ಆಪಲ್ ಐಪ್ಯಾಡಿನಲ್ಲಿ ದಟ್ಸ್ ಕನ್ನಡ ವಿರಾಜಮಾನ

ಈಗಾಗಲೇ ದಟ್ಸ್ ಕನ್ನಡ ಸುದ್ದಿಗಳು ಮೊಬೈಲ್ ಮೂಲಕ ವಿಶ್ವ ಕನ್ನಡಿಗರನ್ನು ತಲುಪುತ್ತಿವೆ. ಐಪ್ಯಾಡ್ ಕ್ರಾಂತಿ ಆರಂಭವಾದಂದಿನಿಂದ ಅದರಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಯನ್ನು ಓದಲಾಗದೆ ಲಕ್ಷಾಂತರ ಜನರು ಚಟಪಡಿಸುತ್ತಿದ್ದರು. ಒನ್ ಇಂಡಿಯಾ ಕನ್ನಡ ಪೋರ್ಟಲ್ ಬಳಕೆದಾರರಲ್ಲಿ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಎಲ್ಲೇ ಇರು ಹೇಗೇ ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ, ಕಾರಲ್ಲೇ ಇರಲಿ, ಬೈಕಲ್ಲೇ ಇರಲಿ, ಕಾಫಿ ಶಾಪ್ ನಲ್ಲಿರಲಿ, ಪಬ್ ನಲ್ಲಿರಲಿ, ಎಲ್ಲೇ ಇದ್ದರೂ ಕನ್ನಡವನ್ನು ಐಪ್ಯಾಡ್ ನಲ್ಲಿ ಓದಲಾಗದೆ ಕನ್ನಡಿಗರು ಪರಿತಪಿಸುತ್ತಿದ್ದರು. ಈಗ ಈ ಎಲ್ಲ ಚಟಪಡಿಕೆಗೆ ಪೂರ್ಣವಿರಾಮ ಬಿದ್ದಿದೆ.
ಐಪ್ಯಾಡ್ ನಲ್ಲಿ ಅಗತ್ಯವಿರುವ ಕೆಲ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡರೆ ಐಪ್ಯಾಡ್ ನಲ್ಲಿ ಕನ್ನಡ ಓದುವ ಅದ್ಭುತವಾದ ಹೊಸ ಅನುಭವಕ್ಕೆ ಬಳಕೆದಾರರು ತೆರೆದುಕೊಳ್ಳಬಹುದು. ಆಪಲ್ ಐಪ್ಯಾಡ್ ಗಾಗಿ ನವೆಂಬರ್ 22, 2010 ರಂದು ಬಿಡುಗಡೆ ಮಾಡಿರುವ ಆಪರೇಟಿಂಗ್ ಸಿಸ್ಟಂ ಹೊಸ ವರ್ಷನ್ iOS 4.2.1 ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್ ಗ್ರೈಡ್ ಮಾಡಿಕೊಳ್ಳಲು iTunes 10.1 ಇರಬೇಕು.
ಹೀಗೆ ಮಾಡಿರಿ
1) ಹೊಸ ಆಪರೇಟಿಂಗ್ ಸಿಸ್ಟಂ iOS 4.2.1ಗೆ ಅಪ್ ಗ್ರೇಡ್ ಮಾಡಿಕೊಳ್ಳಿರಿ.
2) ಅದು ಸಾಧ್ಯವಾಗದೇ ಇದ್ದರೆ, ಐಟ್ಯೂನ್ಸ್, ಕ್ವಿಕ್ ಟೈಮ್ ಗಳನ್ನು ಅನ್ ಇನ್ ಸ್ಟಾಲ್ ಮಾಡಿರಿ.
3) ಈಗಲೂ iOS 4.2.1 ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಫೈರ್ ವಾಲ್ ಮತ್ತು ಆಂಟಿ ವೈರಸ್ ಡಿಸೇಬಲ್ ಮಾಡಿರಿ ಮತ್ತು ಡೌನ್ ಲೋಡ್ ಮುಂದುವರಿಸಿ.
4) ಹೊಸ ಓಎಸ್ ಡೌನ್ ಲೋಡ್ ಆದನಂತರ ಅಪ್ ಗ್ರೇಡ್ ಸರಾಗ.
ಮುಂದ? ಆಪಲ್ ಐಪ್ಯಾಡಲ್ಲಿ ನಮ್ಮ ಅಂತರ್ಜಾಲ ಪತ್ರಿಕೆಯನ್ನು ಓದುವ ಸುಖ ನಿಮ್ಮದು ಮತ್ತು ನಿಮ್ಮ ಪರಿವಾರದ್ದು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications