Get Updates
Get notified of breaking news, exclusive insights, and must-see stories!

ಸೇಲಂನಲ್ಲಿ ಮತ್ತೆ ಕಾಡುತ್ತಿರುವ ವೀರಪ್ಪನ್ ನೆನಪು

ಸೇಲಂ,ಆ.19:ದಂತಚೋರ, ಕಾಡುಗಳ್ಳ ವೀರಪ್ಪನ್‌ ಪೊಲೀಸರ ಗುಂಡಿಗೆ ಬಲಿಯಾಗಿ ನಾಲ್ಕು ವರ್ಷಗಳೇ ಸರಿದು ಹೋಗಿವೆ. ಆದರೂ ಆತನ ಬಗೆಗೆ ಜನರಿಗಿದ್ದ ಕುತೂಹಲ ಮಾತ್ರ ಇನ್ನೂ ತಣ್ಣಗಾಗಿಲ್ಲ ಎಂಬ ವಿಚಾರ ತಮಿಳುನಾಡಿನ ಸೇಲಂನಲ್ಲಿ ಏರ್ಪಡಿಸಿರುವ ವೀರಪ್ಪನ್‌ಗೆ ಸಂಬಂಧಿಸಿದ ವಸ್ತು ಪ್ರದರ್ಶನ ನೋಡಿದರೆ ಸ್ಪಷ್ಟವಾಗುತ್ತದೆ.

ವೀರಪ್ಪನ್‌ ಬಳಸುತ್ತಿದ್ದ ಆಯುಧಗಳು,ಬಟ್ಟೆ,ರೇಡಿಯೋ,ನಕ್ಷೆಗಳು ಹಾಗೂ ಔಷಧಿಗಳು ವೀಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಪ್ರದರ್ಶನದಲ್ಲಿ ಇಟ್ಟಿರುವ ರಕ್ತದ ಒತ್ತಡವನ್ನು ಅಳೆಯುವ ಸಾಧನವಂತೂ ಪ್ರದರ್ಶನದ ಕೇಂದ್ರ ಬಿಂದು ಎಂತಲೇ ಹೇಳಬೇಕು.

ವೀರಪ್ಪನ್‌ಗೆ ಸಂಬಂಧಿಸಿದ ಇಷ್ಟೆಲ್ಲಾ ವಸ್ತುಗಳನ್ನು ಪ್ರದರ್ಶನದಲ್ಲಿ ನೋಡುತ್ತಿದ್ದರೆ ನಮಗೆ ಆಶ್ಚರ್ಯವಾಗುತ್ತದೆ. ವೀರಪ್ಪನ್ ಬಗೆಗಿನ ಆಸಕ್ತಿಯನ್ನು ಈ ಪ್ರದರ್ಶನ ತಣಿಸುತ್ತಿದೆ ಎನ್ನುತ್ತಾರೆ ವೀಕ್ಷಕರೊಬ್ಬರು. 42 ಮಂದಿ ಪೊಲೀಸರು ಸೇರಿದಂತೆ ಒಟ್ಟು 130 ಮಂದಿ ಹಾಗೂ 2,000 ಆನೆಗಳು ವೀರಪ್ಪನ್ ಗುಂಡಿಗೆ ಬಲಿಯಾಗಿದ್ದವು.

ಆಂಬುಲೆನ್ಸ್‌ನಲ್ಲಿದ್ದ ಕಾಡುಗಳ್ಳ ವೀರಪ್ಪನ್‍ನನ್ನು ವಿಶೇಷ ಕಾರ್ಯಪಡೆ ಸುತ್ತುವರೆದು ಮಟ್ಟಹಾಕಿದ 'ಆಪರೇಷನ್ ಕಕೂನ್'ನ ಛಾಯಾಚಿತ್ರಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ. ಇಲ್ಲಿನ ವಸ್ತು ಪ್ರದರ್ಶನ ನೋಡಿದರೆ,ವೀರಪ್ಪನ್ ಬಳಿ ಹೇಳಿಕೊಳ್ಳ್ಳುವಂತಹ ಅತ್ಯಾಧುನಿಕ ಆಯುಧಗಳಿಲ್ಲದಿದ್ದರೂ ಹೇಗೆ ಈತ ಇಷ್ಟು ವರ್ಷ ಸರ್ಕಾರಗಳನ್ನೇ ನಡುಗಿಸಿದ ಎಂಬುದುಬರಿ ಜನಸಾಮಾನ್ಯರನ್ನಷ್ಟೇ ಅಲ್ಲ ಪತ್ರಕರ್ತರನ್ನ್ನು ಚಕಿತಗೊಳಿಸುತ್ತಿದೆ.

(ಏಜೆನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+