ಸಾಕರ್ ಪಂದ್ಯ ನೋಡಿದರೆ ಸಾವು ಖಚಿತ
ಫೀಫಾ ಫುಟ್ಬಾಲ್ ವಿಶ್ವಕಪ್ ಎಲ್ಲರ ಕಣ್ಮನ ಸೆಳೆಯುವ ಹಬ್ಬವಾಗಿದೆ. ಎಲ್ಲರೂ ಪಂದ್ಯವೀಕ್ಷಿಸಲು ಸಮಯ ಹೊಂದಿಸಿಕೊಂಡು ಟಿವಿ ಪರದೆ ವೀಕ್ಷಿಸಿ ಆನಂದಿಸುತ್ತಿದ್ದಾರೆ. ಆದರೆ, ಸೊಮಾಲಿಯಾದಲ್ಲಿ ಮಾತ್ರ ವಿಶ್ವಕಪ್ ಪಂದ್ಯಗಳನ್ನು ನೋಡುವುದೆಂದರೆ ಪ್ರಾಣವನ್ನು ಪಣಕ್ಕಿಟ್ಟಂತೆ.
ಒಂದು ಕಣ್ಣು ಟಿವಿ ಮೇಲೆ ಮತ್ತೊಂದು ಬಾಗಿಲ ಮೇಲೆ ನೆಟ್ಟು ಜೀವಭಯದಿಂದ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಸಾಕರ್ ಅಭಿಮಾನಿಯೊಬ್ಬರು. ಯಾವ ಕ್ಷಣದಲ್ಲಿ ಉಗ್ರರು ದಾಳಿ ನಡೆಸುತ್ತಾರೋ ಎಂಬ ಭೀತಿಯಲ್ಲೇ ಫುಟ್ಬಾಲ್ ಹಬ್ಬ ಆಚರಿಸುತ್ತಿದ್ದಾರೆ. ಒಂದು ಕಡೆ ಕಡಲ್ಗಳ್ಳರು, ಇನ್ನೊಂದು ಕಡೆ ಮೂಲಭೂತವಾದಿಗಳು ಇವರ ಮಧ್ಯೆ ಸಿಕ್ಕಿ ಜನ ಸಾಮಾನ್ಯರು ತತ್ತರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಉಗ್ರರು, ಮೂಲಭೂತವಾದಿಗಳ ಕೈಲಿ ದೇಶದ ಚುಕ್ಕಾಣಿ ಇರುವುದರಿಂದ ಟಿವಿ ನೋಡಿದರೆ ಸಾರ್ವಜನಿಕವಾಗಿ ಜೀವಹರಣವಾಗುವುದ್ದಂತೂ ಖಂಡಿತ. ಪರಿಸ್ಥಿತಿ ಹೀಗಿದ್ದರೂ ಸೊಮಾಲಿಗಳು ಕದ್ದು ಮುಚ್ಚಿ ಟಿವಿ ವೀಕ್ಷಿಸುತ್ತಿದ್ದಾರೆ.
ಇದುವರೆವಿಗೂ ಸುಮಾರು 30 ಅಧಿಕ ಜನರನ್ನು ಬಂಧಿಸಿದ್ದರಲ್ಲದೆ ಇಬ್ಬರನ್ನು ಹತ್ಯೆಗೈದಿದ್ದಾರೆ. ಬಂಧಿತ ಮೂವತ್ತು ಜನರ ಸ್ಥಿತಿಯ ಬಗ್ಗೆ ಯಾವುದೇ ಸುದ್ದಿಯಿಲ್ಲ. ಬಂಧಿತರನ್ನು ನೋಡಲು ಅವರ ಕುಟುಂಬದವರಿಗೆ ಈವರೆಗೂ ಬಿಟ್ಟಿಲ್ಲ.
ನಿಷೇಧಕ್ಕೆ ಇಸ್ಲಾಂ ಸಮರ್ಥನೆ: ಫುಟ್ಬಾಲ್ ಆಟ ಹುಟ್ಟಿದ್ದು, ಕ್ರೈಸ್ತರ ಸಂಸ್ಕೃತಿ ಹೊಂದಿರುವ ದೇಶದಿಂದ, ಇಸ್ಲಾಂ ಆಡಳಿತ ಫೀಫಾ ವಿಶ್ವಕಪ್ ನೋಡಲು ಅವಕಾಶ ನೀಡುವುದಿಲ್ಲ ಎಂದು ಇಸ್ಲಾಂ ಸಂಘಟನೆ ಮುಖಂಡ ಶೇಕ್ ಅಬು ಯಹ್ಯಾ ಇರಾಕಿ ಹೇಳಿತ್ತಾರೆ.
'ಹಿಜ್ಬುಲ್ ಇಸ್ಲಾಂ' ಅಹಗೂ 'ಅಲ್ ಷಬಾದ್' ಹೆಸರಿನ ಇಸ್ಲಾಂ ಸಂಘಟನೆಗಳು ಷರಿಯಾರ್ ಕಾನೂನು ಅಳವಡಿಸುತ್ತಿದೆ. ನಿಯಮಗಳನ್ನು ಮೀರಿದರೆ ಉಗ್ರ ಶಿಕ್ಷೆ ನೀಡುತ್ತದೆ. ಸಾಕರ್ ಆಟ' ಸೈತಾನನ ಕೃತ್ಯ' ಎಂದು ಇಸ್ಲಾಂ ಸಂಘಟಕರು ನಂಬಿದ್ದಾರೆ. 2006 ವಿಶ್ವಕಪ್ ಪಂದ್ಯಾವಳಿ ಸಮಯದಲ್ಲಿ ಟಿವಿ ವೀಕ್ಷಣೆಗೆ ಹೇರಿದ್ದ ನಿಷೇಧ ಇನ್ನೂ ಜಾರಿಯಲ್ಲಿದೆ.
ಇಥಿಯೋಪಿಯಾದ ಸೈನಿಕರು ಇಸ್ಲಾಂ ಬಂಡುಕೋರರನ್ನು 2007 ರಲ್ಲೇ ದೇಶದಿಂದ ಹೊರಗಟ್ಟಿದ್ದರು. ಆದರೆ, ನಂತರ ತನ್ನ ಪ್ರಾಬಲ್ಯ ಹಿಗ್ಗಿಸಿಕೊಂಡ ಇಸ್ಲಾಂ ಸಂಘಟನೆಗಳು ಮೂಲಭೂತವಾದವನ್ನು ಎಲ್ಲೆಡೆ ಪಸರಿಸಲು ಅಣಿಯಾಗಿವೆ. ಉಗ್ರರ ದಾಳಿಗೆ ಸಿಕ್ಕಿ ಅಮಾಯಕ ಸಾವಿರಾರು ಜನ ಸೊಮಾಲಿಗಳು ಸಾವನ್ನಪ್ಪುತ್ತಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications