ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಲಿಬಾರ್ ವರದಿ, ರೈತರಿಗೆ ಅಪಮಾನ: ಎಚ್ಡಿಕೆ

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಜೂ.17: ಇದು ಬಿಜೆಪಿ ಬರೆದುಕೊಟ್ಟ ವರದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಬೇಕಾದ ರೀತಿ ವರದಿ ತಿರುಚಿ, ನ್ಯಾಯಾಧೀಶರ ಕೈಲಿ ಹೇಳಿಸಿದ್ದಾರೆ. ಹಾವೇರಿ ಗೋಲಿಬಾರ್ ವರದಿಯಲ್ಲಿ ಉಲ್ಲೇಖಿಸಿರುವ ಗೂಂಡಾಗಳು ಯಾರು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಗೋಲಿಬಾರ್‌ನಲ್ಲಿ ಮೃತನಾದ ರೈತ ಸಿದ್ದಲಿಂಗಪ್ಪ ಚೂರಿ ಬಿಜೆಪಿ ಪಕ್ಷದ ಕಾರ್ಯಕರ್ತ ಎಂಬುದು ಸರ್ವವಿದಿತ. ರಸಗೊಬ್ಬರ ಗಲಾಟೆಗೆ ಬಿಜೆಪಿಯೇ ಕಾರಣ. ಅಲ್ಲಿ ಜೆಡಿಎಸ್ ನೆಲೆಯಿಲ್ಲ. ಗಲಾಟೆ ಮಾಡಿದವರು ಬಿಜೆಪಿ ಕಾರ್ಯಕರ್ತರು, ಒದೆ ತಿಂದವರು ರೈತರು ಎಂದು ಕುಮಾರಸ್ವಾಮಿ ಹೇಳಿದರು.

ಮಲ್ಯ ಬೆಂಬಲಕ್ಕೆ ಕಾಂಗ್ರೆಸ್ ಟೀಕೆ: ಇಂದು ರಾಜ್ಯಸಭೆ ಚುನಾವಣೆ ಮತದಾನ ಜಾರಿಯಲ್ಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಮಲ್ಯ ಮೊದಲು ರಾಜ್ಯಸಭೆಗೆ ಕಳುಹಿಸಿದ್ದ ಕಾಂಗ್ರೆಸ್, ಜೆಡಿಎಸ್ ಕುದುರೆ ವ್ಯಾಪಾರ ನಡೆಸಿದೆ ಎನ್ನುವುದು ಸರಿಯಲ್ಲ. ಇನ್ಮುಂದೆ ಕಾಂಗ್ರೆಸ್ ಜತೆ ಯಾವುದೇ ಮಾತುಕತೆ, ಮೈತ್ರಿ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X