ಸೆಲ್ವರಸ ಪದ್ಮನಾಥನ್ ಎಲ್ಟಿಟಿಇ ಹೊಸ ದಂಡನಾಯಕ

ಪ್ರತ್ಯೇಕ ತಮಿಳುರಾಷ್ಟ್ರ ಬೇಡಿಕೆಯನ್ನು ಮುಂದುವರಿಸುವುದಾಗಿ, ಅಲ್ಲದೆ ತಮ್ಮ ಸಂಘಟನೆ ಹೊಸ ತಂತ್ರಗಾರಿಕೆಯೊಂದಿಗೆ ಸಜ್ಜಾಗಿದೆ ಎಂದು 54 ವರ್ಷದ ಸೆಲ್ವರಸ ಹೇಳಿದ್ದಾರೆ. ನಮ್ಮ ಪ್ರತ್ಯೇಕ ರಾಷ್ಟ್ರದ ಹೋರಾಟಕ್ಕೆ ಪದ್ಮನಾಭನ್ ಎಂದೆಂದಿಗೂ ನಮ್ಮ ನಾಯಕ ಎಂದು ಲಂಕಾ ತಮಿಳರು ಹೇಳಿಕೆ ನೀಡಿದ್ದಾರೆ. ಈತನ ಆಯ್ಕೆ ಬಗ್ಗೆ ಸಂಘಟನೆಯಲ್ಲಿ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಎಲ್ಟಿಟಿಇ ಗುಪ್ತವಾದ ಸ್ಥಳವೊಂದರಿಂದ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದೆ.
ಸೆಲ್ವರಸ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ರೂವಾರಿಯೆನ್ನಲಾಗಿದ್ದು, ಶ್ರೀಲಂಕಾ ಸರಕಾರ ಕೂಡ ಈತ ಸಿಕ್ಕರೆ ತಮಗೆ ಒಪ್ಪಿಸಬೇಕೆಂದು ಹಲವಾರು ದೇಶಗಳಿಗೆ ಮನವಿ ಮಾಡಿಕೊಂಡಿದೆ. ಸಿಬಿಐ ಪಟ್ಟಿಯಲ್ಲಿ ಕೂಡ ಈತನ ಹೆಸರಿದೆ.
(ಏಜನ್ಸೀಸ್)












Click it and Unblock the Notifications