ಇದು ವಿಶಾಲ ಭಾರತ, ಸ್ವಾಮೀ!

- ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ.
* ಪಂಡಿತ ಪುಟ್ಟರಾಜ ಗವಾಯಿಗಳನ್ನು ನೋಡಲು ಜನಸಾಗರ.
- ನಿಜವಾದ ಸೂಪರ್ ಸ್ಟಾರ್ ಎಂದರೆ ಗವಾಯಿಗಳು. ಇದು ಜನರ ಆಯ್ಕೆ.
* ರಾಜ್ಯದ ಪರಿಶಿಷ್ಟರಿಗೆ ಭೂಮಿ.
- ಶಿಷ್ಟರಿಗೆ, ಪರಿಶಿಷ್ಟರಿಗೆ ತುಂಡು ಭೂಮಿ. ಭ್ರಷ್ಟರಿಗೆ, ದುಷ್ಟರಿಗೆ ನುಂಗಿದಷ್ಟೂ ಭೂಮಿ!
* ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ, ಸಿಂಹಗಳ ಸಾವು.
- ಹುಲಿ ರಕ್ಷಣೆಗೆ ಹತ್ತು ಕೋಟಿ, ಸಿಂಹಕ್ಕೆ ಇಪ್ಪತ್ತು ಕೋಟಿ ಘೋಷಿಸಿಲ್ಲ ಸಿ.ಎಂ. ಇನ್ನೂ!
* ರಾಜ್ಯದ ಕೆಲವೆಡೆ ಆನೆಗಳ ಹಾವಳಿ ಮಿತಿಮೀರಿದೆ.
- ಮುವ್ವತ್ತು ಕೋಟಿ?
* ಪ್ರಕೃತಿ ವಿಕೋಪ ನಿಧಿ ಬಳಸಿಕೊಂಡು (ಮಾಜಿ) ಜಿಲ್ಲಾಧಿಕಾರಿಯಿಂದ ಬಂಗಲೆ ನಿರ್ಮಾಣ.
- ಅದು ಆ ಅಧಿಕಾರಿಯ ಪ್ರಕೃತಿ. ಕೋಪ ಅನವಶ್ಯ.
* ರಾಮಚಂದ್ರಗೌಡರನ್ನೀಗ ಕೇಳೋರಿಲ್ಲ.
- ಆದ್ದರಿಂದ ಹರಿಕಥೆ ಸ್ಟಾಪ್?
* ಅಂದು ರಾಮಾಯಣ, ಇಂದು ರಾಮಚಂದ್ರಾಯಣ.
- ಗೌಡಾಯಣ ಅಲ್ಲ. ಏಕೆಂದರೆ ಅದು ಬೇರೆಯವರಿಗೆ ರಿಸರ್ವ್ ಆಗಿದೆ.
* ಹರತಾಳು ಹಾಲಪ್ಪ ಮಾಡಿದ್ದು ಖಾತ್ರಿಯಾಗಿದೆ.
- ಇನ್ನು, ಮಾಡಿದ್ದುಣ್ಣೋ ಮಹರಾಯ.
* ತೆಲಗಿ ದೋಷಿ ಎಂದು ನ್ಯಾಯಾಲಯದ ತೀರ್ಪು.
- ಆಸ್ತಿ ನಮ್ಮ ಮಾವನ ಸ್ವಂತದ್ದು ಎಂದು ಅದೇ ದಿನ ತೆಲಗಿಯ ಭಾವೀ ಅಳಿಯನ ಘೋಷಣೆ!
* ವಿದ್ಯುತ್ ಕಡಿತ ಮುಂದುವರಿಯಲಿದೆ.
- ಇದೂ ಒಂದು ಸುದ್ದಿಯೇ?
* ಮಾದಾರ ಚನ್ನಯ್ಯ ಸ್ವಾಮೀಜಿ ಪಾದಯಾತ್ರೆ ಯಶಸ್ವಿ.
- ಇದು ನಿಜಕ್ರಾಂತಿಗೆ ಮುನ್ನುಡಿಯಾದರೆ ಚೆನ್ನಯ್ಯ.
* ಶ್ರೀನಗರದಲ್ಲಿ ನಿಲ್ಲದ ಹಿಂಸಾಚಾರ.
- ಹೀಗೇ ಮುಂದುವರಿದರೆ ಕೊನೆಗೊಂದು ದಿನ ಅದು ಇತಿಶ್ರೀ ನಗರ!
* ಕುಸ್ತಿ ಕೋಚ್ ಸತ್ಪಾಲ್ ಸಿಂಗ್ ಅವರನ್ನು ಅವಮಾನಿಸಿದ ಕ್ರೀಡಾ ಸಚಿವ ಗಿಲ್.
- 'ಗಿಲ್ಲು ಗಿಲ್ಲೆನುತಾ, ಎಂ.ಎಸ್. ಗಿಲ್ಲೇ ತಾನೆನುತಾ, ಬಲ್ಲಿದ ಸತ್ಪಾಲ್ ಸಿಂಗರಮೇಲೆ ಚೆಲ್ಲಿದನೋ ಕೆಸರಾ!'
* ಒಂದೇ ದಿನದಲ್ಲಿ ಇಷ್ಟೆಲ್ಲ ಸುದ್ದಿ!
- ಇದು ವಿಶಾಲ ಭಾರತ, ಸ್ವಾಮೀ!
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications