ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿ.ಮೂ.ಗೆ ಡಾಕ್ಟರೇಟ್: ಶರಣು ಎಂದ ಭಾರದ್ವಾಜ್

By Srinath
|
Google Oneindia Kannada News

M Chidananda Murthy
ಬೆಂಗಳೂರು, ಫೆ. 7: ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಕೈಗೊಂಡಿದ್ದ ನಿರ್ಣಯದಂತೆ ಹಿರಿಯ ಸಂಶೋಧಕ ಡಾ. ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ವಿವಿಯ ಕುಲಪತಿಯೂ ಆದ ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್ ಕೊನೆಗೂ ಸಮ್ಮತಿಸಿದ್ದಾರೆ.

ಚಿದಾನಂದ ಮೂರ್ತಿ ಕೋಮುವಾದಿ ಎಂಬ ತೀರ್ಮಾನಕ್ಕೆ ಬಂದಿದ್ದ ರಾಜ್ಯಪಾಲ ಭಾರದ್ವಾಜ್ ಅವರು ಕನ್ನಡ ಸಾರಸ್ವತ ಲೋಕದ ಹಿರಿಯ ಜೀವಿಗೆ ಡಾಕ್ಟರೇಟ್ ನೀಡಲು ನಿರಾಕರಿಸಿದ್ದರು. ಇತ್ತ ರಾಜಧಾನಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿಯೇ ಘನತೆವೆತ್ತ ರಾಜ್ಯಪಾಲರು ಇಂತಹ ಅವಿವೇಕದ ನಿರ್ಧಾರ ಕೈಗೊಂಡಿದ್ದು ಎಲ್ಲ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿತ್ತು. ಸಮ್ಮೇಳನಾಧ್ಯಕ್ಷ ಜಿವಿ ಸೇರಿದಂತೆ ಎಲ್ಲರೂ ಒಕ್ಕೊರಲಿಂದ ಚಿ.ಮೂ. ಗೌರವ ಡಾಕ್ಟರೇಟ್‌ಗೆ ಅರ್ಹರು ಎಂದಿದ್ದರು.

ಎಚ್ಚೆತ್ತ ರಾಜ್ಯಪಾಲ ಭಾರದ್ವಾಜ್ ಅವರು ಅನ್ಯ ಮಾರ್ಗ ಕಾಣದೆ ನಾಡು ಕಂಡ ಅಪರೂಪದ ಇತಿಹಾಸ ತಜ್ಞ ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ದಯಪಾಲಿಸಲು ಸಮ್ಮತಿಸಿದ್ದಾರೆ.

ಸಂತೋಷದಿಂದ ಸ್ವೀಕರಿಸುವೆ: ಚಿಮೂ 'ರಾಜ್ಯಪಾಲರು ಸಿಂಡಿಕೇಟ್ ನಿರ್ಣಯವನ್ನು ತಡೆಹಿಡಿದಿದ್ದು ಸರಿಯಲ್ಲ. ಅದರಿಂದ ತುಂಬಾ ಬೇಸರವಾಗಿತ್ತು. ಆದರೆ ಈಗ ಎಲ್ಲ ಸರಿ ಹೋಗಿದೆ. ಡಾಕ್ಟರೇಟ್‌ ಅನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ' ಎಂದು ಚಿ.ಮೂ. ಪ್ರತಿಕ್ರಿಯಿಸಿದ್ದಾರೆ.

English summary
Governor Bharadwaj has given his consent to honour Dr. Chidananda Murthy with Doctorate as per the decision of Bengaluru University Syndicate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X