ಮದ್ರಸಾ, ಮಸೀದಿಗಳಲ್ಲಿ ಮೊಳಗಲಿದೆ ಕನ್ನಡ ಕಹಳೆ

ಹಲವಾರು ಸಮಸ್ಯೆಗಳ ಕಾರಣ ನಗರ ಪ್ರದೇಶದ ಬಹಳಷ್ಟು ಮುಸ್ಲಿಂ ಬಾಂಧವರು ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಹಾಗೂ ಬರೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮದ್ರಸಾಗಳಲ್ಲಿ ಹಾಗೂ ಮಸೀದಿಗಳಲ್ಲಿ ಕನ್ನಡ ಭಾಷಾ ಕಲಿಕೆಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕನ್ನಡ ಕಲಿಕೆಯ ಮೊದಲ ಶಿಬಿರವನ್ನು ಎಚ್ ಬಿಆರ್ ಲೇಔಟ್ ನ ಮೊದಲ ಹಂತದಲ್ಲಿರುವ ಫಲಹೇಧರೆನ್ ಮದ್ರಸಾದಲ್ಲಿ ಭಾನುವಾರ ಆರಂಭಿಸಲಾಗುತ್ತದೆ. ಉದ್ಘಾಟನಾ ಶಿಬಿರದಲ್ಲಿ ಸಂಸದ ಪಿ ಸಿ ಮೋಹನ್, ಶಾಸಕ ಕೆ ಜೆ ಜಾರ್ಜ್ ಹಾಗೂ ಹನೀಫ್ ಅಪ್ಸರ್ ಅನೀಜ್ ಅವರು ಭಾಗವಹಿಸಲಿದ್ದಾರೆ.












Click it and Unblock the Notifications