ಮುಷರಫ್ ರನ್ನು ಜೀವ ಸಹಿತ ಬಿಡೆವು :ಅಲ್ ಖೈದಾ
ಲಂಡನ್, ಆ. 19 : ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಯಲ್ಲಿ ಭಯೋತ್ಪಾದನೆಯ ದಮನದ ಹೆಸರಿನಲ್ಲಿ ನೂರಾರು ಅಮಾಯಕ ಜನರ ಪ್ರಾಣ ತೆಗೆದುಕೊಂಡಿದ್ದ ಸರ್ವಾಧಿಕಾರಿ ಮುಷರಫ್ ಸೋಮವಾರ ರಾಜೀನಾಮೆ ನೀಡಿರುವುದು ಅಲ್ ಖೈದಾ ಮತ್ತು ತಾಲಿಬಾನ್ ಉಗ್ರರಲ್ಲಿ ಹಬ್ಬ ವಾತಾವರಣ ಉಂಟು ಮಾಡಿದೆ. ಈ ಮಧ್ಯೆ ಲಾಲ್ ಮಸೀದಿ ಪ್ರಕರಣದಲ್ಲಿ ಅನೇಕ ಜನರ ಸಾವಿಗೆ ಕಾರಣರಾದ ಜನರಲ್ ಮುಷರಫ್ ಅವರನ್ನು ಕೊಲೆ ಮಾಡುವುದಾಗಿ ಮುಸ್ಲಿಂ ಮೂಲಭೂತವಾದಿಗಳು ಘೋಷಿಸಿದ್ದಾರೆ.
ಸೋಮವಾರ ಪಾಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವುದು ದೇಶದ ಬಹುಭಾಗದ ಜನರಿಗೆ ಸಂತಸ ಉಂಟು ಮಾಡಿದೆ. ಮುಷರಫ್ ರಾಜೀನಾಮೆ ನೀಡಿದ ಕೂಡಲೇ ಪಾಕ್ ಪ್ರಧಾನಮಂತ್ರಿ ಯೂಸೆಫ್ ರಜಾ ಗಿಲಾನಿ ಹಾಗೂ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ತೀವ್ರ ಸಂತೋಷ ವ್ಯಕ್ತಪಡಿಸಿ, ಮುಷರಫ್ ರಾಜೀನಾಮೆ ದೇಶಕ್ಕೆ ಸಂದ ಜಯ, ಪ್ರಜಾಪ್ರಭುತ್ವಕ್ಕೆ ಸಿಕ್ಕಿ ವಿಜಯ ಎಂದು ಬಣ್ಣಿಸಿದ್ದರು. ಇದರ ಜತೆಗೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಯಲ್ಲಿ ಅಲ್ಲಿಯ ಜನರು ಮುಷರಫ್ ಅಧಿಕಾರದಿಂದ ಕೆಳಗಿಳಿದ ವಿಷಯ ತಿಳಿಯುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದರು. ಕೇಕೆ ಹಾಕಿ ಬೀದಿ ತುಂಬೆಲ್ಲಾ ಸಹಿ ಹಂಚಿ ಪಟಾಕಿ ಸುಟ್ಟರು. ಇದಕ್ಕೆ ಕಾರಣವೆಂದರೆ ಜನರಲ್ ಮುಷರಫ್ ಭಯೋತ್ಪಾದನೆ ಹೆಸರಿನಲ್ಲಿ ಗಡಿ ಭಾಗದ ಅನೇಕ ಅಮಾಯಕರ ಸಾವಿಗೆ ಕಾರಣರಾಗಿದ್ದರು. ಅಮೆರಿಕದೊಂದಿಗೆ ಕೈಜೋಡಿಸಿ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದರು.
ಇದರ ಜತೆಗೆ ನೂರಾರು ಮುಸ್ಲಿಂ ಕೊಲೆ ಮಾಡಿರುವ ಮುಷರಫ್ ಅವರನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಮೂಲಭೂತವಾದಿಗಳು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದೊಂದಿಗೆ ಸೇರಿಕೊಂಡು ಮುಸ್ಲಿಂ ರಾಷ್ಟ್ರಗಳಿಗೆ ಅನೇಕ ತೊಂದರೆಗಳನ್ನು ನೀಡಿದ್ದಾರೆ. ಹಾಗೂ ಲಾಲ್ ಮಸೀದಿಯಲ್ಲಿ ಅಡಗಿದ್ದ ಮೌಲ್ವಿಗಳನ್ನು ಸೈನಿಕ ನೆರವಿನ ಮೂಲಕ ಅವರನ್ನು ಹತ್ಯೆ ಮಾಡಿರುವುದು ಇಡೀ ಜನಾಂಗಕ್ಕೆ ನೋವಾಗಿದೆ. ಆದ್ದರಿಂದ ಅವರು ಎಲ್ಲೆ ಇದ್ದರೂ ಅವರನ್ನು ಜೀವಸಹಿತ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲಂಡನ್ ನಲ್ಲಿ ಆಶ್ರಯ ಪಡೆಯಲಿರುವ ಮುಷರಫ್
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications