ಈದ್ಗಾ ಬೇಡ, ಹುತಾತ್ಮರ ಮೈದಾನವೆನ್ನಿ!

ಸುಪ್ರೀಂಕೋರ್ಟ್ ತೀರ್ಪಿನಿಂದ, ಈ ಮೈದಾನದ ಸಂಪೂರ್ಣ ಮಾಲೀಕತ್ವ ಹಾಗೂ ಹಕ್ಕುಗಳು ಕೇವಲ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯವು ಎಂಬುದು ಸ್ಪಷ್ಟವಾಗಿದೆ. ಈಗ ಈ ಮೈದಾನವನ್ನು ಈದ್ಗಾ ಮೈದಾನವೆಂದು ಕರೆಯುವುದು ಅಸಮಂಜಸ ಹಾಗೂ ನ್ಯಾಯಾಲಯದ ತೀರ್ಪಿನ ವಿರುದ್ಧ ಎನಿಸುವುದು.
ಹಲವು ವರುಷಗಳಿಂದ, ಇಲ್ಲಿ, ನಮ್ಮ ದೇಶದ ಸ್ವಾಭಿಮಾನದ ದ್ಯೋತಕವಾದ ರಾಷ್ಟ್ರಧ್ವಜವನ್ನು ಹಾರಿಸಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮೈದಾನ ಭಾರತದ ಅವಿಭಾಜ್ಯ ಅಂಗವಾಗಿದೆಯೋ ಇಲ್ಲವೋ ಎನ್ನುವ ಸಂಶಯ ಹುಟ್ಟುವಂತಹ ಸ್ಥಿತಿ ಇತ್ತು. ಇಂತಹ ವಿಷಯ ಕಾಲಘಟ್ಟದಲ್ಲಿ ಅನೇಕ ರಾಷ್ಟ್ರಾಭಿಮಾನಿ ನಾಗರಿಕರು ತಮ್ಮ ಜೀವದ ಹಂಗು ತೊರೆದು ಹೋರಾಡಿದರು. 15 ಆಗಸ್ಟ್ 1994ರಂದು ಹೋರಾಟ ತಾರಕಕ್ಕೇರಿದಾಗ ಪೊಲೀಸರ ಗುಂಟೇಟಿಗೆ ಆರು ರಾಷ್ಟ್ರಾಭಿಮಾನಿಗಳು ಹುತಾತ್ಮರಾದರು. ಇಂಥವರ ಧೀರೋದಾತ್ತ ತ್ಯಾಗದಿಂದಲೇ ಇಂದು ಪಾಲಿಕೆಯ ಮೈದಾನ ತನ್ನ ಸಂಕೋಲೆಗಳನ್ನು ಕಳೆದುಕೊಂಡು ಮತ್ತೆ ಪಾಲಿಕೆಯ ಕೈವಶವಾಗಿದೆ. ಪಾಲಿಕೆಯ ವತಿಯಿಂದಲೇ ಧ್ವಜಾ ರೋಹಣಕ್ಕೆ ತಯಾರಾಗಿ ನಿಂತಿದೆ.
ಈ ಸಂದರ್ಭದಲ್ಲಿ ಈ ಹುತಾತ್ಮರನ್ನು ನೆನೆಯುವುದು ಹಾಗೂ ಅವರ ಚಿರಂತನ ನೆನಪಿಗಾಗಿ ಸ್ಮಾರಕ ನಿರ್ಮಿಸುವುದರ ಬಗ್ಗೆ ಚಿಂತಿಸುವುದು ಅತ್ಯಂತ ಕಾಲೋಚಿತ ಎನಿಸುತ್ತದೆ. ಆದ್ದರಿಂದ ಪಾಲಿಕೆಯ ಮೈದಾನವನ್ನು ಸ್ವತಂತ್ರಗೊಳಿಸುವುದಕ್ಕೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಹುತಾತ್ಮರ ಚಿರಸ್ಮರಣೆಗಾಗಿ, ಈಗ ಈದ್ಗಾ ಮೈದಾನ' ಎಂದು ಕರೆಯಲಾಗುತ್ತಿರುವ ಪಾಲಿಕೆಯ ಮೈದಾನವನ್ನು ಇನ್ನುಮುಂದೆ ಎಲ್ಲರೂ ಹುತಾತ್ಮ ಮೈದಾನ ಎಂದು ಸಂಬೋಧಿಸಬೇಕು.
ಈಗಿರುವ ಅಕ್ರಮ ಕಟ್ಟಡಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿದ ಬಳಿಕ ಆ ಸ್ಥಳದಲ್ಲಿ ಒಂದು ಸುಂದರವಾದ ಅರ್ಥಪೂರ್ಣವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸಬೇಕು. ಧಾರವಾಡದಲ್ಲಿ ಕಾರ್ಗಿಲ್ ಸ್ತೂಪದ ಮಾದರಿಯಲ್ಲಿ, ಈ ಸ್ಮಾರಕದ ಸುತ್ತ ಒಂದು ಚಿಕ್ಕ ಉಪವನವನ್ನು ನಿರ್ಮಿಸಬೇಕು. ಹುತಾತ್ಮರಾದವರ ಪುತ್ಥಳಿಗಳನ್ನು ಇಲ್ಲಿ ಸ್ಥಾಪಿಸಬೇಕು. ಇದಲ್ಲದೇ ನ್ಯಾಯಾಲಯದ ಅಭಿಪ್ರಾಯದಂತೆ ಈ ಮೈದಾನದಲ್ಲಿ ಒಂದು ಸುಂದರ ಉಪವನವನ್ನು ಅಭಿವೃದ್ಧಿಪಡಿಸಿ ಅದಕ್ಕೆ ಹುತಾತ್ಮ ಸ್ಮಾರಕ ಉಪವನ' ಎಂದು ಹೆಸರಿಡಬೇಕು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications