ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರಕ್ಕೂ ಕೆಎಂಎಫ್ ಹಾಲು : ರೆಡ್ಡಿ
ಕೆಎಂಎಫ್ ಈಗ ವಾರ್ಷಿಕ 3315 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಇದನ್ನು ಮೂವತ್ತು ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸುಮಾರು 45 ಲಕ್ಷ ಮಂದಿ ಹೈನೋದ್ಯಮದಲ್ಲಿ ತೊಡಗಿದ್ದಾರೆ. ಇನ್ನೂ ಹೆಚ್ಚಿನ ಮಂದಿಯನ್ನು ಈ ಉದ್ಯಮದಲ್ಲಿ ತೊಡಗಿಸುವಂತೆ ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ಹೇಳಿಕೆ ನೀಡಿದ್ದಾರೆ.
ಕೆಎಂಎಫ್ ತುಪ್ಪ ಅತ್ಯುತ್ತಮವಾಗಿದೆ. ತಿರುಪತಿ ದೇವಾಲಯಕ್ಕೆ ಲಡ್ಡು ತಯಾರಿಸಲು ಈ ತುಪ್ಪವನ್ನೇ ಬಳಸಲಾಗುತ್ತಿದೆ. ಇದರಿಂದ ತಯಾರಿಸಿದ ಲಾಡು ರುಚಿಕರವಾಗಿರುತ್ತದೆ. ಟಿಟಿಡಿ ಆಡಳಿತ ಮಂಡಳಿ ಕೂಡ ಇದೇ ಅಭಿಪ್ರಾಯ ಹೊಂದಿದೆ ಮತ್ತು ಹೆಚ್ಚಿಗೆ ತರಿಸುಕೊಳ್ಳುವಂತೆ ಆಡಳಿತ ಮಂಡಳಿಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
bjp ಬಿಜೆಪಿ ಆಂಧ್ರ ಪ್ರದೇಶ ಬಳ್ಳಾರಿ hd revanna ಕೆಎಂಎಫ್ milk kmf ಹಾಲು ಎಚ್ ಡಿ ರೇವಣ್ಣ somashekar reddy ಸೋಮಶೇಖರರೆಡ್ಡಿ
Story first published: Monday, August 3, 2009, 10:55 [IST]