ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮದ್ರಸಾ, ಮಸೀದಿಗಳಲ್ಲಿ ಮೊಳಗಲಿದೆ ಕನ್ನಡ ಕಹಳೆ
ಹಲವಾರು ಸಮಸ್ಯೆಗಳ ಕಾರಣ ನಗರ ಪ್ರದೇಶದ ಬಹಳಷ್ಟು ಮುಸ್ಲಿಂ ಬಾಂಧವರು ಕನ್ನಡವನ್ನು ನಿರರ್ಗಳವಾಗಿ ಮಾತನಾಡಲು ಹಾಗೂ ಬರೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮದ್ರಸಾಗಳಲ್ಲಿ ಹಾಗೂ ಮಸೀದಿಗಳಲ್ಲಿ ಕನ್ನಡ ಭಾಷಾ ಕಲಿಕೆಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಕನ್ನಡ ಕಲಿಕೆಯ ಮೊದಲ ಶಿಬಿರವನ್ನು ಎಚ್ ಬಿಆರ್ ಲೇಔಟ್ ನ ಮೊದಲ ಹಂತದಲ್ಲಿರುವ ಫಲಹೇಧರೆನ್ ಮದ್ರಸಾದಲ್ಲಿ ಭಾನುವಾರ ಆರಂಭಿಸಲಾಗುತ್ತದೆ. ಉದ್ಘಾಟನಾ ಶಿಬಿರದಲ್ಲಿ ಸಂಸದ ಪಿ ಸಿ ಮೋಹನ್, ಶಾಸಕ ಕೆ ಜೆ ಜಾರ್ಜ್ ಹಾಗೂ ಹನೀಫ್ ಅಪ್ಸರ್ ಅನೀಜ್ ಅವರು ಭಾಗವಹಿಸಲಿದ್ದಾರೆ.
Comments
ಮದ್ರಸಾ ಮಸೀದಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಮಂತ್ರಿ ಚಂದ್ರು ಬೆಂಗಳೂರು kannada development authority madrasa mosque bangalore mukhyamantri chandru
Story first published: Saturday, June 12, 2010, 13:08 [IST]