ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಅಪ್ಪಂದಿರಿಗೆ ಈ ನಾಟಕ ಅರ್ಪಿತ

By Mahesh
|
Google Oneindia Kannada News

Vinayak joshi
ಬೆಂಗಳೂರು, ಏ.7: 'ಶ್ರಾದ್ಧ ಎಂದರೆ ಸತ್ತವರಿಗೆ ಮಾಡುವ ಅಪರ ಕ್ರಿಯೆಯಲ್ಲ. ಇದ್ದಾಗ ಅವರಿಗೆ ಮಕ್ಕಳಾದ ನಾವು ಶ್ರದ್ಧೆಯಿಂದ ಆರೈಕೆ ಮಾಡುವುದು' ಎಂಬ ಸದಭಿರುಚಿ ಸಂದೇಶವುಳ್ಳ ವಿನಾಯಕ್ ಜೋಷಿ ಅವರ 'ಶ್ರದ್ಧಾ' ನಾಟಕ 25 ಪ್ರದರ್ಶನಕ್ಕೆ ಸಿದ್ಧವಾಗಿದೆ. ತಂದೆ ಮಕ್ಕಳ ಸಂಬಂಧದ ಮೇಲೆ ರೂಪಿತವಾದ ನಾಟಕ,ಕಥಾನಕಕ್ಕೆ ಪೂರಕ ಸಂಗೀತ, ಗ್ರಾಮ್ಯ ಭಾಷಾ ಸೊಗಡನ್ನು ಹೊಂದಿದೆ.

ರೇಡಿಯೋ ಸಿಟಿ 91.1 ರಲ್ಲಿ ಆರ್ ಜೆ ಆಗಿ ವಿನಾಯಕ್ ಜೋಷಿ ಸಾಕಷ್ಟು ಬ್ಯುಸಿಯಾಗಿದ್ದರೂ ನಾಟಕದ ನಂಟು ಬಿಟ್ಟಿಲ್ಲ. ಪ್ರತಿ ವರ್ಷ ತನ್ನ ತಂದೆ ವಾಸುದೇವ ಜೋಷಿ ಅವರು ಗತಿಸಿದ ದಿನವನ್ನು ಅರ್ಥಪೂರ್ಣವಾಗಿ ಸ್ಮರಿಸಲು ರಂಗವೇದಿಕೆ ಏರುತ್ತಾರೆ. ಈ ಬಾರಿ ಕೂಡ ಅವರ ತಂದೆ ತೀರಿ ಹೋಗಿ 3 ವರ್ಷಗಳದ ಸಂದರ್ಭದಲ್ಲಿ 'ಶ್ರದ್ಧಾ' ನಾಟಕವನ್ನು ಎಂದಿನಂತೆ ಅವರಿಗೆ ಅರ್ಪಿಸಿ, ಸಾರ್ಥಕತೆ ಕಾಣುವ ನಿಟ್ಟಿನಲ್ಲಿದ್ದಾರೆ. ವಿನಾಯಕ್ ಜೋಷಿ ಅವರ ಯುವ ರಂಗತಂಡದ ಬೆನ್ನುತಟ್ಟಲು ತಪ್ಪದೇ ಬನ್ನಿ.

ವಿವರಗಳು ಇಂತಿದೆ:
ನಾಟಕ ರಚನೆ: ಶ್ರೀನಿವಾಸ ವೈದ್ಯ
ನಿರ್ದೇಶನ: ವಿನಾಯಕ್ ಜೋಷಿ
ಸಂಗೀತ: ಪ್ರವೀಣ್ ಹಾಗೂ ರಾಜು ಹೊಸಕೋಟೆ ತಂಡ.

ಸ್ಥಳ: ಕೆ ಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು
ದಿನಾಂಕ/ದಿನ: ಏ.14, ಬುಧವಾರ
ಸಮಯ: ರಾತ್ರಿ 7.30ಕ್ಕೆ

ಟಿಕೆಟ್ ಗಳಿಗಾಗಿ ಸಂಪರ್ಕಿಸಿ:
ವೆಬ್ : www.buzzintown.com
ಅಹ್ಮದ್: 99869 84878

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X