ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ರಸಾ, ಮಸೀದಿಗಳಲ್ಲಿ ಮೊಳಗಲಿದೆ ಕನ್ನಡ ಕಹಳೆ

By Rajendra
|
Google Oneindia Kannada News

Kannada camps in madrasas, mosques
ಬೆಂಗಳೂರು, ಜೂ.12: ಮುಸ್ಲಿಂ ಬಾಂಧವರಲ್ಲಿ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಡಿ ಇಟ್ಟ್ಟಿದೆ. ಮದ್ರಸಾ ಮತ್ತು ಮಸೀದಿಗಳಲ್ಲಿ "ಕನ್ನಡ ಕಲಿಕೆ ಮತ್ತು ಸಾಂಸ್ಕೃತಿಕ ಶಿಬಿರ"ಗಳನ್ನು ಹಮ್ಮಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಈ ಮೂಲಕ ಮದ್ರಸಾ ಮತ್ತು ಮಸೀದಿಗಳಲ್ಲಿ ಕನ್ನಡ ಕಹಳೆ ಮೊಳಗಲಿದೆ.

ಹಲವಾರು ಸಮಸ್ಯೆಗಳ ಕಾರಣ ನಗರ ಪ್ರದೇಶದ ಬಹಳಷ್ಟು ಮುಸ್ಲಿಂ ಬಾಂಧವರು ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಹಾಗೂ ಬರೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮದ್ರಸಾಗಳಲ್ಲಿ ಹಾಗೂ ಮಸೀದಿಗಳಲ್ಲಿ ಕನ್ನಡ ಭಾಷಾ ಕಲಿಕೆಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಕನ್ನಡ ಕಲಿಕೆಯ ಮೊದಲ ಶಿಬಿರವನ್ನು ಎಚ್ ಬಿಆರ್ ಲೇಔಟ್ ನ ಮೊದಲ ಹಂತದಲ್ಲಿರುವ ಫಲಹೇಧರೆನ್ ಮದ್ರಸಾದಲ್ಲಿ ಭಾನುವಾರ ಆರಂಭಿಸಲಾಗುತ್ತದೆ. ಉದ್ಘಾಟನಾ ಶಿಬಿರದಲ್ಲಿ ಸಂಸದ ಪಿ ಸಿ ಮೋಹನ್, ಶಾಸಕ ಕೆ ಜೆ ಜಾರ್ಜ್ ಹಾಗೂ ಹನೀಫ್ ಅಪ್ಸರ್ ಅನೀಜ್ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X