ವಾಟಾಳ್ ನಾಗರಾಜ್, ನಾರಾಯಣಗೌಡ ಬಂಧನ
ವಾಟಾಳ್
ನಾಗರಾಜ್
ಬಂಧನ
ತಿರುವಳ್ಳುವರ್
ಪ್ರತಿಮೆ
ಅನಾವರಣ
ಸಂಬಂಧ
ಸುದ್ದಿಗೋಷ್ಠಿ
ಮುಗಿಸಿಕೊಂಡು
ಹೊರಬರುತ್ತಿದ್ದಾಗ
ಹಾಸನದ
ಚನ್ನರಾಯಪಟ್ಟಣ
ಪೊಲೀಸರು
ಕನ್ನಡ
ಚಳುವಳಿ
ವಾಟಾಳ್
ಪಕ್ಷದ
ವಾಟಾಳ್
ನಾಗರಾಜ್
ಅವರನ್ನು
ಬಂಧಿಸಿದ್ದಾರೆ.
ಮುನ್ನೆಚ್ಚರಿಕೆ
ಕ್ರಮವಾಗಿ
ಅವರನ್ನು
ಬಂಧಿಸಿರುವುದಾಗಿ
ಪೊಲೀಸರು
ತಿಳಿಸಿದ್ದಾರೆ.
ವಾಟಾಳ್
ನಾಗರಾಜ್
ಅವರನ್ನು
ಬೆಂಗಳೂರಿಗೆ
ಕರೆತರಲಾಗುತ್ತಿದೆ.
ತುಮಕೂರು
ರಸ್ತೆ,
ಕೆಆರ್
ವೃತ್ತದಲ್ಲಿ
ಪ್ರತಿಭಟನೆ
ನಾರಾಯಣಗೌಡ
ಅವರ
ಬಂಧನವನ್ನು
ವಿರೋಧಿಸಿ
ಬೆಂಗಳೂರು
ತುಮಕೂರು
ರಸ್ತೆಯಲ್ಲಿ
ಶನಿವಾರ
ಕರವೇ
ಕಾರ್ಯಕರ್ತರು
ಪ್ರತಿಭಟನೆ
ನಡೆಸಿದರು.
ಇದರಿಂದ
ಜಿಂದಾಲ್
ಬಳಿ
ವಾಹನಗಳ
ಸಂಚಾರಕ್ಕೆ
ವ್ಯತ್ಯಯ
ಉಂಟಾಯಿತು.
ಮೈಸೂರಿನ ಕೆ.ಆರ್ ವೃತ್ತದಲ್ಲೂ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು. ತಕ್ಷಣ ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು. ಸರಕಾರದ, ಯಡಿಯೂರಪ್ಪ ಅವರ ವಿರುದ್ಧವಾಗಿ ಘೋಷಣೆಗಳನ್ನು ಕೂಗಿದರು. ಈ ಸಂಬಂಧ ದೇವರಾಜ್ ಪೊಲೀಸ್ ಠಾಣೆ ಪೊಲೀಸರು 50ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ತಮಿಳು ದಾರ್ಶನಿಕ ಕವಿ ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿಸಿ ಯಾರೇ ಆಗಲಿ ಬಂದ್, ಪ್ರತಿಭಟನೆ ಹಾಗೂ ರ್ಯಾಲಿ ನಡೆಸಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಪ್ರತಿಮೆ ಅನಾವರಣಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕನ್ನಡ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ವಜಾಗೊಳಿಸಿದೆ.
ಪ್ರತಿಮೆ ಅನಾವರಣ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯಾಚರಣೆಯನ್ನು ಪೊಲೀಸರು ಶುಕ್ರವಾರ ರಾತ್ರಿಯಿಂದಲೇ ಆರಂಭಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)