ಸಾಕರ್ ಪಂದ್ಯ ನೋಡಿದರೆ ಸಾವು ಖಚಿತ
ಫೀಫಾ ಫುಟ್ಬಾಲ್ ವಿಶ್ವಕಪ್ ಎಲ್ಲರ ಕಣ್ಮನ ಸೆಳೆಯುವ ಹಬ್ಬವಾಗಿದೆ. ಎಲ್ಲರೂ ಪಂದ್ಯವೀಕ್ಷಿಸಲು ಸಮಯ ಹೊಂದಿಸಿಕೊಂಡು ಟಿವಿ ಪರದೆ ವೀಕ್ಷಿಸಿ ಆನಂದಿಸುತ್ತಿದ್ದಾರೆ. ಆದರೆ, ಸೊಮಾಲಿಯಾದಲ್ಲಿ ಮಾತ್ರ ವಿಶ್ವಕಪ್ ಪಂದ್ಯಗಳನ್ನು ನೋಡುವುದೆಂದರೆ ಪ್ರಾಣವನ್ನು ಪಣಕ್ಕಿಟ್ಟಂತೆ.
ಒಂದು ಕಣ್ಣು ಟಿವಿ ಮೇಲೆ ಮತ್ತೊಂದು ಬಾಗಿಲ ಮೇಲೆ ನೆಟ್ಟು ಜೀವಭಯದಿಂದ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಸಾಕರ್ ಅಭಿಮಾನಿಯೊಬ್ಬರು. ಯಾವ ಕ್ಷಣದಲ್ಲಿ ಉಗ್ರರು ದಾಳಿ ನಡೆಸುತ್ತಾರೋ ಎಂಬ ಭೀತಿಯಲ್ಲೇ ಫುಟ್ಬಾಲ್ ಹಬ್ಬ ಆಚರಿಸುತ್ತಿದ್ದಾರೆ. ಒಂದು ಕಡೆ ಕಡಲ್ಗಳ್ಳರು, ಇನ್ನೊಂದು ಕಡೆ ಮೂಲಭೂತವಾದಿಗಳು ಇವರ ಮಧ್ಯೆ ಸಿಕ್ಕಿ ಜನ ಸಾಮಾನ್ಯರು ತತ್ತರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಉಗ್ರರು, ಮೂಲಭೂತವಾದಿಗಳ ಕೈಲಿ ದೇಶದ ಚುಕ್ಕಾಣಿ ಇರುವುದರಿಂದ ಟಿವಿ ನೋಡಿದರೆ ಸಾರ್ವಜನಿಕವಾಗಿ ಜೀವಹರಣವಾಗುವುದ್ದಂತೂ ಖಂಡಿತ. ಪರಿಸ್ಥಿತಿ ಹೀಗಿದ್ದರೂ ಸೊಮಾಲಿಗಳು ಕದ್ದು ಮುಚ್ಚಿ ಟಿವಿ ವೀಕ್ಷಿಸುತ್ತಿದ್ದಾರೆ.
ಇದುವರೆವಿಗೂ ಸುಮಾರು 30 ಅಧಿಕ ಜನರನ್ನು ಬಂಧಿಸಿದ್ದರಲ್ಲದೆ ಇಬ್ಬರನ್ನು ಹತ್ಯೆಗೈದಿದ್ದಾರೆ. ಬಂಧಿತ ಮೂವತ್ತು ಜನರ ಸ್ಥಿತಿಯ ಬಗ್ಗೆ ಯಾವುದೇ ಸುದ್ದಿಯಿಲ್ಲ. ಬಂಧಿತರನ್ನು ನೋಡಲು ಅವರ ಕುಟುಂಬದವರಿಗೆ ಈವರೆಗೂ ಬಿಟ್ಟಿಲ್ಲ.
ನಿಷೇಧಕ್ಕೆ ಇಸ್ಲಾಂ ಸಮರ್ಥನೆ: ಫುಟ್ಬಾಲ್ ಆಟ ಹುಟ್ಟಿದ್ದು, ಕ್ರೈಸ್ತರ ಸಂಸ್ಕೃತಿ ಹೊಂದಿರುವ ದೇಶದಿಂದ, ಇಸ್ಲಾಂ ಆಡಳಿತ ಫೀಫಾ ವಿಶ್ವಕಪ್ ನೋಡಲು ಅವಕಾಶ ನೀಡುವುದಿಲ್ಲ ಎಂದು ಇಸ್ಲಾಂ ಸಂಘಟನೆ ಮುಖಂಡ ಶೇಕ್ ಅಬು ಯಹ್ಯಾ ಇರಾಕಿ ಹೇಳಿತ್ತಾರೆ.
'ಹಿಜ್ಬುಲ್ ಇಸ್ಲಾಂ' ಅಹಗೂ 'ಅಲ್ ಷಬಾದ್' ಹೆಸರಿನ ಇಸ್ಲಾಂ ಸಂಘಟನೆಗಳು ಷರಿಯಾರ್ ಕಾನೂನು ಅಳವಡಿಸುತ್ತಿದೆ. ನಿಯಮಗಳನ್ನು ಮೀರಿದರೆ ಉಗ್ರ ಶಿಕ್ಷೆ ನೀಡುತ್ತದೆ. ಸಾಕರ್ ಆಟ' ಸೈತಾನನ ಕೃತ್ಯ' ಎಂದು ಇಸ್ಲಾಂ ಸಂಘಟಕರು ನಂಬಿದ್ದಾರೆ. 2006 ವಿಶ್ವಕಪ್ ಪಂದ್ಯಾವಳಿ ಸಮಯದಲ್ಲಿ ಟಿವಿ ವೀಕ್ಷಣೆಗೆ ಹೇರಿದ್ದ ನಿಷೇಧ ಇನ್ನೂ ಜಾರಿಯಲ್ಲಿದೆ.
ಇಥಿಯೋಪಿಯಾದ ಸೈನಿಕರು ಇಸ್ಲಾಂ ಬಂಡುಕೋರರನ್ನು 2007 ರಲ್ಲೇ ದೇಶದಿಂದ ಹೊರಗಟ್ಟಿದ್ದರು. ಆದರೆ, ನಂತರ ತನ್ನ ಪ್ರಾಬಲ್ಯ ಹಿಗ್ಗಿಸಿಕೊಂಡ ಇಸ್ಲಾಂ ಸಂಘಟನೆಗಳು ಮೂಲಭೂತವಾದವನ್ನು ಎಲ್ಲೆಡೆ ಪಸರಿಸಲು ಅಣಿಯಾಗಿವೆ. ಉಗ್ರರ ದಾಳಿಗೆ ಸಿಕ್ಕಿ ಅಮಾಯಕ ಸಾವಿರಾರು ಜನ ಸೊಮಾಲಿಗಳು ಸಾವನ್ನಪ್ಪುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications