ಸ್ವಚ್ಛ, ಸುಂದರ ಬಳ್ಳಾರಿ ನಗರ ರೆಡ್ಡಿಯ ಕನಸು

ಸುಮಾರು ದಶಕಗಳ ಹಿಂದೆ ಬಳ್ಳಾರಿ ಎಂದರೆ ಸಾಕು 'ಜಾಲಿ, ಬಿಸಿಲು, ಬಿರು ಬಿಸಿಲು" ಎಂದು ಮೂಗು ಮುರಿಯುವ ಕಾಲಿವಿತ್ತು. ಆಧುನೀಕತೆ, ನಾಗರೀಕತೆಯಲ್ಲಿ ಉಂಟಾಗುತ್ತಿರುವ ಬದಲಾವಣೆ, ಆರೋಗ್ಯ, ಸ್ವಚ್ಛತೆಗೆ ಪ್ರತಿಯೊಬ್ಬರೂ ನೀಡುತ್ತಿರುವ ಆದ್ಯತೆ, ತೋರುತ್ತಿರುವ ಕಾಳಜಿಯಿಂದಾಗಿ ಕಸ, ತ್ಯಾಜ ವಿಲೇವಾರಿ ಪದ್ಧತಿಯೂ ಕೂಡ ಕ್ರಮೇಣ ಬದಲಾಗುತ್ತಿದೆ.
ಕಸದಿಂದ ರಸ: ಈ ನಿಟ್ಟಿನಲ್ಲಿ 'ಕಸದಿಂದ ರಸ" ಎನ್ನುವ ನಾಣ್ನುಡಿಗೆ ಕಸದಿಂದ ಗೊಬ್ಬರ, ಕಸದಿಂದ ವಿದ್ಯುತ್, ಕಸದಿಂದ ಇನ್ನೇನನ್ನಾದರೂ ಉತ್ಪಾದಿಸುವ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಾರಣ ಕಸವನ್ನು ಕೂಡ ವೈಜ್ಞಾನಿಕವಾಗಿ ಸಂಗ್ರಹ ಮಾಡುವ ಪದ್ಧತಿ ಜಾರಿ ಆಗುತ್ತಿದೆ.
ಕಸ ಸಂಗ್ರಹ, ವಿಲೇವಾರಿ, ಸಾಗಾಣಿಕೆ, ಇನ್ನಿತರೆ ವಿಚಾರಗಳ ಕುರಿತು ಐಎಸ್ಓ ಪುರಸ್ಕೃತ ಎಸ್.ಎ. ಖಾದರ್ಸಾಬ್ ಅವರು ಅಧಿಕಾರಿಗಳು, ಸಿಬ್ಬಂದಿ, ಕಸ ಸಂಗ್ರಹಾಕಾರರು, ಪೌರಕಾರ್ಮಿಕರು, ಚುನಾಯಿತ ಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು, ವೈದ್ಯರು, ಹೋಟೆಲ್ ಮಾಲೀಕರು, ಸ್ವಸಹಾಯ ಗುಂಪುಗಳಿಗೆ ಹಂತ ಹಂತವಾಗಿ ತರಬೇತಿ ನೀಡಿದ್ದಾರೆ. ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.
ರೆಡ್ಡಿ ಮಾದರಿ ಯೋಜನೆ : ಆಂಧ್ರದ ನಂದ್ಯಾಲ ಪುರಸಭೆಗೆ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದ ನಗರ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಅವರು ಅಲ್ಲಿಯ ಮಾದರಿಯಲ್ಲೇ ಕಸ ಸಂಗ್ರಹ ಮಾಡುವುದನ್ನು ಬಳ್ಳಾರಿ ಮಹಾನಗರ ಪಾಲಿಕೆಯಲ್ಲೂ ಕಸ ಸಂಗ್ರಹ ಮಾಡುವ ಕ್ರಿಯಾ ಯೋಜನೆ ಜಾರಿಗೆ ತರುವಲ್ಲಿ ಯೋಜನೆ ರೂಪಿಸಿ, ಜಾರಿಗೆ ತಂದರು.
ಯೋಜನೆ ವಿವರ: ಬಳ್ಳಾರಿ ಮಹಾನಗರ ಪಾಲಿಕೆಯ 35 ವಾರ್ಡ್ಗಳನ್ನು ಆರು ವಿಭಾಗಗಳಾಗಿ ರಚಿಸಿದ ಪಾಲಿಕೆ 36 ಮಾರ್ಗಗಳ ನಕ್ಷೆಯನ್ನು ರೂಪಿಸಿದೆ. ಪ್ರತಿ ಮಾರ್ಗಕ್ಕೆ ಓರ್ವ ರೂಟ್ ಮೇನೇಜರ್, ಒಂದು ವಾಹನ, ವಾಹನ ಚಾಲಕ, 7 ಜನ ಕಸ ಸಂಗ್ರಹಾಕಾರರನ್ನು ನೇಮಕ ಮಾಡಿದೆ. ಪ್ರತಿ ವಾಹನದಲ್ಲಿ 20-30 ಕಸ ಸಂಗ್ರಹದ ಬಕೆಟ್ಗಳು ಇರುತ್ತವೆ. ದ್ರವ ಮತ್ತು ಘನ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತದೆ.
ಈ ಸಿಬ್ಬಂದಿ ಅಲ್ಲದೇ ರಸ್ತೆಗಳಲ್ಲಿಯ ಕಸ ಗುಡಿಸಲು, ಡಿ.ಸಿಲ್ಟಿಂಗ್ ಮಾಡಲು ಪ್ರತ್ಯೇಕ ತಂಡಗಳು ರಚನೆ ಆಗಿವೆ. ಮಾಂಸದ ಮಾರುಕಟ್ಟೆ, ಹೋಟೆಲ್, ಆಸ್ಪತ್ರೆ ಮತ್ತಿತರ ಕಸ ಸಂಗ್ರಹಕ್ಕೆ ಆಯಾ ಮಾರ್ಗದಲ್ಲೇ ಪ್ರತ್ಯೇಕ ತಂಡಗಳು ಇರುತ್ತವೆ. ಪೌರ ಕಾರ್ಮಿಕರು ಸಂಗ್ರಹ ಮಾಡುವ ಪ್ರತಿ ಕೆಜಿ ಕಸಕ್ಕೆ 1 ರುಪಾಯಿ ಪ್ರೋತ್ಸಾಹ ಧನವನ್ನು ಪಾಲಿಕೆ ನೀಡಲಿದೆ.
ವೇಣಿವೀರಾಪುರದ ಬಳಿಯ ಬಯಲು ಪ್ರದೇಶದಲ್ಲಿ ಕಸ ಸಂಗ್ರಹ ಕಾರ್ಯ ಭರದಿಂದ ನಡೆದಿದೆ. ಇದೇ ಸ್ಥಳದಲ್ಲೇ ಕಾಂಪೋಸ್ಟ್ ಗೊಬ್ಬರ ತಯಾರು ಮಾಡುವ ಪ್ರಯತ್ನ ನಡೆದಿದೆ. ಭವಿಷ್ಯದ ದಿನಗಳಲ್ಲಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಪ್ರಾರಂಭ ಆಗುವ ಸಾಧ್ಯತೆಗಳೂ ಇವೆ. [ಕಸ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications