ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.20ರಂದು ಬೆಂಗಳೂರು ರಸ್ತೆ ಆಟೋ ಮುಕ್ತ

By Staff
|
Google Oneindia Kannada News

ಬೆಂಗಳೂರು, ಆ. 19 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಆಗಸ್ಟ್ 20ರಂದು ಬೆಂಗಳೂರು ಆಟೋ ಚಾಲಕರ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ.

ಆಟೋ ಬಂದ್ ಕರೆ ನೀಡಿರುವುದರಿಂದ ನಗರದಲ್ಲಿ ಸಂಚರಿಸುವ ಸುಮಾರು 80 ಸಾವಿರ ಪರವಾನಿಗೆ ಪಡೆದಿರುವ ಹಾಗೂ 20 ಸಾವಿರ ಪರವಾನಿಗೆ ಪಡೆಯದಿರುವ ಅಟೋಗಳು ನಾಳೆ ರಸ್ತೆಗಿಳಿಯುವುದಿಲ್ಲ ಎಂದು ಅಟೋ ಚಾಲಕರ ಸಂಘ ಸ್ಪಷ್ಟಪಡಿಸಿದೆ.

ಸಂಚಾರಿ ಪೊಲೀಸರ ಕಿರುಕುಳ, ಚಾಲಕರಿಗೆ ಜೀವನಾಂಶ, ಇಎಸ್ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಟೋ ಚಾಲಕರು ಮುಷ್ಕರ ನಡೆಸಲಿದ್ದಾರೆ. ಬೆಂಗಳೂರಿನ ಆಟೋ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ಜೀವನಮಟ್ಟ ಸುಧಾರಿಸಬೇಕು. ಎಷ್ಟು ದುಡಿದರೂ ಕಷ್ಟ ತಪ್ಪುತ್ತಿಲ್ಲ ಎಂಬುದು ಆಟೋ ಚಾಲಕರ ಅಳಲು.

ಆಟೋ ಚಾಲಕರ ಪ್ರಮುಖ ಬೇಡಿಕೆಗಳು

* ಕಿರುಕುಳ ನೀಡದಂತೆ ಸಂಚಾರಿ ಪೊಲೀಸರ ಮೇಲೆ ನಿಯಂತ್ರಣ.
* ವಶಪಡಿಸಿಕೊಂಡಿರುವ 40 ಸಾವಿರ ಎಕರೆ ಭೂಮಿಯಲ್ಲಿ ಆಟೋ ಚಾಲಕರಿಗೆ ವಸತಿ ಸಮುಚ್ಚಯ ನಿರ್ಮಾಣ.
* ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ಸೌಲಭ್ಯ.
* ಪರವಾನಗಿ ಇರುವ ಆಟೋ ಚಾಲಕರಿಗೆ ಜೀವನಾಂಶ.
* ಚಾಲಕರ ಕುಟುಂಬಕ್ಕೆ ಇಎಸ್ಐ ಸೌಲಭ್ಯ.

ಆಟೋ ಚಾಲಕರ ಒಂದು ದಿನದ ಬಂದ್ ಹಿನ್ನೆಲೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಅಟೋಗಳು ರಸ್ತೆಗಿಳಿಯುವುದಿಲ್ಲ. ಇದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸ್ವಾಭಾವಿಕವಾಗಿ ಕಡಿಮೆಯಾಗಲಿದೆ. ಆಟೋ ಇಲ್ಲದಿರುವುದು ಸಾರ್ವಜನಿಕರು ತೊಂದರೆ ಅನುಭವಿಸುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X