ಭಾರತ ತಂಡದಲ್ಲಿ ಎಲ್ಲರೂ ಫಿಟ್: ಧೋನಿ
ಮೊಹಾಲಿ, ಮಾ. 29: ಟೀಂ ಇಂಡಿಯಾದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ ಹಾಗೂ ನಾಳಿನ ಪಂದ್ಯಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಸೆಮಿಫೈನಲ್ ಪಂದ್ಯ ಮಹತ್ವ ಎಲ್ಲಾ ಆಟಗಾರರಿಗೂ ತಿಳಿದಿದೆ. ಆದರೆ, ಆಟಗಾರ ಮನಸ್ಥಿತಿ ಮೈದಾನದತ್ತ ನೆಟ್ಟಿದೆ. ಸುದ್ದಿವಾಹಿನಿಗಳು, ದಿನಪತ್ರಿಕೆ ವರದಿಗಳ ರಂಜನೀಯ ಸುದ್ದಿಗಳಿಂದ ದೂರ ಉಳಿಯುವಂತೆ ಎಲ್ಲಾ ಆಟಗಾರರಿಗೆ ತಿಳಿಸಲಾಗಿದೆ ಎಂದು ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಎರಡು ತಂಡಗಳ ಹೋಲಿಕೆ, 2003, 2007ರಲ್ಲಿ ಏನಾಯಿತು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಪ್ರತಿ ಪಂದ್ಯವನ್ನು ಫ್ರೆಶ್ ಆಗಿ ನೋಡಬೇಕಾಗುತ್ತದೆ. ದಿನದ ಕೊನೆಯಲ್ಲಿ ಒಂದು ತಂಡ ಗೆಲ್ಲುವುದು ಮತ್ತೊಂದು ಸೋಲುವುದು ಇದ್ದದ್ದೇ. 100 ಓವರ್ ಗಳ ವರೆಗೆ ಆತ್ಮವಿಶ್ವಾಸದಿಂದ ಸಮರ್ಥವಾಗಿ ಆಡುವುದೇ ಗೆಲುವಿನ ಮಂತ್ರ ಎನ್ನಬಹುದು.
ರಾಜಕೀಯ ಪ್ರಭಾವ: ಕ್ರೀಡೆಗೂ ರಾಜಕೀಯಕ್ಕೂ ಬಿಡಿಸಲಾರದ ನಂಟು ಇರುವುದಂತೂ ಸತ್ಯ. ಭಾರತ ಹಾಗೂ ಪಾಕಿಸ್ತಾನದ ಪ್ರಧಾನ ಮಂತ್ರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಪಂದ್ಯ ವೀಕ್ಷಿಸಲು ಬರುತ್ತಿರುವುದು ಬಾಧಕವಾಗಿದೆ. ಎರಡು ದೇಶದ ಬಾಂಧವ್ಯಕ್ಕೆ ನಾವೇನೂ ಮಾಡಬಲ್ಲೆವು. ನನಗೆ ಕೊಟ್ಟಿರುವ ನಾಯಕ ಸ್ಥಾನಕ್ಕೆ ತಕ್ಕಂತೆ ಪ್ರದರ್ಶನ ನೀಡಿ, ತಂಡಕ್ಕೆ ಗೆಲುವು ತರುವುದು ನನ್ನ ಗುರಿ ಎಂದರು.
ಎರಡು ದಿನದಿಂದ ಟಿವಿ ನೋಡಿಲ್ಲ. ಕ್ರಿಕೆಟ್ ಅಭ್ಯಾಸ ಬಿಟ್ಟರೆ ಆಟಗಾರರು ಬೇರೇನೂ ಮಾಡುತ್ತಿಲ್ಲ. ಭಾರತ ತಂಡದ ನಾಯಕನೇ ಒತ್ತಡ ಜಾಸ್ತಿ. ಆದರೆ, ನನಗೆ ಚಾಲೆಂಜಿಂಗ್ ಕೆಲಸ ಇಷ್ಟ ಎಂದರು. ಪಾಕಿಸ್ತಾನ ತಂಡದ ಬೌಲಿಂಗ್ ಸದೃಢವಾಗಿದೆ. ಅಫ್ರಿದಿ ಉತ್ತಮ ಲಯದಲ್ಲಿದ್ದಾರೆ. ಪಿಚ್ ಬಗ್ಗೆ ಸದ್ಯಕ್ಕೆ ಮಾಹಿತಿ. ಆದರೆ, ಮೊದಲಿಗೆ ಬ್ಯಾಟ್ಸ್ ಮನ್ ಗೆ ಸಹಾಯಕವಾಗುವ ಸಾಧ್ಯತೆಯಿದೆ. ಭಾರತ ತಂಡದ ಆಯ್ಕೆ ಬಗ್ಗೆ ಸದ್ಯಕ್ಕೆ ಏನು ಹೇಳಲಾರೆ. ಎಲ್ಲರೂ ಉತ್ತಮ ಆಟ ನೀಡಲು ಕಾತುರಗಾರಿದ್ದಾರೆ ಎಂದು ಧೋನಿ ಹೇಳಿದರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications