ರೌಡಿ ಅಭ್ಯರ್ಥಿಗಳಿಗೆ ಕುಮ್ಮಿ ಸಮರ್ಥನೆ

ಭಾರತದ ರಾಜಕೀಯ ಇತಿಹಾಸ ಅವಲೋಕಿಸಿದಾಗ ಕ್ರಿಮಿನಲ್ ಗಳು ವಿಧಾನಸಭೆ, ಲೋಕಸಭೆಯನ್ನೂ ಹೊಕ್ಕಿರುವ ಅನೇಕ ಉದಾಹರಣೆಗಳು ಕಣ್ಮುಂದಿವೆ. ಆದರೆ, ಉತ್ತರ ಭಾರತದ ( ಬಿಹಾರ) ರಾಜಕೀಯದಲ್ಲಿ ಇದು ಸಹಜ. ಅದು ಅಲ್ಲಿಯ ಜನರ ಕರ್ಮ ಕೂಡ. ಆದರೆ, ಕರ್ನಾಟಕದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಜನನಾಯಕರು ವಿರಳ. ಕನ್ನಡಿಗರು ಅಂತಹ ವ್ಯಕ್ತಿಗಳಿಗೆ ಬೆಂಬಲಿಸುವುದು ಸಹ ಕಡಿಮೆ. ಆದರೆ, ಬಿಬಿಎಂಪಿ ಚುನಾವಣೆ ಬೆಂಗಳೂರನ್ನು ಬಿಹಾರ ಮಾಡಲು ಹೊರಟಿರುವ ಬೆಳವಣಿಗೆಗಳು ನಾಗರೀಕರನ್ನು ದಂಗು ಬಡಿಸಿವೆ.
ಬಿಬಿಎಂಪಿ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪಕ್ಷವನ್ನು ಗೆಲ್ಲಿಸಬೇಕು. ಇದಕ್ಕೆ ಕ್ರಿಮಿನಲ್ ಹಿನ್ನೆಲೆ ಉಳ್ಳವನಾದರೂ ಸರಿ, ಸರಣಿ ಹಂತಕನಾದರೂ ಸರಿ. ಅವನಿಗೆ ಜನಪ್ರಿಯತೆ ಇದೆಯೇ ? ಆತನ ಹಿಂದೆ ನಾಲ್ಕಾರು ಪುಂಡರ ಗುಂಪಿದೆಯೇ ? ಜನಸಾಮಾನ್ಯರಿಗೆ ಆತನಲ್ಲಿ ಭಯಭಕ್ತಿ ಇದೆಯೇ ? ಇದೆಲ್ಲಕ್ಕೂ ಮಿಗಿಲಾಗಿ ಅಲ್ಪಸಂಖ್ಯಾತ ಧರ್ಮಕ್ಕೆ ಸೇರಿದವನಾಗಿದ್ದರಂತೂ ಆತನಿಗೆ ರಾಜಮರ್ಯಾದೆ! ಇದರ ಪರಿಣಾಮವೇ ಬನಶಂಕರಿಯಲ್ಲಿ ತೆನೆ ಹೊತ್ತ ಗುರುತಿನ ಮೇಲೆ ಸ್ಪರ್ಧಿಸಿರುವ ಮೊಹ್ಮದ್ ಅಲಿ ಅಲಿಯಾಸ್ ದಿವಾನ್ ಅಲಿ. ಜೆಡಿಎಸ್ ಅಭ್ಯರ್ಥಿ ಅಲಿಯ ಕಥಾನಕವನ್ನು ಕೆದಗುತ್ತಾ ಹೋದರೆ, ಇಡೀ ಬೆಂಗಳೂರೇ ಬೆಚ್ಚಿ ಬೀಳುವಂತ ಪಾತಕಗಳನ್ನು ನಡೆಸಿರುವಂತಹ ನಟೋರಿಯಸ್ ರೌಡಿ ಈತ.
ದಿವಾನ್ ಅಲಿ ಮೇಲೆ ಕೊಲೆ, ಅರ್ಧ ಕೊಲೆ, ಕೊಲೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ, ಹಪ್ತಾ ವಶೀಲಿ, ಅಪಹರಣ ಪ್ರಕರಣಗಳು ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಯಲ್ಲಿ ಈತನ ವಿರುದ್ಧ 15 ಪ್ರಕರಣ ದಾಖಲಾಗಿವೆ. ಅದರಲ್ಲಿ 11 ಕೇಸ್ ಗಳಲ್ಲಿ ಖುಲಾಸೆಗೊಂಡಿದ್ದು, 4 ಪ್ರಕರಣಗಳಲ್ಲಿ ದಿವಾನ್ ಅಲಿ ಪೊಲೀಸರಿಗೆ ಬೇಕಿರುವ ಅಸಾಮಿ. ಪೆರೋಲ್ ಮೂಲಕ ಜೈಲಿನಿಂದ ಹೊರಬಂದ ಈ ವ್ಯಕ್ತಿ, ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿ, ಬನಶಂಕರಿಯಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾನೆ. ಆದರೆ, ಗಟ್ಟಿ ಮನಸ್ಸು ಮಾಡಿದ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ನೀನು ರೌಡಿ ಶೀಟರ್ ನಿನಗೆ ಟಿಕೆಟ್ ಕೊಟ್ಟರೆ ಪಕ್ಷದ ಬಗ್ಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಮುಖಕ್ಕೆ ಹೊಡೆದಂತೆ ಮಾತಾಡಿ ಹೊರಹಾಕಿದ್ದಾರೆ.
ನಂತರ ಅಲಿ ಮೆಟ್ಟಿಲು ತುಳಿದಿದ್ದು ಜೆಡಿಎಸ್ ಕಚೇರಿಗೆ, ದಿವಾನ್ ಅಲಿ ಎಂಬ ಹೆಸರೇ ಸಾಕಿತ್ತು ಜೆಡಿಎಸ್ ನಾಯಕರಿಗೆ, ಹಿಂದೆ ಮುಂದೆ ನೋಡದೆ, ಟಿಕೆಟ್ ನೀಡಿ ಬನಶಂಕರಿಯಿಂದ ಗೆದ್ದು ಬಂದು ಜೆಡಿಎಸ್ ಮಾನ ಕಾಪಾಡು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹರಸಿ ಹಾರೈಸಿದ್ದಾರೆ. ಹಲವಾರು ವರ್ಷಗಳ ಕಾಲ ಜನರನ್ನು ಕಾಡಿದ ರೌಡಿಯೊಬ್ಬನಿಗೆ ಮತಹಾಕಬೇಕೇ ಎನ್ನುವುದು ಅಲ್ಲಿನ ಬನಶಂಕರಿ ವಾರ್ಡ್ ನ ಮತದಾರರ ಪ್ರಶ್ನೆ ?
ಆದರೆ, ಈ ಕುರಿತು ಪ್ರಶ್ನಿಸಿದರೆ ಮಾಜಿ ಸಿಎಂ ಹೇಳಿಕೆ ದಂಗುಬಡಿಸುವಂತಿದೆ. 'ಕ್ರಿಮಿನಲ್ ಹಿನ್ನೆಲೆಯುಳ್ಳವರು ಚುನಾವಣೆಗೆ ಸ್ಪರ್ಧಿಸಿಬಾರದು ಎನ್ನುವುದು ಎಲ್ಲಿದೆ. ದಿವಾನ್ ಅಲಿ ಆರೋಪಿ ಅಷ್ಟೆ, ಅಪರಾಧಿ ಅಲ್ಲ. ಯಾವುದೂ ಕಾರಣಕ್ಕೆ ಆತನ ಮೇಲೆ ಕೇಸ್ ಗಳು ದಾಖಲಾಗಿವೆ. ರೌಡಿಗಳು ಸ್ಪರ್ಧಿಸಬಾರದು ಎನ್ನುವುದು ಸೂಕ್ತ ಎಂಬ ಪರ್ಮಾನು ಹೊರಡಿಸಿದ್ದಾರೆ ? ಅಲ್ಲದೇ ನಾವು ತರಕಾರಿ ಮಾರುವ ವ್ಯಕ್ತಿಗೂ ಟಿಕೆಟ್ ನೀಡಿದ್ದೇವೆ. ಅದನ್ನೆಲ್ಲಾ ಏಕೆ ಹೈಲೈಟ್ ಮಾಡುತ್ತಿಲ್ಲ. ದಿವಾನ್ ಅಲಿಯ ಬಗ್ಗೆ ಏಕೆ ಮಾತನಾಡುತ್ತೀರಿ ?' ಸಮಾಜದ ಬಗ್ಗೆ ಕಳಕಳಿ ಇರುವ ಯಾವ ಮುಖಂಡನೊಬ್ಬ ಮಾತಿದು.
ಕುಮಾರಸ್ವಾಮಿ ಸಾಮಾನ್ಯ ಮನುಷ್ಯರಲ್ಲ. ಒಂದು ಕಾಲದಲ್ಲಿ ರಾಜ್ಯವನ್ನು ಮುನ್ನಡೆಸಿದ ನಾಯಕ. ಅವರ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ಹೆಗ್ಗಳಿಕೆ ಪಾತ್ರನಾಗಿರುವ ವ್ಯಕ್ತಿಯೊಬ್ಬ ಹೀಗೆ ಮಾತನಾಡುವುದು ಸರಿಯೇ ? ಗೆಲುವು ಸಾಧಿಸಲು ಏನನ್ನಾದರೂ ಮಾಡಲು ರಾಜಕೀಯ ನಾಯಕರು ಹೇಸುವುದಿಲ್ಲ ಎನ್ನುವುದಕ್ಕೆ ಕುಮಾರಸ್ವಾಮಿ ಹೇಳಿಕೆ ಸ್ಪಷ್ಟ ನಿದರ್ಶನ. ಜೆಡಿಎಸ್ ಗೆಲ್ಲಿಸಲು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಅಷ್ಟೂ ರೌಡಿಗಳಿಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ಪ್ರತಿಪಕ್ಷಗಳ ನಾಯಕರುಗಳ ಕುಹಕವಾಗಿದೆ.
ಕುಡಿಯುವ ನೀರಿನ ಬವಣೆ ತೀರಿಸಲು ಸರಕಾರ ಮಳೆ ನೀರು ಕೊಯ್ಲು ಯೋಜನೆಯನ್ನು ಕಡ್ಡಾಯಗೊಳಿಸಿದೆ. ನೂತನವಾಗಿ ನಿರ್ಮಿಸಲಾಗುವ ಕಟ್ಟಡಕ್ಕೆ ಮಾತ್ರ ಮಳೆ ನೀರು ಕೊಯ್ಲು ಯೋಜನೆ ಕಡ್ಡಾಯಗೊಳಿಸುವುದಾಗಿ ಜೆಡಿಎಸ್ ಘೋಷಿಸಿರುವುದು ಹಸಿರು ಕ್ರಾಂತಿಗೆ ಹಿನ್ನೆಡೆ ಉಂಟಾಗಿದೆ. ಇದು ಕೂಡ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಗರ ಪ್ರದೇಶಗಳ ಅಭಿವೃದ್ಧಿ ವಿರೋಧಿ ಎಂಬ ಹಣೆಪಟ್ಟಿ ಹೊತ್ತಿರುವ ಜೆಡಿಎಸ್, ಪರಿಸರಕ್ಕೆ ಸಂಚಕಾರ ತಂದಿದೆ ಎಂಬ ಆರೋಪವೂ ಈ ಪಕ್ಷದ ಮೇಲಿದೆ.
ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಿರುವುದನ್ನು ಲೋಕಾಯುಕ್ತ ಸಂತೋಷ ಹೆಗ್ಡೆ ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವವರು ಯಾರು ? ರೌಡಿಗಳು ಕಾರ್ಪೋರೇಟರ್ ಗಳಾದರೆ ಜನರಿಗೆ ರಕ್ಷಣೆ ನೀಡುವವರು ಯಾರು ? ಇಂತಹ ಬೆಳವಣಿಗೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಪಕ್ಷ ಯಾವುದಾದರೂ ಸರಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವುದು ಜನತೆಗೆ ಮಾಡಿದ ಮೋಸ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications