ನಂಜನಗೂಡು-ಕಳಲೆ ರಥೋತ್ಸವ

ಮುಜರಾಯಿ ಇಲಾಖೆ ಮತ್ತು ಮೈಸೂರಿನಲ್ಲಿರುವ ಶ್ರೀಲಕ್ಷ್ಮೀಕಾಂತ ಸೇವಾಭಿವರ್ಧಿನಿ ಸಭಾಗಳು ಜಂಟಿಯಾಗಿ ರಥೋತ್ಸವವನ್ನು ಹಮ್ಮಿಕೊಂಡಿವೆ. 1908 ರಿಂದ ಕಳಲೆ ಉತ್ಸವನ್ನು ನಡೆಸುತ್ತಾ ಬಂದಿರುವ ಕೀರ್ತಿ ಸೇವಾಭಿವರ್ಧಿನಿ ಸಂಸ್ಥೆಗೆ ಸಲ್ಲುತ್ತದೆ. ಇದರ ಅಂಗವಾಗಿ ಒಟ್ಟು ಒಂಬತ್ತು ದಿನಗಳ ಕಾಲ ನಾನಾ ಉತ್ಸವಗಳು ನಡೆಯಲಿದೆ. ರಥೋತ್ಸವಕ್ಕೆ ಬರುವವರಿಗಾಗಿ ನಂಜನಗೂಡಿನಿಂದ ವಿಶೇಷ ವಾಹನ ಸೌಲಭ್ಯ ಏರ್ಪಡಿಸಲಾಗಿದೆ. ಇದರ ಜತೆಗೆ ನಂಜನಗೂಡಿನಿಂದ ಕಳಲೆಗೆ ಪ್ರತಿ 45 ನಿಮಿಷಕ್ಕೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯವಿದೆ.
ಊರು, ಉತ್ಸವ, ದೇವಸ್ಥಾನ ಮುಂತಾದ ವಿವರಗಳು ಈಗ ವೆಬ್ ನಲ್ಲಿ ಸಿಗುತ್ತವೆ. ಕಳಲೆ ರಥೋತ್ಸವಕ್ಕೆ ಖುದ್ದಾಗಿ ಹೋಗಲು ಸಾಧ್ಯವಾಗದವರು ವೆಬ್ ಮುಖಾಂತರ ಸ್ವಾಮಿ ದರ್ಶನ ಮಾಡಬಹುದು. ನೋಡಿ: www.kalalelakshmikantaswamy.org












Click it and Unblock the Notifications