ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡೆಸ್ನಾನ : ಪ್ರತಿಭಟನೆಗೆ ಭಕ್ತರಿಂದಲೇ ವಿರೋಧ

By Mrutyunjaya Kalmat
|
Google Oneindia Kannada News

Madesnana in Kukke Subramanya
ಕುಕ್ಕೆ ಸುಬ್ರಮಣ್ಯ, ಡಿ. 11 : ತೀವ್ರ ಚರ್ಚೆ ಮತ್ತು ವಿವಾದಕ್ಕೆ ಒಳಗಾಗಿದ್ದ ಮಡೆಸ್ನಾನ ಸೇವೆ (ಉರುಳು ಸೇವೆ) ಕೆಲವೊಂದು ಸಾಂಕೇತಿಕ ಪ್ರತಿಭಟನೆಯ ನಡುವೆಯೂ ಸಾಂಗವಾಗಿ ನೆರವೇರಿತು. ನಿವೃತ್ತ ನ್ಯಾಯಾಧೀಶ, ವೈದ್ಯ, ಎಂಜಿನಿಯರ್, ಪೊಲೀಸರೂ ಸೇವೆ ಸಲ್ಲಿಸಿದರೆ ಪ್ರತಿಭಟನೆಗೆ ಭಕ್ತವೃಂದದಿಂದಲೇ ವಿರೋಧ ವ್ಯಕ್ತವಾಯಿತು.

ಪ್ರತಿಭಟನೆ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನೀಡಲಾಗಿತ್ತು. ಬೆಂಗಳೂರಿನಿಂದ ಬಂದ ಭಕ್ತರೊಬ್ಬರು ಈ ಸೇವೆಯನ್ನು ಯಾರ ಒತ್ತಾಯಕ್ಕಾಗಿ ಮಾಡುವುದಲ್ಲ, ಬದಲಾಗಿ ಮನಶಾಂತಿಗಾಗಿ ಇದನ್ನು ಮಾಡುತ್ತಿದ್ದೇವೆ ಎಂದು ಪ್ರತಿಭಟನೆಗೆ ಭಕ್ರು ವಿರೋಧ ವ್ಯಕ್ತಪಡಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭದ್ರತಾ ಕಾರ್ಯಕ್ಕಾಗಿ ನಿಯೋಜಿತರಾಗಿದ್ದ ಕೆಲವು ಪೊಲೀಸ್ ಸಿಬ್ಬಂದಿಯೇ ಉರುಳು ಸೇವೆ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು.

ಅನಾದಿಕಾಲದಿಂದಲೂ ನಂಬಿಕೊಂಡು ಬಂದಂತಹ ಉರುಳು ಸೇವೆಗೆ ವಿರೋಧ ವ್ಯಕ್ತವಾಗಿರುವುದು ಕೇಳಿ ಕೆಲ ಭಕ್ತರು ಅಸಮಾದಾನ ವ್ಯಕ್ತಪಡಿಸಿದರು. ಉರುಳು ಸೇವೆಯಿಂದ ಮೈಮೇಲಿನ ರೋಗ ವಾಸಿಯಾಗುತ್ತದೆ ಎಂದು ಹಿರಿಯರು ನಂಬಿಕೊಂಡು ಬಂದಂತಹ ಪದ್ಧತಿ ಇದು ಎಂದು ಪ್ರತಿಭಟನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.

English summary
The controversial "Urulu Seve" or the "Made Snana" was observed by the devotees, amid protests at the Kukke Subrahmanya temple here on Friday. Members of the Karnataka State Backward Classes Awareness Forum gathered in front of the temple to protest against the practice which they described as inhuman. Urulu Seve (Made Snana) a religious ritual which has 400 years history, will be performed on December 10 this year in Kukke Subramanya Temple, Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X