದ್ದಾರೆನ್ನಲಾಗಿದೆ. ಮುಂದಿನ ಮೂರನೆ ಹಂತದ ಸಂಪುಟ ವಿಸ್ತರಣೆಯ ವೇಳೆ ತಮಗೆ ಕನಿಷ್ಠ ನಾಲ್ಕು ಸ್ಥಾನಗಳನ್ನು ನೀಡುವಂತೆ ರೆಡ್ಡಿ ಸಹೋದರರು ಪಟ್ಟು ಹಿಡಿದಿದ್ದಾರೆನ್ನಲಾಗುತ್ತಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಉತ್ತರವೇನು, ಮುಂದಿನ ಭಾಗದಲ್ಲಿ ನೋಡಿ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+