ರೇಣುಕಾಚಾರ್ಯ ಉಲ್ಟಾ; ಬಿಜೆಪಿ ಸರ್ಕಾರ ಸುಭದ್ರ

ಗೋವಾದ ರೆಸಾರ್ಟ್ನಿಂದ ದೂರವಾಣಿ ಮೂಲಕ ಖಾಸಗಿ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಶುಕ್ರವಾರ ಒಟ್ಟಾಗಿ ಬೆಂಗಳೂರಿಗೆ ಬರುತ್ತಿದ್ದೇವೆ. ವಿಶ್ವಾಸಮತಯಾಚಿಸುವ ಸಂದರ್ಭದಲ್ಲಿ ನಾವೆಲ್ಲಾ ಯಡಿಯೂರಪ್ಪ ಅವರ ನಾಯಕತ್ವ್ವವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಭಿನ್ನರ ರಕ್ಷಣೆ ನೆಪದಲ್ಲಿ ಕುಮಾರಸ್ವಾಮಿ ಗೋವಾಕ್ಕೆ ತೆರಳುತ್ತಿದ್ದಂತೆ ಬಿಜೆಪಿ ಆಪರೇಷನ್ ರೇಣುಕಾ ಮುಗಿದಿತ್ತು. ಒಟ್ಟಿನಲ್ಲಿ ರಾಜ್ಯ ರಾಜಕೀಯ ಚದುರಂಗದಾಟ ಹೊಸ ತಿರುವು ಪಡೆದುಕೊಂಡಿದೆ. ಏತನ್ಮಧ್ಯೆ ರೇಣುಕಾಚಾರ್ಯ ಆಪ್ತ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡುತ್ತಾ, ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇರಳದ ತಳಿಪರಂಬದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅ.11ರಂದು ವಿಶ್ವಾಸಮತ ಯಾಚಿಸಿ, ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಣ್ಣಬಯಲಾಗಿದೆ ಎಂದಿದ್ದಾರೆ.












Click it and Unblock the Notifications