ಬನ್ನೇರುಘಟ್ಟದಲ್ಲಿ ಚಿತೆ ಇನ್ನೂ ಆರಿಲ್ಲ

ಸೈಬೀರಿಯನ್ ತಳಿಗೆ ಸೇರಿದ ಲಂಡನ್ ನ ಹುಲಿ ಕಿಂಗ್ (21) ಬನ್ನೇರುಘಟ್ಟ ಜೈವಿಕ ಉದ್ಯಾನ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. 1989 ರಲ್ಲಿ ಲಂಡನ್ನ ಮೃಗಾಲಯದಲ್ಲಿ ಹುಟ್ಟಿದ್ದ ಗಂಡು ಹುಲಿ, 2002 ರಲ್ಲಿ ಲಂಡನ್ನಿಂದ ವಿಮಾನದಲ್ಲಿ ಬಂದು ಬನ್ನೇರುಘಟ್ಟದಲ್ಲಿ ಅಶ್ರಯ ಪಡೆದಿದ್ದವು.
ಉದ್ಯಾನವದ ಕಾರ್ಯನಿರ್ವಹಣಾಧಿಕಾರಿಯವರ ಉಪಸ್ಥಿತಿಯಲ್ಲಿ ಹುಲಿಯ ಶವಪರೀಕ್ಷೆಯನ್ನು ಡಾ. ಚೆಟ್ಟಯಪ್ಪ ನೇರವೇರಿಸಿ, ನಂತರ ಹುಲಿಯ ಕಳೇಬರಹವನ್ನು ಬಂಡೆ ಮೇಲೆ ಸುಡಲಾಯಿತು. ಇದೇ ದಿನ ಉದ್ಯಾನವನದ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿನ ಗಂಡು ಸಿಂಹ ಲಕ್ಷ್ಮಣ್ (18) ಮೃತಪಟ್ಟಿದೆ.
2002ರಲ್ಲಿ ನ್ಯೂ ಗ್ರಾಂಡ್ ಸರ್ಕಸ್ ಕಂಪನಿಯಿಂದ ವಶ ಪಡಿಸಿಕೊಂಡಿದ್ದ ಸಿಂಹ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಇದಕ್ಕೆ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಂಹ ಮೃತಪಟ್ಟಿತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಾರೋಗ್ಯ, ವಯಸ್ಸು ಕಾರಣ?: ಭಾನುವಾರ ಮೃತಪಟ್ಟ ಸಿಂಹ ಶಂಕರ್ (23) ಸಹ ನ್ಯೂಗೋಲ್ಡನ್ ಸರ್ಕಸ್ ಕಂಪನಿಯಿಂದ 2001ರಲ್ಲಿ ಉದ್ಯಾನಕ್ಕೆ ಕರೆ ತರಲಾಗಿತ್ತು. ಇದು ಸಹ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.
ಈ ಬಗ್ಗೆ ವೈದ್ಯಾಧಿಕಾರಿ ಚೆಟ್ಟಿಯಪ್ಪ ಮಾತನಾಡಿ ಸಾಮಾನ್ಯವಾಗಿ ಸೈಬಿರಿಯನ್ ಹುಲಿಗಳು ಕಾಡಿನಲ್ಲಿ ಬದುಕುವುದು 15 ರಿಂದ 18 ವರ್ಷ, ಆದರೆ ಇಲ್ಲಿನ ಹುಲಿ 21 ವರ್ಷ ಬದುಕಿರುವುದೇ ಹೆಚ್ಚು ಇದಕ್ಕೆ ಕಾರಣ ಇಲ್ಲಿನ ಹವಾಗುಣ ಎಂದು ಅವರು ಹೇಳಿದರು.
ಕಳೆದ ಒಂದು ತಿಂಗಳಿಂದ ಮೂತ್ರ ಕೋಶದ ತೊಂದರೆಯಿಂದ ಬಳಲುತ್ತಿತ್ತು. ನಾವು ಚಿಕಿತ್ಸೆ ನೀಡುತ್ತ ಬಂದೆವೂ ಆದರೂ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿದರು. ಸದ್ಯ ಮೃತ ಪಟ್ಟಿರುವ ಹುಲಿ ಸಿಂಹಗಳು, ಅನಾರೋಗ್ಯದಿಂದ ಬಳಲುತ್ತಿದ್ದವು ಇದರಿಂದ ಮೃತಪಟ್ಟಿದೆ ಎಂಬುದಕ್ಕೆ ನಾವು ನೀಡುತ್ತಿದ್ದ ಚಿಕಿತ್ಸೆಯೇ ಸಾಕ್ಷಿ ಎಂದು ಹೇಳಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications