ಬೆಂಗಳೂರಲ್ಲಿ ತಾಂಝಾನಿಯಾದ ಅಧ್ಯಕ್ಷ ಬೆಂಜಮಿನ್
ಬೆಂಗಳೂರು : ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಉದ್ದೇಶದೊಂದಿಗೆ ಭಾರತ ಭೇಟಿ ಕೈಗೊಂಡಿರುವ ತಾಂಝಾನಿಯಾದ ಅಧ್ಯಕ್ಷ ಬೆಂಜಮಿನ್ ಡಬ್ಲ್ಯೂ. ಮಕಾಪ ಅವರು ಮಂಗಳವಾರ (ಡಿ.17) ಬೆಂಗಳೂರಿಗೆ ಆಗಮಿಸಿದರು.
ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಸಿದ್ಧವಾದ ಬೆಂಗಳೂರಿನಲ್ಲಿನ ತಂತ್ರಜ್ಞಾನದ ಬೆಳವಣಿಗೆಯನ್ನು , ವಿಶೇಷವಾಗಿ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯನ್ನು ವೀಕ್ಷಿಸಲು ಕಾತರನಾಗಿದ್ದೇನೆ. ಇಲ್ಲಿನ ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಶಿಕ್ಷಣವನ್ನು ತಾಂಝಾನಿಯದಲ್ಲಿ ಬಳಸಿಕೊಳ್ಳುವ ಬಗೆಗೂ ಪರಿಶೀಲಿಸುತ್ತಿರುವುದಾಗಿ ಬೆಂಜಮಿನ್ ಹೇಳಿದರು.
ಮಾಹಿತಿ ತಂತ್ರಜ್ಞಾನದ ವಿನಿಮಯಕ್ಕೆ ತಮ್ಮ ಮುಂದಿನ ಭೇಟಿಯ ವೇಳೆಗೆ ವೇದಿಕೆ ಸಿದ್ಧಗೊಳ್ಳುವುದಾಗಿ ಬೆಂಜಮಿನ್ ಆಶಾಭಾವನೆ ವ್ಯಕ್ತಪಡಿಸಿದರು. ತಮ್ಮ ಮಂಗಳವಾರದ ಕಾರ್ಯಕ್ರಮದಲ್ಲಿ - ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಹಾಗೂ ಇನ್ಫೋಸಿಸ್ ಸಂಸ್ಥೆಗಳಿಗೆ ಅವರು ಭೇಟಿ ನೀಡಿದರು.
ವಿಜ್ಞಾನ ಶಿಕ್ಷಣ ಕೇಂದ್ರ ಹಾಗೂ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ಗೆ ಭೇಟಿ ಮತ್ತು ತಾಂಝಾನಿಯ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ- ಇವು ಬೆಂಜಮಿನ್ ಅವರ ಬುಧವಾರದ ಕಾರ್ಯಕ್ರಮಗಳು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ