ಆಪಲ್ ಐಪ್ಯಾಡಿನಲ್ಲಿ ದಟ್ಸ್ ಕನ್ನಡ ವಿರಾಜಮಾನ

ಈಗಾಗಲೇ ದಟ್ಸ್ ಕನ್ನಡ ಸುದ್ದಿಗಳು ಮೊಬೈಲ್ ಮೂಲಕ ವಿಶ್ವ ಕನ್ನಡಿಗರನ್ನು ತಲುಪುತ್ತಿವೆ. ಐಪ್ಯಾಡ್ ಕ್ರಾಂತಿ ಆರಂಭವಾದಂದಿನಿಂದ ಅದರಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಯನ್ನು ಓದಲಾಗದೆ ಲಕ್ಷಾಂತರ ಜನರು ಚಟಪಡಿಸುತ್ತಿದ್ದರು. ಒನ್ ಇಂಡಿಯಾ ಕನ್ನಡ ಪೋರ್ಟಲ್ ಬಳಕೆದಾರರಲ್ಲಿ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ. ಎಲ್ಲೇ ಇರು ಹೇಗೇ ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ, ಕಾರಲ್ಲೇ ಇರಲಿ, ಬೈಕಲ್ಲೇ ಇರಲಿ, ಕಾಫಿ ಶಾಪ್ ನಲ್ಲಿರಲಿ, ಪಬ್ ನಲ್ಲಿರಲಿ, ಎಲ್ಲೇ ಇದ್ದರೂ ಕನ್ನಡವನ್ನು ಐಪ್ಯಾಡ್ ನಲ್ಲಿ ಓದಲಾಗದೆ ಕನ್ನಡಿಗರು ಪರಿತಪಿಸುತ್ತಿದ್ದರು. ಈಗ ಈ ಎಲ್ಲ ಚಟಪಡಿಕೆಗೆ ಪೂರ್ಣವಿರಾಮ ಬಿದ್ದಿದೆ.
ಐಪ್ಯಾಡ್ ನಲ್ಲಿ ಅಗತ್ಯವಿರುವ ಕೆಲ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಂಡರೆ ಐಪ್ಯಾಡ್ ನಲ್ಲಿ ಕನ್ನಡ ಓದುವ ಅದ್ಭುತವಾದ ಹೊಸ ಅನುಭವಕ್ಕೆ ಬಳಕೆದಾರರು ತೆರೆದುಕೊಳ್ಳಬಹುದು. ಆಪಲ್ ಐಪ್ಯಾಡ್ ಗಾಗಿ ನವೆಂಬರ್ 22, 2010 ರಂದು ಬಿಡುಗಡೆ ಮಾಡಿರುವ ಆಪರೇಟಿಂಗ್ ಸಿಸ್ಟಂ ಹೊಸ ವರ್ಷನ್ iOS 4.2.1 ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುತ್ತಿದೆ. ಈ ಹೊಸ ಆಪರೇಟಿಂಗ್ ಸಿಸ್ಟಂಗೆ ಅಪ್ ಗ್ರೈಡ್ ಮಾಡಿಕೊಳ್ಳಲು iTunes 10.1 ಇರಬೇಕು.
ಹೀಗೆ ಮಾಡಿರಿ
1) ಹೊಸ ಆಪರೇಟಿಂಗ್ ಸಿಸ್ಟಂ iOS 4.2.1ಗೆ ಅಪ್ ಗ್ರೇಡ್ ಮಾಡಿಕೊಳ್ಳಿರಿ.
2) ಅದು ಸಾಧ್ಯವಾಗದೇ ಇದ್ದರೆ, ಐಟ್ಯೂನ್ಸ್, ಕ್ವಿಕ್ ಟೈಮ್ ಗಳನ್ನು ಅನ್ ಇನ್ ಸ್ಟಾಲ್ ಮಾಡಿರಿ.
3) ಈಗಲೂ iOS 4.2.1 ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಫೈರ್ ವಾಲ್ ಮತ್ತು ಆಂಟಿ ವೈರಸ್ ಡಿಸೇಬಲ್ ಮಾಡಿರಿ ಮತ್ತು ಡೌನ್ ಲೋಡ್ ಮುಂದುವರಿಸಿ.
4) ಹೊಸ ಓಎಸ್ ಡೌನ್ ಲೋಡ್ ಆದನಂತರ ಅಪ್ ಗ್ರೇಡ್ ಸರಾಗ.
ಮುಂದ? ಆಪಲ್ ಐಪ್ಯಾಡಲ್ಲಿ ನಮ್ಮ ಅಂತರ್ಜಾಲ ಪತ್ರಿಕೆಯನ್ನು ಓದುವ ಸುಖ ನಿಮ್ಮದು ಮತ್ತು ನಿಮ್ಮ ಪರಿವಾರದ್ದು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications