ಸರ್ಕಾರ ಬಿದ್ದರೂ ಪರವಾಗಿಲ್ಲ ರೆಡ್ಡಿಗಳಿಗೆ ಸೊಪ್ಪು ಹಾಕಲ್ಲ

ರೆಡ್ಡಿಗಳ ಉಪಟಳದಿಂದ ರಾಜ್ಯ ಸರ್ಕಾರ ಬಿದ್ದರೆ ಅದೇ ಬಿಜೆಪಿಯ ಮುಂದಿನ ಚುನಾವಣಾ ವಿಷಯವಾಗಲಿದೆ. ಈಗಿನ ಎಲ್ಲ ಹಗರಣಗಳೂ ಮರೆಯಾಗಿ ರೆಡ್ಡಿಗಳ ಮೇಲಾಟವನ್ನೇ ಜನರಿಗೆ ತಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ರಾಷ್ಟ್ರಪತಿ ಆಡಳಿತ ಬಂದರೆ ಗಣಿಧಣಿಗಳ ಗತಿ ಏನಾಗುತ್ತದೆ ಎಂಬುದು ಅವರಿಗೇ (ರೆಡ್ಡಿ ಬಣಕ್ಕೆ) ಚೆನ್ನಾಗಿ ಗೊತ್ತಿದೆ. ಹೀಗಾಗಿ ಯಾವ ಒತ್ತಡಕ್ಕೂ ಮಣಿಯಬಾರದು ಎಂಬುದು ಪಕ್ಷದ ದೃಢ ನಿಲುವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.











Click it and Unblock the Notifications