ಹಾಸನದಲ್ಲಿ ಹಾಲಿನ ಡೇರಿ ಕಟ್ಟಲು ವಿಪ್ರೊ ಕೆಲಸ ಬಿಟ್ಟರು...

ಗ್ರಾಹಕರು ಮತ್ತು ರೈತರಿಗೆ ಅನುಕೂಲವಂತೆ ಸುಮಾರು 24 ಎಕರೆ ಪ್ರದೇಶದಲ್ಲಿ 15 ಕೋಟಿ ರು. ವೆಚ್ಚದಲ್ಲಿ ಈ ಹಾಲಿನ ಡೇರಿ ನಿರ್ಮಿಸಲಾಗುತ್ತಿದೆ. ಹಾಲು ಕರೆಯುವ ಯಂತ್ರ, ದನಗಳ ಆರೋಗ್ಯ ತಪಾಸನೆ, ಮತ್ತು ದನಗಳ ಚಲನವಲನ ಇತ್ಯಾದಿ ಪರಿವೀಕ್ಷಣೆಗೆ ಸ್ಯಾಟಲೈಟ್ ಆಧರಿತ ವಿಶೇಷ ಸಾಫ್ಟ್ ವೇರ್ ಕೂಡ ಇವರು ನಿರ್ಮಿಸಿದ್ದಾರೆ.
ಆಧುನಿಕ ಹೈನುಗಾರಿಕೆ ತಂತ್ರಗಳ ಕುರಿತು ರೈತರಿಗೆ ಅರಿವು ಮೂಡಿಸಿ ಹಾಲಿನ ಉತ್ಪಾದನೆ ಹೆಚ್ಚಿಸುವುದು ಇವರ ಕನಸು. ವಿಶಾಲವಾದ ಹಾಲಿನ ಡೇರಿಯಲ್ಲಿ ಗ್ರಾಮದ ಸುಮಾರು 500 ಜನರಿಗೆ ಉದ್ಯೋಗ ಕೂಡ ದೊರಕಲಿದೆ ಎಂದು ರಂಜಿತ್ ಮುಕುಂದನ್ ಹೇಳುತ್ತಾರೆ.
ಇವರು ಜಿಎನ್ಎಸ್ ರೆಡ್ಡಿ ಮತ್ತು ಟಿ ಪ್ರಸನ್ನ ಅವರ ನೇತೃತ್ವದಲ್ಲಿ ಅಕ್ಷಯಕಲ್ಪ ಫಾರ್ಮ್ಸ್ ನಿರ್ಮಿಸಲಿದ್ದಾರೆ. ಇದಕ್ಕೆ ಈ ನಾಲ್ಕು ಜನರು ಸೇರಿದಂತೆ ಸುಮಾರು 21 ಜನರು ಪಾಲುದಾರರಿದ್ದಾರೆ. ಶಿಕ್ಷಣ ಪಡೆದವರೂ ಕೂಡ ಕೃಷಿ ಅಭಿವೃದ್ಧಿಗೆ ಸಹಕರಿಸುವಂತೆ ಮಾಡುವುದು ತಮ್ಮ ಗುರಿ ಎನ್ನುತ್ತಾರೆ ಶಶಿ ಕುಮಾರ್.
"ದನಗಳ ಖರೀದಿಗೆ ಬ್ಯಾಂಕ್ ಸಾಲ ಪಡೆಯಲು ಕಂಪನಿಯು ಕೃಷಿಕರಿಗೆ ನೆರವು ನೀಡಲಿದೆ. ಯಾವುದೇ ಮಧ್ಯವರ್ತಿಗಳ ಹಂಗಿಲ್ಲದೇ ಕಂಪನಿಯು ನೇರವಾಗಿ ರೈತರಿಂದ ಹಾಲು ಖರೀದಿಸಲಿದೆ. ಕಂಪನಿಯ ಸದಸ್ಯರಾದ ರೈತರ ದನಗಳ ಆರೋಗ್ಯ ಪರೀಕ್ಷೆಯನ್ನೂ ಕಂಪನಿ ಮಾಡಲಿದೆ" ಎಂದು ಮುಕುಂದನ್ ಹೇಳುತ್ತಾರೆ.
ಸ್ಯಾಟಲೈಟ್ ಆಧರಿತ ಹೈನುಗಾರಿಕೆಯಲ್ಲಿ ಸೆನ್ಸಾರ್, ಜಿಪಿಎಸ್, ಪೆಡೊ ಮೀಟರ್ ಮತ್ತು ಇತರ ಸಾಧನ ಗಳ ಬಳಕೆ ಮೂಲಕ ದನಗಳ ಚಲನವಲನ ಮತ್ತು ಪ್ರತಿದಿನ ನೀಡುವ ಹಾಲಿನ ಪ್ರಮಾಣ, ಆರೋಗ್ಯ, ದನದ ದೇಹದ ಉಷ್ಣತೆ ಇತ್ಯಾದಿಗಳ ಮೇಲೆ ನಿಗಾ ಇಡಲಾಗುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications