Get Updates
Get notified of breaking news, exclusive insights, and must-see stories!

ಹೊಗೇನಕಲ್ ತಮಿಳುನಾಡಿನಅವಿಭಾಜ್ಯ ಅಂಗ :ತ್ರಿಪಾಠಿ

ಚೆನ್ನೈ, ಆ. 19 : ಹೊಗೇನಕಲ್ ವಿವಾದ ಕಗ್ಗಂಟಾಗಿರುವ ಬೆನ್ನಲ್ಲೇ ಹೊಗೇನಕಲ್ ಜಲಾಶಯ ತಮಿಳುನಾಡಿನ ಅವಿಭಾಜ್ಯ ಅಂಗ ಎಂದು ತಮಿಳುನಾಡು ಸರ್ಕಾರ ಮುಖ್ಯ ಕಾರ್ಯದರ್ಶಿ ಎಲ್.ಕೆ. ತ್ರಿಪಾಠಿ ಹೇಳಿದ್ದಾರೆ.

ನಗರದ ಜಪಾನ್ ರಾಯಭಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಛಾಯಾಚಿತ್ರ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಜಪಾನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ 1334 ಕೋಟಿ ರುಪಾಯಿಗಳ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳ ಜನರು ಫ್ಲೋರೈಡ್ ಮಿಶ್ರಿತ ನೀರನ್ನು ಕುಡಿಯುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಫ್ಲೋರೈಡ್ ನೀರು ಮನುಷ್ಯರ ದೇಹಕ್ಕೆ ಹಾನಿಕರವಾಗಿದ್ದು, ಇನ್ನು ಕೆಲವೆ ವರ್ಷಗಳಲ್ಲಿ ಈ ಭಾಗದ ಜನರಿಗೆ ಕಾವೇರಿ ನೀರು ಕುಡಿಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಒಟ್ಟು 1.4 ಟಿಎಂಸಿ ನೀರನ್ನು ಜಲಾಶಯದಲ್ಲಿ ನಿಲ್ಲಿಸಲಾಗುವುದು. ಇದರಿಂದ ಸುಮಾರು 30 ಲಕ್ಷ ಜನರು ಇದರ ಲಾಭವಾಗಲಿದೆ ಎಂದು ತ್ರಿಪಾಠಿ ಸ್ಪಷ್ಟಪಡಿಸಿದರು.

ಹೊಗೇನಕಲ್ ತಮಿಳಿನಾಡಿಗೆ ಸಂಬಂಧಿಸಿದ್ದು ಎನ್ನುವ ವಿಷಯ ಕರ್ನಾಟಕಕ್ಕೆ ಗೊತ್ತಿದ್ದರೂ ಕೂಡಾ ಅನಗತ್ಯ ತಕರಾರು ಮಾಡತೊಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹೊಗೇನಕಲ್ ಜಲಾಶಯ ತಮಿಳುನಾಡಿಗೆ ಸೇರಿದ್ದು ಎನ್ನುವ ಸ್ಪಷ್ಟವಾದ ದಾಖಲೆಯನ್ನು ನೀಡಲು ನಾವು ಸಿದ್ಧ ಎಂದು ಹೇಳಿದರು. ಕೆಲ ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳಿಂದ ವಿವಾದ ಮತ್ತಷ್ಟು ಕಗ್ಗಂಟಾಗಿದೆ. ಇದರಿಂದಾಗಿ ಯೋಜನೆಯ ಹಿನ್ನೆಡೆ ಕಾರಣವಾಗಿದೆ ಎಂದು ಅರೋಪಿಸಿದರು. ಜಪಾನ್ ಸಹಯೋಗದಲ್ಲಿ ಆರಂಭಿಸಲಾಗಿರುವ ಯೋಜನೆಯನ್ನು ಯಾವ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಅವಿಭಾಜ್ಯ ಅಂಗವಾಗಿರುವ ಹೊಗೇನಕಲ್ ಯೋಜನೆಯನ್ನು ಜಾರಿಗೊಳಿಸುವುದು ಖಚಿತ ಎಂದು ತ್ರಿಪಾಠಿ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

'ಹೊಗೆ' ಜಂಟಿ ಸಮೀಕ್ಷೆಗೆ ಯಡಿಯೂರಪ್ಪ ಆಗ್ರಹ
ಹೊಗೆ ಹಗೆ ನಿಲ್ಲಿಸಲು ದೆಹಲಿ ತನಕ ದೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+