ಆಧಾರ್ ವಿಶಿಷ್ಟ ಗುರುತಿನ ಚೀಟಿ ದೇಶಕ್ಕೆ ಅರ್ಪಣೆ
ಹಿಂದುಳಿದ ವರ್ಗದ ಜನರ ಜೀವನಾಡಿಯಾಗಿ ಈ UID ಉಪಯೋಗಕ್ಕೆ ಬರಲಿದೆ ಎಂದು ಮನಮೋಹನ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
ಬಡವರ ಆಶಾಕಿರಣವಾಗಲಿ ಎಂಬ ಮುಖ್ಯ ಉದ್ದೇಶದಿಂದ ಆಧಾರ್ ಗೆ ಚಾಲನೆ ನೀಡಲಾಗಿದೆ. ಮಹಾರಾಷ್ಟ್ರದ ಬುಡಕಟ್ಟು ಗ್ರಾಮದಲ್ಲಿ ಈ ವಿಶಿಷ್ಟ ಚೀಟಿಗಳನ್ನು ವಿತರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನುಡಿದರು.
ಇಂದು ಆಧಾರ್ ಕಾರ್ಡ್ ಪಡೆದವರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಸೇರಿದ್ದಾರೆ. ಆಧಾರ್ ಕಾರ್ಡ್ ಪಡೆದವರಲ್ಲಿ 4 ವರ್ಷ ವಯಸ್ಸಿನ ಹಿತೇಶ್ ಸೋನಾವಾನೆ ಹಾಗೂ 8 ವರ್ಷದ ಅನಿಲ್ ಥಾಕ್ರೆ ಅತ್ಯಂತ ಕಿರಿಯ ವಯಸ್ಕರಾಗಿದ್ದಾರೆ.
PDS ಹಾಗೂ NREGSಮುಂತಾದ ಸರ್ಕಾರದ ಯೋಜನೆಗಳ ಲಾಭ ಪಡೆಯಲು12 ಅಂಕಿಗಳ ಈ ವಿಶಿಷ್ಟಗುರುತಿನ ಚೀಟಿ ಬಡವರಿಗೆ ಸಹಾಯಕವಾಗಲಿದೆ.
ಆಧಾರ್ ಯೋಜನೆಯ ಮುಖ್ಯ ರುವಾರಿ ನಂದನ್ ನಿಲೇಕಣಿ, ಮಹಾರಾಷ್ಟ್ರ ಸಿಎಂ ಅಶೋಕ್ ಚವಾಣ್, ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಸೇರಿದಂತೆ ಅನೇಕ ಗಣ್ಯರು ಸಂದರ್ಭದಲ್ಲಿ ಹಾಜರಿದ್ದರು.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ